ETV Bharat / bharat

ಸಾಹಸಿ ಸೋಲ್ಜರ್‌ಗೆ ಸೆಲ್ಯೂಟ್‌.. ಮುಳುಗಿದ್ದವನ ಬದುಕಿಸಿದ ಸೇನಾ ಅಧಿಕಾರಿ! - ದೇಶ ರಕ್ಷಣೆ

ಕೇರಳದ ಕೊಚ್ಚಿನ ವೈಬಿನ್‌ ಬಂದರು ಬಳಿಯ ಹಿನ್ನೀರಿನ ಕಾಲುವೆಯೊಳಗೆ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಅದೇ ಟೈಮ್‌ಗೆ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್‌ ರಾಹುಲ್ ದಲಾಲ್‌ ಮುಳುಗುತ್ತಿದ್ದ ವ್ಯಕ್ತಿಯನ್ನ ಬದುಕಿಸಿದ್ದಾರೆ.

ಮುಳುಗಿದ್ದವನ ಬದುಕಿಸಿದ ಸೇನಾ ಅಧಿಕಾರಿ
author img

By

Published : Apr 9, 2019, 6:27 PM IST

ಕೊಚ್ಚಿ, (ಕೇರಳ): ಯೋಧರು ಗಡಿಯಲ್ಲಷ್ಟೇ ಎದೆಯೊಡ್ಡಿ ಹೋರಾಡಲ್ಲ. ದೇಶ ರಕ್ಷಣೆ ಜತೆ ಎಲ್ಲೇ ಪ್ರಕೃತಿ ವಿಕೋಪವಾದ್ರೂ ಅಮೂಲ್ಯ ಜೀವಗಳನ್ನ ಕಾಪಾಡಲು ಸನ್ನದ್ಧವಾಗಿರುತ್ತಾರೆ. ಡ್ಯೂಟಿ ಮೇಲಿದ್ದರೂ, ಇಲ್ಲದಿದ್ದರೂ ಸಂಕಷ್ಟಕ್ಕೆ ಸಿಲುಕಿದವರನ್ನ ಬದುಕಿಸುವ ಮಹತ್ಕಾರ್ಯ ಮರೆಯೋದಿಲ್ಲ. ಕೇರಳದ ಕೊಚ್ಚಿಯಲ್ಲೂ ಸೇನಾ ಅಧಿಕಾರಿಯೊಬ್ಬರು ಅದನ್ನ ನಿಜವಾಗಿಸಿದ್ದಾರೆ.

ಕೇರಳದ ಕೊಚ್ಚಿನ ವೈಬಿನ್‌ ಬಂದರು ಬಳಿಯ ಹಿನ್ನೀರಿನ ಕಾಲುವೆಯೊಳಗೆ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಅದೇ ಟೈಮ್‌ಗೆ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್‌ ರಾಹುಲ್ ದಲಾಲ್‌ ಮುಳುಗುತ್ತಿದ್ದ ವ್ಯಕ್ತಿಯನ್ನ ಬದುಕಿಸಿದ್ದಾರೆ.

indian-navys
ನೌಕಾ ದಳದ ಸೇನಾ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್
ಔರಂಗದಾಬಾದ್‌ನ ದಿಲೀಪ್‌ ಕುಮಾರ್‌ ಎಂಬುವರು ಸಮುದ್ರಕ್ಕಿಳಿದಿದ್ದರು. ಆದರೆ, ಅದೇನಾಯ್ತೋ ಏನೋ ಎಲ್ಲರೆದುರಿಗೆ ಇದ್ದಕ್ಕಿದ್ದಂತೆಯೇ ಮುಳುಗಿಬಿಟ್ಟಿದ್ದರು. ನೌಕಾದಳದ ಅಧಿಕಾರಿ ರಾಹುಲ್‌ ತಮ್ಮ ಪತ್ನಿ ಜತೆ ಕೊಚ್ಚಿನ್‌ಗೆ ರಜೆಗೆಂದು ತೆರಳಿದ್ದರು. ದಿಲೀಪ್ ಮುಳುಗಿದ್ದಾಗ ಎಲ್ಲರೂ ಬಾಯಿಬಾಯಿ ಬಡ್ಕೊಳ್ತಾಯಿದ್ದರು. ಆದರೆ, ರಾಹುಲ್‌ ಒಂದು ಕ್ಷಣವೂ ತಡ ಮಾಡದೇ ಸಮುದ್ರದೊಳಗೆ ಜಿಗಿದಿದ್ದರು. ಮುಳುಗುತ್ತಿದ್ದ ದಿಲೀಪ್‌ನ ಎತ್ಕೊಂಡು ಬಂದು ದಡಕ್ಕೆ ಹಾಕಿದ್ದರು.
navvy
ಮುಳುಗಿದ್ದವನ ಬದುಕಿಸಿದ ಸೇನಾ ಅಧಿಕಾರಿ

ನೀರು ಕುಡಿದಿದ್ದ ದಿಲೀಪ್‌ ಉಸಿರಾಡೋದಕ್ಕೆ ಆಗ್ತಿರಲಿಲ್ಲ. ದೇಹದೊಳಗಿದ್ದ ನೀರನ್ನ ಹೊರತೆಗೆದ ರಾಹುಲ್‌, ದಿಲೀಪ್‌ ಉಸಿರಾಡುವಂತೆ ಮಾಡಿದರು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲ ಕ್ಷಣಗಳಲ್ಲಿ ಅಸ್ವಸ್ಥಗೊಂಡ ದಿಲೀಪ್‌ಕುಮಾರ್‌ನ ಆಸ್ಪತ್ರೆಗೆ ಸೇರಿಸಿದರು.

ಮುಳುಗುತ್ತಿದ್ದ ವ್ಯಕ್ತಿಯ ಅಮೂಲ್ಯ ಜೀವ ಉಳಿಸಿದ ಲೆಫ್ಟಿನೆಂಟ್‌ ರಾಹುಲ್‌ ದಲಾಲ್‌ ಧೈರ್ಯ, ಸಾಹಸವನ್ನ ಅಲ್ಲಿಂದ ಜನ ಕೊಂಡಾಡಿದರು. ಸೋಷಿಯಲ್ ಮೀಡಿಯಾದಲ್ಲೂ ರಾಹುಲ್‌ ಜೀವ ಬದುಕಿಸುತ್ತಿರುವ ಫೋಟೋಗಳು ವೈರಲಾಗಿವೆ. ಸೇನಾಧಿಕಾರಿ ರಾಹುಲ್‌ ಸಾಹಸಕ್ಕೆ ನೆಟಿಜನ್ಸ್‌ ಟ್ವೀಟ್‌ ಮೂಲಕ ಸೆಲ್ಯೂಟ್‌ ಮಾಡಿದ್ದಾರೆ.

ಕೊಚ್ಚಿ, (ಕೇರಳ): ಯೋಧರು ಗಡಿಯಲ್ಲಷ್ಟೇ ಎದೆಯೊಡ್ಡಿ ಹೋರಾಡಲ್ಲ. ದೇಶ ರಕ್ಷಣೆ ಜತೆ ಎಲ್ಲೇ ಪ್ರಕೃತಿ ವಿಕೋಪವಾದ್ರೂ ಅಮೂಲ್ಯ ಜೀವಗಳನ್ನ ಕಾಪಾಡಲು ಸನ್ನದ್ಧವಾಗಿರುತ್ತಾರೆ. ಡ್ಯೂಟಿ ಮೇಲಿದ್ದರೂ, ಇಲ್ಲದಿದ್ದರೂ ಸಂಕಷ್ಟಕ್ಕೆ ಸಿಲುಕಿದವರನ್ನ ಬದುಕಿಸುವ ಮಹತ್ಕಾರ್ಯ ಮರೆಯೋದಿಲ್ಲ. ಕೇರಳದ ಕೊಚ್ಚಿಯಲ್ಲೂ ಸೇನಾ ಅಧಿಕಾರಿಯೊಬ್ಬರು ಅದನ್ನ ನಿಜವಾಗಿಸಿದ್ದಾರೆ.

ಕೇರಳದ ಕೊಚ್ಚಿನ ವೈಬಿನ್‌ ಬಂದರು ಬಳಿಯ ಹಿನ್ನೀರಿನ ಕಾಲುವೆಯೊಳಗೆ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಅದೇ ಟೈಮ್‌ಗೆ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್‌ ರಾಹುಲ್ ದಲಾಲ್‌ ಮುಳುಗುತ್ತಿದ್ದ ವ್ಯಕ್ತಿಯನ್ನ ಬದುಕಿಸಿದ್ದಾರೆ.

indian-navys
ನೌಕಾ ದಳದ ಸೇನಾ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್
ಔರಂಗದಾಬಾದ್‌ನ ದಿಲೀಪ್‌ ಕುಮಾರ್‌ ಎಂಬುವರು ಸಮುದ್ರಕ್ಕಿಳಿದಿದ್ದರು. ಆದರೆ, ಅದೇನಾಯ್ತೋ ಏನೋ ಎಲ್ಲರೆದುರಿಗೆ ಇದ್ದಕ್ಕಿದ್ದಂತೆಯೇ ಮುಳುಗಿಬಿಟ್ಟಿದ್ದರು. ನೌಕಾದಳದ ಅಧಿಕಾರಿ ರಾಹುಲ್‌ ತಮ್ಮ ಪತ್ನಿ ಜತೆ ಕೊಚ್ಚಿನ್‌ಗೆ ರಜೆಗೆಂದು ತೆರಳಿದ್ದರು. ದಿಲೀಪ್ ಮುಳುಗಿದ್ದಾಗ ಎಲ್ಲರೂ ಬಾಯಿಬಾಯಿ ಬಡ್ಕೊಳ್ತಾಯಿದ್ದರು. ಆದರೆ, ರಾಹುಲ್‌ ಒಂದು ಕ್ಷಣವೂ ತಡ ಮಾಡದೇ ಸಮುದ್ರದೊಳಗೆ ಜಿಗಿದಿದ್ದರು. ಮುಳುಗುತ್ತಿದ್ದ ದಿಲೀಪ್‌ನ ಎತ್ಕೊಂಡು ಬಂದು ದಡಕ್ಕೆ ಹಾಕಿದ್ದರು.
navvy
ಮುಳುಗಿದ್ದವನ ಬದುಕಿಸಿದ ಸೇನಾ ಅಧಿಕಾರಿ

ನೀರು ಕುಡಿದಿದ್ದ ದಿಲೀಪ್‌ ಉಸಿರಾಡೋದಕ್ಕೆ ಆಗ್ತಿರಲಿಲ್ಲ. ದೇಹದೊಳಗಿದ್ದ ನೀರನ್ನ ಹೊರತೆಗೆದ ರಾಹುಲ್‌, ದಿಲೀಪ್‌ ಉಸಿರಾಡುವಂತೆ ಮಾಡಿದರು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲ ಕ್ಷಣಗಳಲ್ಲಿ ಅಸ್ವಸ್ಥಗೊಂಡ ದಿಲೀಪ್‌ಕುಮಾರ್‌ನ ಆಸ್ಪತ್ರೆಗೆ ಸೇರಿಸಿದರು.

ಮುಳುಗುತ್ತಿದ್ದ ವ್ಯಕ್ತಿಯ ಅಮೂಲ್ಯ ಜೀವ ಉಳಿಸಿದ ಲೆಫ್ಟಿನೆಂಟ್‌ ರಾಹುಲ್‌ ದಲಾಲ್‌ ಧೈರ್ಯ, ಸಾಹಸವನ್ನ ಅಲ್ಲಿಂದ ಜನ ಕೊಂಡಾಡಿದರು. ಸೋಷಿಯಲ್ ಮೀಡಿಯಾದಲ್ಲೂ ರಾಹುಲ್‌ ಜೀವ ಬದುಕಿಸುತ್ತಿರುವ ಫೋಟೋಗಳು ವೈರಲಾಗಿವೆ. ಸೇನಾಧಿಕಾರಿ ರಾಹುಲ್‌ ಸಾಹಸಕ್ಕೆ ನೆಟಿಜನ್ಸ್‌ ಟ್ವೀಟ್‌ ಮೂಲಕ ಸೆಲ್ಯೂಟ್‌ ಮಾಡಿದ್ದಾರೆ.

Intro:Body:

ಸಾಹಸಿ ಸೋಲ್ಜರ್‌ಗೆ ಸೆಲ್ಯೂಟ್‌.. ಮುಳುಗಿದ್ದವನ ಬದುಕಿಸಿದ ಸೇನಾ ಅಧಿಕಾರಿ.. 



ಕೊಚ್ಚಿ, (ಕೇರಳ): ಯೋಧರು ಗಡಿಯಲ್ಲಷ್ಟೇ ಎದೆಯೊಡ್ಡಿ ಹೋರಾಡಲ್ಲ. ದೇಶ ರಕ್ಷಣೆ ಜತೆ ಎಲ್ಲೇ ಪ್ರಕೃತಿ ವಿಕೋಪವಾದ್ರೂ ಅಮೂಲ್ಯ ಜೀವಗಳನ್ನ ಕಾಪಾಡಲು ಸನ್ನದ್ಧವಾಗಿರುತ್ತಾರೆ. ಡ್ಯೂಟಿ ಮೇಲಿದ್ದರೂ, ಇಲ್ಲದಿದ್ದರೂ ಸಂಕಷ್ಟಕ್ಕೆ ಸಿಲುಕಿದವರನ್ನ ಬದುಕಿಸುವ ಮಹತ್ಕಾರ್ಯ ಮರೆಯೋದಿಲ್ಲ. ಕೇರಳದ ಕೊಚ್ಚಿಯಲ್ಲೂ ಸೇನಾ ಅಧಿಕಾರಿಯೊಬ್ಬರು ಅದನ್ನ ನಿಜವಾಗಿಸಿದ್ದಾರೆ.



ಕೇರಳದ ಕೊಚ್ಚಿನ ವೈಬಿನ್‌ ಬಂದರು ಬಳಿಯ ಹಿನ್ನೀರಿನ ಕಾಲುವೆಯೊಳಗೆ ವ್ಯಕ್ತಿಯೊಬ್ಬ ಮುಳುಗುತ್ತಿದ್ದ. ಅದೇ ಟೈಮ್‌ಗೆ ನೌಕಾದಳದ ಅಧಿಕಾರಿ ಲೆಫ್ಟಿನೆಂಟ್‌ ರಾಹುಲ್ ದಲಾಲ್‌ ಮುಳುಗುತ್ತಿದ್ದ ವ್ಯಕ್ತಿಯನ್ನ ಬದುಕಿಸಿದ್ದಾರೆ.

ಔರಂಗದಾಬಾದ್‌ನ ದಿಲೀಪ್‌ ಕುಮಾರ್‌ ಎಂಬುವರು ಸಮುದ್ರಕ್ಕಿಳಿದಿದ್ದರು. ಆದರೆ, ಅದೇನಾಯ್ತೋ ಏನೋ ಎಲ್ಲರೆದುರಿಗೆ ಇದ್ದಕ್ಕಿದ್ದಂತೆಯೇ ಮುಳುಗಿಬಿಟ್ಟಿದ್ದರು. ನೌಕಾದಳದ ಅಧಿಕಾರಿ ರಾಹುಲ್‌ ತಮ್ಮ ಪತ್ನಿ ಜತೆ ಕೊಚ್ಚಿನ್‌ಗೆ ರಜೆಗೆಂದು ತೆರಳಿದ್ದರು. ದಿಲೀಪ್ ಮುಳುಗಿದ್ದಾಗ ಎಲ್ಲರೂ ಬಾಯಿಬಾಯಿ ಬಡ್ಕೊಳ್ತಾಯಿದ್ದರು. ಆದರೆ, ರಾಹುಲ್‌ ಒಂದು ಕ್ಷಣವೂ ತಡ ಮಾಡದೇ ಸಮುದ್ರದೊಳಗೆ ಜಿಗಿದಿದ್ದರು. ಮುಳುಗುತ್ತಿದ್ದ ದಿಲೀಪ್‌ನ ಎತ್ಕೊಂಡು ಬಂದು ದಡಕ್ಕೆ ಹಾಕಿದ್ದರು.



ನೀರು ಕುಡಿದಿದ್ದ ದಿಲೀಪ್‌ ಉಸಿರಾಡೋದಕ್ಕೆ ಆಗ್ತಿರಲಿಲ್ಲ. ದೇಹದೊಳಗಿದ್ದ ನೀರನ್ನ ಹೊರತೆಗೆದ ರಾಹುಲ್‌, ದಿಲೀಪ್‌ ಉಸಿರಾಡುವಂತೆ ಮಾಡಿದರು. ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಕೆಲ ಕ್ಷಣಗಳಲ್ಲಿ ಅಸ್ವಸ್ಥಗೊಂಡ ದಿಲೀಪ್‌ಕುಮಾರ್‌ನ ಆಸ್ಪತ್ರೆಗೆ ಸೇರಿಸಿದರು.



ಮುಳುಗುತ್ತಿದ್ದ ವ್ಯಕ್ತಿಯ ಅಮೂಲ್ಯ ಜೀವ ಉಳಿಸಿದ ಲೆಫ್ಟಿನೆಂಟ್‌ ರಾಹುಲ್‌ ದಲಾಲ್‌ ಧೈರ್ಯ, ಸಾಹಸವನ್ನ ಅಲ್ಲಿಂದ ಜನ ಕೊಂಡಾಡಿದರು. ಸೋಷಿಯಲ್ ಮೀಡಿಯಾದಲ್ಲೂ ರಾಹುಲ್‌ ಜೀವ ಬದುಕಿಸುತ್ತಿರುವ ಫೋಟೋಗಳು ವೈರಲಾಗಿವೆ.  ಸೇನಾಧಿಕಾರಿ ರಾಹುಲ್‌ ಸಾಹಸಕ್ಕೆ ನೆಟಿಜನ್ಸ್‌ ಟ್ವೀಟ್‌ ಮೂಲಕ  ಸೆಲ್ಯೂಟ್‌ ಮಾಡಿದ್ದಾರೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.