ಚುರು (ರಾಜಸ್ಥಾನ): ಹಳೇ ದ್ವೇಷವನ್ನಿಟ್ಟುಕೊಂಡು ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಗ್ಯಾಂಗ್ವಾರ್ನಲ್ಲಿ ಇಬ್ಬರು ಗ್ಯಾಂಗ್ಸ್ಟರ್ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಪ್ರದೀಪ್ ಸ್ವಾಮಿ ಹಾಗೂ ಮತ್ತೋರ್ವ ಸಾವನ್ನಪ್ಪಿದ್ದು, ದುಷ್ಕರ್ಮಿಗಳ ಮೇಲೂ ಸಹ ಗುಂಡಿನ ದಾಳಿ ನಡೆದಿದೆ. ಎಸ್ಪಿ ನಾರಾಯಣ್ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಓದಿ: ಅಪ್ರಾಪ್ತೆಯ ಖರೀದಿ- ಲೈಂಗಿಕ ಕಿರುಕುಳ: ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್
ಹಳ್ಳಿಯಲ್ಲಿ ಗ್ಯಾಂಗ್ವಾರ್ ನಡೆದಿರುವ ಕಾರಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. 2018ರ ಜನವರಿ 17ರಲ್ಲಿ ನೆಹ್ರಾ ಗ್ಯಾಂಗ್ನ ಸಂಪತ್ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿತ್ತು. ಅದೇ ಆಕ್ರೋಶವನ್ನಿಟ್ಟುಕೊಂಡು ಪ್ರದೀಪ್ ಎಂಬ ವ್ಯಕ್ತಿ ಇದೀಗ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.