ETV Bharat / bharat

ಕೋವಿಡ್​ ಕಂಟಕ: ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್​ಸೈಟ್ ಆರಂಭ - corona latest news

ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿರುವ ಮಣಿಪುರಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿರೆನ್​ ಸಿಂಗ್​ ಅವರು ವೆಬ್​ಸೈಟ್​​ವೊಂದಕ್ಕೆ ಚಾಲನೆ ನೀಡಿದ್ದಾರೆ. ಈ ಸೈಟ್​ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ಸಹ ನೀಡಬಹುದು.

ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್​ಸೈಟ್​ ಸಹಾಯ
ವಿವಿಧೆಡೆ ಸಿಲುಕಿರುವ ಮಣಿಪುರಿ ಜನರ ರಕ್ಷಣೆಗೆ ವೆಬ್​ಸೈಟ್​ ಸಹಾಯ
author img

By

Published : Mar 30, 2020, 7:46 AM IST

ಮಣಿಪುರ: ಕೋವಿಡ್​ 19 ವಿರುದ್ಧ ಇಡೀ ದೇಶವೇ ಸಮರ ಸಾರಿದ್ದು ರಾಜ್ಯದ ಆಯಾ ಸರ್ಕಾರಗಳು ತಮ್ಮ ಪ್ರಜೆಗಳ ರಕ್ಷಣೆಗೆ ಭಾರೀ ಕಾರ್ಯೋನ್ಮುಖವಾಗಿವೆ. ಈ ಹಿನ್ನೆಲೆ ದೇಶದ ಇತರ ಭಾಗಗಳಲ್ಲಿ ಸಿಲುಕಿರುವ ಮಣಿಪುರದ ಪ್ರಜೆಗಳ ರಕ್ಷಣೆಗೆ ಅಲ್ಲಿನ ಸರ್ಕಾರ ವೆಬ್​ಸೈಟ್​ ಒಂದನ್ನು ಆರಂಭಮಾಡಿದೆ.

ಮುಖ್ಯಮಂತ್ರಿ ಎನ್ ಬಿರೆನ್‌ಸಿಂಗ್ ಭಾನುವಾರ ಈ ವೆಬ್​ಸೈಟ್​ಗೆ ಚಾಲನೆ ನೀಡಿದ್ದಾರೆ. ಇನ್ನು ಈ ವೆಬ್​ಸೈಟ್​ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಬಹುದಾಗಿದೆ. ಹಾಗೆಯೇ ಇಲ್ಲಿಗೆ ಬಂದ ಹಣವನ್ನು ಅಗತ್ಯ ಇರುವವರಿಗೆ ನೀಡಲು ಈ ವೆಬ್​ಸೈಟ್​ ಸಹಕಾರಿಯಾಗಲಿದೆ.

ಈ ಕಷ್ಟದ ಸಮಯದಲ್ಲಿ ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ಮತ್ತು ಹಲವಾರು ತೊಂದರೆ ಎಎದುರಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರನ್ನು ತಲುಪುವುದು ಇದರ ಉದ್ದೇಶ ಎಂದು ಸಿಎಂ ಹೇಳಿದ್ದಾರೆ.

ಮಣಿಪುರ: ಕೋವಿಡ್​ 19 ವಿರುದ್ಧ ಇಡೀ ದೇಶವೇ ಸಮರ ಸಾರಿದ್ದು ರಾಜ್ಯದ ಆಯಾ ಸರ್ಕಾರಗಳು ತಮ್ಮ ಪ್ರಜೆಗಳ ರಕ್ಷಣೆಗೆ ಭಾರೀ ಕಾರ್ಯೋನ್ಮುಖವಾಗಿವೆ. ಈ ಹಿನ್ನೆಲೆ ದೇಶದ ಇತರ ಭಾಗಗಳಲ್ಲಿ ಸಿಲುಕಿರುವ ಮಣಿಪುರದ ಪ್ರಜೆಗಳ ರಕ್ಷಣೆಗೆ ಅಲ್ಲಿನ ಸರ್ಕಾರ ವೆಬ್​ಸೈಟ್​ ಒಂದನ್ನು ಆರಂಭಮಾಡಿದೆ.

ಮುಖ್ಯಮಂತ್ರಿ ಎನ್ ಬಿರೆನ್‌ಸಿಂಗ್ ಭಾನುವಾರ ಈ ವೆಬ್​ಸೈಟ್​ಗೆ ಚಾಲನೆ ನೀಡಿದ್ದಾರೆ. ಇನ್ನು ಈ ವೆಬ್​ಸೈಟ್​ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಬಹುದಾಗಿದೆ. ಹಾಗೆಯೇ ಇಲ್ಲಿಗೆ ಬಂದ ಹಣವನ್ನು ಅಗತ್ಯ ಇರುವವರಿಗೆ ನೀಡಲು ಈ ವೆಬ್​ಸೈಟ್​ ಸಹಕಾರಿಯಾಗಲಿದೆ.

ಈ ಕಷ್ಟದ ಸಮಯದಲ್ಲಿ ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ಮತ್ತು ಹಲವಾರು ತೊಂದರೆ ಎಎದುರಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರನ್ನು ತಲುಪುವುದು ಇದರ ಉದ್ದೇಶ ಎಂದು ಸಿಎಂ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.