ETV Bharat / bharat

ಅಂಡರ್​​-19 ವಿಶ್ವಕಪ್​​: ಕಿವೀಸ್​​ ಮೇಲೆ ಟೀಂ ಇಂಡಿಯಾ ಸವಾರಿ, ಕಾಂಗರೂ ವಿರುದ್ಧ ಮುಂದಿನ ಫೈಟ್​!

author img

By

Published : Jan 25, 2020, 12:34 AM IST

ಅಂಡರ್​​-19 ವಿಶ್ವಕಪ್​​ನಲ್ಲಿ ಟಿಂ ಇಂಡಿಯಾ ನ್ಯೂಜಿಲೆಂಡ್​ ಮೇಲೆ ಸವಾರಿ ನಡೆಸಿದ್ದು, ಡಕ್ವರ್ಥ್​ ನಿಯಮದ ಪ್ರಕಾರ 44ರನ್​ಗಳ ಭರ್ಜರಿ ಗೆಲುವು ದಾಖಲು ಮಾಡಿದೆ.

Cricket World Cup
ಟೀಂ ಇಂಡಿಯಾ

ಓವೆಲ್​​: ಅಂಡರ್​​-19 ವಿಶ್ವಕಪ್​ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ಥ ಲೂಯಿಸ್​ ಪ್ರಕಾರ ನ್ಯೂಜಿಲೆಂಡ್​ ವಿರುದ್ಧ ಗೆಲುವು ಸಾಧಿಸಿದ್ದು, ಈಗಾಗಲೇ ಸರಣಿಯಲ್ಲಿ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿರುವ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

Cricket World Cup
ಟೀಂ ಇಂಡಿಯಾ ಬ್ಯಾಟಿಂಗ್​​

ಈಗಾಗಲೇ ಶ್ರೀಲಂಕಾ ವಿರುದ್ಧ 90ರನ್​ ಹಾಗೂ ಜಪಾನ್​ ತಂಡದ ವಿರುದ್ಧ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಡಕ್ವರ್ಥ್​​ ಲೂಯಿಸ್​ ಪ್ರಕಾರ 44ರನ್​ಗಳ ಗೆಲುವು ತನ್ನದಾಗಿಸಿಕೊಂಡಿದೆ.

Cricket World Cup
ಬ್ಯಾಟಿಂಗ್​ ಅಬ್ಬರ

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ 23 ಓವರ್​ಗಳಲ್ಲಿ 115ರನ್​ಗಳಿಕೆ ಮಾಡಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್​ ಅಜೇಯ 57ರನ್​, ಹಾಗೂ ಸಕ್ಸೆನ್​​ ಅಜೇಯ 52ರನ್​​​​​ಗಳಿಕೆ ಮಾಡಿದರು. ಈ ವೇಳೆ ಮಳೆ ಸುರಿದ ಕಾರಣ ಡಕ್ವರ್ಥ್​ ನಿಯಮದ ಪ್ರಕಾರ ಎದುರಾಳಿ ತಂಡಕ್ಕೆ 23 ಓವರ್​​ಗಳಲ್ಲಿ 193ರನ್​ಗಳಿಕೆ ಮಾಡುವ ಅವಕಾಶ ನೀಡಲಾಯಿತು. ಆದರೆ ತಂಡ ತನ್ನೆಲ್ಲ ವಿಕೆಟ್​ ಕಳೆದುಕೊಂಡು 21 ಓವರ್​​ಗಳಲ್ಲಿ 147ರನ್​ ಮಾತ್ರ ಗಳಿಕೆ ಮಾಡಿತು. ಹೀಗಾಗಿ ಟೀಂ ಇಂಡಿಯಾ 44ರನ್​ಗಳ ಗೆಲುವು ದಾಖಲು ಮಾಡಿಕೊಂಡಿದೆ.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕೆರ್​ 3ವಿಕೆಟ್​​ ಹಾಗೂ ರವಿ ಬಿಷ್ಣೋಯ್ 4ವಿಕೆಟ್​ ಪಡೆದುಕೊಂಡರೆ ಕಾರ್ತಿಕ್​​ ತ್ಯಾಗಿ 1 ಹಾಗೂ ಶುಶಾಂತ್​ ಮಿಶ್ರಾ 1ವಿಕೆಟ್​ ಪಡೆದುಕೊಂಡರು. ಮುಂದಿನ ಪಂದ್ಯ ಜನವರಿ 28ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ಓವೆಲ್​​: ಅಂಡರ್​​-19 ವಿಶ್ವಕಪ್​ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಟೀಂ ಇಂಡಿಯಾ ಡಕ್ವರ್ಥ ಲೂಯಿಸ್​ ಪ್ರಕಾರ ನ್ಯೂಜಿಲೆಂಡ್​ ವಿರುದ್ಧ ಗೆಲುವು ಸಾಧಿಸಿದ್ದು, ಈಗಾಗಲೇ ಸರಣಿಯಲ್ಲಿ ಕ್ವಾರ್ಟರ್​​ ಫೈನಲ್​ಗೆ ಲಗ್ಗೆ ಹಾಕಿರುವ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

Cricket World Cup
ಟೀಂ ಇಂಡಿಯಾ ಬ್ಯಾಟಿಂಗ್​​

ಈಗಾಗಲೇ ಶ್ರೀಲಂಕಾ ವಿರುದ್ಧ 90ರನ್​ ಹಾಗೂ ಜಪಾನ್​ ತಂಡದ ವಿರುದ್ಧ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಡಕ್ವರ್ಥ್​​ ಲೂಯಿಸ್​ ಪ್ರಕಾರ 44ರನ್​ಗಳ ಗೆಲುವು ತನ್ನದಾಗಿಸಿಕೊಂಡಿದೆ.

Cricket World Cup
ಬ್ಯಾಟಿಂಗ್​ ಅಬ್ಬರ

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ 23 ಓವರ್​ಗಳಲ್ಲಿ 115ರನ್​ಗಳಿಕೆ ಮಾಡಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್​ ಅಜೇಯ 57ರನ್​, ಹಾಗೂ ಸಕ್ಸೆನ್​​ ಅಜೇಯ 52ರನ್​​​​​ಗಳಿಕೆ ಮಾಡಿದರು. ಈ ವೇಳೆ ಮಳೆ ಸುರಿದ ಕಾರಣ ಡಕ್ವರ್ಥ್​ ನಿಯಮದ ಪ್ರಕಾರ ಎದುರಾಳಿ ತಂಡಕ್ಕೆ 23 ಓವರ್​​ಗಳಲ್ಲಿ 193ರನ್​ಗಳಿಕೆ ಮಾಡುವ ಅವಕಾಶ ನೀಡಲಾಯಿತು. ಆದರೆ ತಂಡ ತನ್ನೆಲ್ಲ ವಿಕೆಟ್​ ಕಳೆದುಕೊಂಡು 21 ಓವರ್​​ಗಳಲ್ಲಿ 147ರನ್​ ಮಾತ್ರ ಗಳಿಕೆ ಮಾಡಿತು. ಹೀಗಾಗಿ ಟೀಂ ಇಂಡಿಯಾ 44ರನ್​ಗಳ ಗೆಲುವು ದಾಖಲು ಮಾಡಿಕೊಂಡಿದೆ.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕೆರ್​ 3ವಿಕೆಟ್​​ ಹಾಗೂ ರವಿ ಬಿಷ್ಣೋಯ್ 4ವಿಕೆಟ್​ ಪಡೆದುಕೊಂಡರೆ ಕಾರ್ತಿಕ್​​ ತ್ಯಾಗಿ 1 ಹಾಗೂ ಶುಶಾಂತ್​ ಮಿಶ್ರಾ 1ವಿಕೆಟ್​ ಪಡೆದುಕೊಂಡರು. ಮುಂದಿನ ಪಂದ್ಯ ಜನವರಿ 28ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.

ZCZC
PRI NAT NRG
.JAIPUR NRG24
RJ-PREAMBLE-SCHOOLS
School students to recite Preamble to the Constitution from Jan 26 in Raj
         Jaipur, Jan 24 (PTI) School students will recite the Preamble to the Constitution during morning meetings in Rajasthan from this Republic Day, Education Minister Govind Singh Dotasara said on Friday.
         Dotasara said doing so would help keep intact the sentiments towards national unity, sovereignty and respect towards all religion among the students.
         "This is utmost needed today in the kind of atmosphere which is being created. By spreading the message of the Preamble to the Constitution, unity and harmony can be maintained," he said, after attending a meeting of various organisations working in the education sector here.
         He said the state government was making efforts to provide quality education in schools. PTI SDA
ABH
ABH
01242315
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.