ETV Bharat / bharat

ಕೆಮ್ಮಿದ್ದಕ್ಕೆ ಕೊರೊನಾ ಸೋಂಕಿತನೆಂದು ದಾಳಿ ನಡೆಸಿದ ಜನ... ಗಲಾಟೆ ವೇಳೆ ಚರಂಡಿಗೆ ಬಿದ್ದು ವ್ಯಕ್ತಿ ಸಾವು!

author img

By

Published : Apr 24, 2020, 10:35 AM IST

ಕೊರೊನಾ ಸೋಂಕಿತ ಎಂಬ ಅನುಮಾನದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಚರಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾನೆ.

Man beaten on suspicion of being COVID-19
ಕೊರೊನಾ ಸೋಂಕಿತನೆಂದ ಜನರಿಂದ ಹಲ್ಲೆ

ಥಾಣೆ (ಮಹಾರಾಷ್ಟ್ರ): 34 ವರ್ಷದ ವ್ಯಕ್ತಿಯೊಬ್ಬನನ್ನು ಕೊರೊನಾ ಸೋಂಕಿತ ಎಂಬ ಅನುಮಾನದ ಮೇಲೆ ಜನರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚರಂಡಿಗೆ ಬಿದ್ದ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಣೇಶ್ ಗುಪ್ತಾ ಎಂಬುವರು ಲಾಕ್​ಡೌನ್​ ವೇಳೆ ಕೆಲವು ಅಗತ್ಯ ವಸ್ತುಗಳನ್ನು ತರಲು ಮನೆಯಿಂದ ಹೊರಬಂದಿದ್ದರು. ರಸ್ತೆಯಲ್ಲಿ ಪೊಲೀಸರು ಇರುವುದನ್ನು ಕಂಡು ಬೇರೆ ಮಾರ್ಗದ ಮೂಲಕ ತೆರಳಿದ್ದರು.

ಹೀಗೆ ಹೋಗುತ್ತಿರುವಾಗ ಕೆಮ್ಮಿದ್ದಕ್ಕೆ ವಾಕಿಂಗ್ ಹೋಗುತ್ತಿದ್ದ ಜನರು ಆತನ ಮೇಲೆ ಅನುಮಾನಗೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಚರಂಡಿಗೆ ಬಿದ್ದ ಗಣೇಶ್ ಗುಪ್ತಾ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಖಡಕ್‌ಪದ ಪೊಲೀಸರು ತಿಳಿಸಿದ್ದಾರೆ.

ಥಾಣೆ (ಮಹಾರಾಷ್ಟ್ರ): 34 ವರ್ಷದ ವ್ಯಕ್ತಿಯೊಬ್ಬನನ್ನು ಕೊರೊನಾ ಸೋಂಕಿತ ಎಂಬ ಅನುಮಾನದ ಮೇಲೆ ಜನರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚರಂಡಿಗೆ ಬಿದ್ದ ಆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಣೇಶ್ ಗುಪ್ತಾ ಎಂಬುವರು ಲಾಕ್​ಡೌನ್​ ವೇಳೆ ಕೆಲವು ಅಗತ್ಯ ವಸ್ತುಗಳನ್ನು ತರಲು ಮನೆಯಿಂದ ಹೊರಬಂದಿದ್ದರು. ರಸ್ತೆಯಲ್ಲಿ ಪೊಲೀಸರು ಇರುವುದನ್ನು ಕಂಡು ಬೇರೆ ಮಾರ್ಗದ ಮೂಲಕ ತೆರಳಿದ್ದರು.

ಹೀಗೆ ಹೋಗುತ್ತಿರುವಾಗ ಕೆಮ್ಮಿದ್ದಕ್ಕೆ ವಾಕಿಂಗ್ ಹೋಗುತ್ತಿದ್ದ ಜನರು ಆತನ ಮೇಲೆ ಅನುಮಾನಗೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಚರಂಡಿಗೆ ಬಿದ್ದ ಗಣೇಶ್ ಗುಪ್ತಾ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಖಡಕ್‌ಪದ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.