ETV Bharat / bharat

ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್​: ಸಸ್ಪೆಂಡ್​ ಆಗಿದ್ದ ಐಎಎಸ್​ ಅಧಿಕಾರಿ ಎಂ.ಶಿವಶಂಕರ್ ಬಂಧನ

author img

By

Published : Oct 28, 2020, 11:43 PM IST

ಕೇರಳ ಸರ್ಕಾರವನ್ನ ಬೆಚ್ಚಿ ಬೀಳಿಸಿರುವ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಅವರನ್ನ ಬಂಧನ ಮಾಡಲಾಗಿದೆ.

M Sivasankar arrested by ED
M Sivasankar arrested by ED

ತಿರುವನಂತಪುರಂ: ಕೇರಳ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪಿಣರಾಯಿ ವಿಜಯನ್‌ ಅವರ ಮಾಜಿ ಪ್ರಧಾನ ಕಾರ್ಯದರ್ಶಿ, ಹಾಗೂ ಅಮಾನತುಗೊಂಡಿರುವ ಐಎಎಸ್​ ಅಧಿಕಾರಿ ಎಂ. ಶಿವಶಂಕರ್​ ಅವರನ್ನ ಬಂಧನ ಮಾಡಲಾಗಿದೆ.

ಕೇರಳ ಹೈಕೋರ್ಟ್ ಮುಂಗಡ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಂ ಶಿವಶಂಕರ್​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧನ ಮಾಡಿದ್ದಾರೆ. ನಾಳೆ ಕೋರ್ಟ್​ಗೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೋಸ್ಕರ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

  • Enforcement Directorate arrests former Chief Secretary of the Kerala CMO M Sivasankar, in connection with the Kerala gold smuggling case. He will be produced the court tomorrow. https://t.co/770bF72mr3

    — ANI (@ANI) October 28, 2020 " class="align-text-top noRightClick twitterSection" data=" ">

ಕೇರಳದ ಗೋಲ್ಡ್​ ಸ್ಮಗ್ಲಿಂಗ್​ ಪ್ರಕರಣವನ್ನ ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಕಸ್ಟಮ್ಸ್​ ಇಲಾಖೆ ತನಿಖೆ ನಡೆಸುತ್ತಿದ್ದು, ಜುಲೈ 5ರಂದು ತಿರುವನಂತಪುರಂ ಏರ್​ಪೋರ್ಟ್​​ನಲ್ಲಿ 14.82 ಕೋಟಿ ರೂ. ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ನಿಕಟ ಸಂಬಂಧವಿದೆ ಎಂಬ ಆರೋಪದ ಮೇಲೆ ಎಂ ಶಿವಶಂಕರ್​​ ಅವರನ್ನ ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ಅನೇಕ ಸಲ ಪ್ರಶ್ನೆ ಮಾಡಿವೆ.

M Sivasankar arrested by ED
ಐಎಎಸ್​ ಅಧಿಕಾರಿ ಎಂ.ಶಿವಶಂಕರ್ ಬಂಧನ

ಅಕ್ಟೋಬರ್ 16 ರಂದು ಶಿವಶಂಕರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಇದಾದ ಬಳಿಕ ಎದೆನೋವಿನ ಕಾರಣ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ.

​2019ರಿಂದ ಇಲ್ಲಿಯವರೆಗೆ 200 ಕೆ.ಜಿಗೂ ಅಧಿಕ ಚಿನ್ನ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ.

ತಿರುವನಂತಪುರಂ: ಕೇರಳ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಪಿಣರಾಯಿ ವಿಜಯನ್‌ ಅವರ ಮಾಜಿ ಪ್ರಧಾನ ಕಾರ್ಯದರ್ಶಿ, ಹಾಗೂ ಅಮಾನತುಗೊಂಡಿರುವ ಐಎಎಸ್​ ಅಧಿಕಾರಿ ಎಂ. ಶಿವಶಂಕರ್​ ಅವರನ್ನ ಬಂಧನ ಮಾಡಲಾಗಿದೆ.

ಕೇರಳ ಹೈಕೋರ್ಟ್ ಮುಂಗಡ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಂ ಶಿವಶಂಕರ್​ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧನ ಮಾಡಿದ್ದಾರೆ. ನಾಳೆ ಕೋರ್ಟ್​ಗೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೋಸ್ಕರ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ.

  • Enforcement Directorate arrests former Chief Secretary of the Kerala CMO M Sivasankar, in connection with the Kerala gold smuggling case. He will be produced the court tomorrow. https://t.co/770bF72mr3

    — ANI (@ANI) October 28, 2020 " class="align-text-top noRightClick twitterSection" data=" ">

ಕೇರಳದ ಗೋಲ್ಡ್​ ಸ್ಮಗ್ಲಿಂಗ್​ ಪ್ರಕರಣವನ್ನ ಜಾರಿ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಕಸ್ಟಮ್ಸ್​ ಇಲಾಖೆ ತನಿಖೆ ನಡೆಸುತ್ತಿದ್ದು, ಜುಲೈ 5ರಂದು ತಿರುವನಂತಪುರಂ ಏರ್​ಪೋರ್ಟ್​​ನಲ್ಲಿ 14.82 ಕೋಟಿ ರೂ. ಮೌಲ್ಯದ ಚಿನ್ನವನ್ನ ವಶಕ್ಕೆ ಪಡೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ನಿಕಟ ಸಂಬಂಧವಿದೆ ಎಂಬ ಆರೋಪದ ಮೇಲೆ ಎಂ ಶಿವಶಂಕರ್​​ ಅವರನ್ನ ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ಅನೇಕ ಸಲ ಪ್ರಶ್ನೆ ಮಾಡಿವೆ.

M Sivasankar arrested by ED
ಐಎಎಸ್​ ಅಧಿಕಾರಿ ಎಂ.ಶಿವಶಂಕರ್ ಬಂಧನ

ಅಕ್ಟೋಬರ್ 16 ರಂದು ಶಿವಶಂಕರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ಇದಾದ ಬಳಿಕ ಎದೆನೋವಿನ ಕಾರಣ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರನ್ನ ಬಂಧನ ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿದೆ.

​2019ರಿಂದ ಇಲ್ಲಿಯವರೆಗೆ 200 ಕೆ.ಜಿಗೂ ಅಧಿಕ ಚಿನ್ನ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.