ETV Bharat / bharat

ಹರಿಯಾಣ: ಭತ್ತದ ಕೃಷಿಯ ಮೇಲಿನ ನಿರ್ಬಂಧದ ವಿರುದ್ಧ ಪ್ರತಿಭಟನೆಗೆ ಸಾತ್ ನೀಡಿದ ಕಾಂಗ್ರೆಸ್ ಮುಖಂಡ

ಭತ್ತದ ಕೃಷಿಗೆ ನಿರ್ಬಂಧ ಹೇರುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸುರ್ಜೆವಾಲಾ, ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

author img

By

Published : May 26, 2020, 2:34 PM IST

protest
protest

ಕೈತಾಲ್ (ಹರಿಯಾಣ): ರಾಜ್ಯದಲ್ಲಿ ಬಿಜೆಪಿ-ಜೆಜೆಪಿ ನೇತೃತ್ವದ ಸರ್ಕಾರ ಭತ್ತದ ಕೃಷಿಗೆ ವಿಧಿಸಿರುವ ನಿರ್ಬಂಧಗಳ ವಿರುದ್ಧ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಹರಿಯಾಣದ ಕೈತಾಲ್ ಜಿಲ್ಲೆಯ ಗುಹ್ಲಾ ಚೀಕಾದಲ್ಲಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದರು.

ರೈತರಿಗೆ ತಮ್ಮ ಬೆಂಬಲ ನೀಡಿದ ಸುರ್ಜೆವಾಲಾ, ಹರಿಯಾಣದ ಶ್ರೀಮಂತ ಭತ್ತದ ಬ್ಲಾಕ್​ಗಳಲ್ಲಿ ಭತ್ತದ ಕೃಷಿಯನ್ನು ಶೇಕಡಾ 50ರಷ್ಟು ನಿರ್ಬಂಧಿಸುವಂತಹ ಯೋಜನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಖಟ್ಟರ್ ನೇತೃತ್ವದ ಸರ್ಕಾರವು ರೈತರ ಹಕ್ಕುಗಳನ್ನು ಹತ್ತಿಕ್ಕಿದೆ ಎಂದು ಸುರ್ಜೇವಲಾ ಆರೋಪಿಸಿದರು. ಭತ್ತದ ಕೃಷಿಯನ್ನು ನಿರ್ಬಂಧಿಸುವ ಮನೋಹರ್ ಲಾಲ್ ಖಟ್ಟರ್ ಅವರ ನಿರ್ಧಾರವು ರೈತರಿಗೆ ಬೆಳೆ ಬೆಳೆಯುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದರು.

ಭತ್ತದ ಕೃಷಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಕೈತಾಲ್ (ಹರಿಯಾಣ): ರಾಜ್ಯದಲ್ಲಿ ಬಿಜೆಪಿ-ಜೆಜೆಪಿ ನೇತೃತ್ವದ ಸರ್ಕಾರ ಭತ್ತದ ಕೃಷಿಗೆ ವಿಧಿಸಿರುವ ನಿರ್ಬಂಧಗಳ ವಿರುದ್ಧ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಹರಿಯಾಣದ ಕೈತಾಲ್ ಜಿಲ್ಲೆಯ ಗುಹ್ಲಾ ಚೀಕಾದಲ್ಲಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾದರು.

ರೈತರಿಗೆ ತಮ್ಮ ಬೆಂಬಲ ನೀಡಿದ ಸುರ್ಜೆವಾಲಾ, ಹರಿಯಾಣದ ಶ್ರೀಮಂತ ಭತ್ತದ ಬ್ಲಾಕ್​ಗಳಲ್ಲಿ ಭತ್ತದ ಕೃಷಿಯನ್ನು ಶೇಕಡಾ 50ರಷ್ಟು ನಿರ್ಬಂಧಿಸುವಂತಹ ಯೋಜನೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಖಟ್ಟರ್ ನೇತೃತ್ವದ ಸರ್ಕಾರವು ರೈತರ ಹಕ್ಕುಗಳನ್ನು ಹತ್ತಿಕ್ಕಿದೆ ಎಂದು ಸುರ್ಜೇವಲಾ ಆರೋಪಿಸಿದರು. ಭತ್ತದ ಕೃಷಿಯನ್ನು ನಿರ್ಬಂಧಿಸುವ ಮನೋಹರ್ ಲಾಲ್ ಖಟ್ಟರ್ ಅವರ ನಿರ್ಧಾರವು ರೈತರಿಗೆ ಬೆಳೆ ಬೆಳೆಯುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದರು.

ಭತ್ತದ ಕೃಷಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.