ETV Bharat / bharat

ರಾಮ ಮಂದಿರ ನಿರ್ಮಾಣಕ್ಕೆ ಈ ಹಿಂದೆಯೇ ರಾಜೀವ್​ ಗಾಂಧಿ ಅಡಿಪಾಯ ಹಾಕಿದ್ದಾರೆ: ದಿಗ್ವಿಜಯ್​ ಸಿಂಗ್​!

author img

By

Published : Aug 3, 2020, 3:03 PM IST

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರ ಅಡಿಪಾಯ ಕಾರ್ಯಕ್ರಮ ಈಗಾಗಲೇ ರಾಜೀವ್​ ಗಾಂಧಿ ಅವರಿಂದ ನಡೆದಿದೆ ಎಂದು ದಿಗ್ವಿಜಯ್​ ಸಿಂಗ್​ ಹೇಳಿದ್ದಾರೆ.

Digvijaya Singh
Digvijaya Singh

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಆಗಸ್ಟ್​ 5ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದೀಗ ಇದೇ ವಿಷಯವಾಗಿ ಕಾಂಗ್ರೆಸ್​ ಮುಖಂಡ ದಿಗ್ವಿಜಯ್​​ ಸಿಂಗ್​ ಮಾತನಾಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಡಿಪಾಯ ಹಾಕಲಾಗಿದೆ ಎಂದು ಹೇಳಿದ್ದಾರೆ. ರಾಜೀವ್​ ಗಾಂಧಿ ಅವರು ಈ ಹಿಂದೆ ಈ ಕೆಲಸ ಮಾಡಿದ್ದು, ಅವರು ಕೂಡ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು ಎಂದು ತಿಳಿಸಿದ್ದಾರೆ.

ರಾಮ ಮಂದಿರ ಕುರಿತು ದಿಗ್ವಿಜಯ್​ ಸಿಂಗ್​ ಮಾತು

ಆಗಸ್ಟ್​ 5ರಂದು ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭವಾಗಿದ್ದು, ಸತಾತನ ಧರ್ಮದ ನಿಯಮ ನಿರ್ಲಕ್ಷಿಸಲಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ದಿನಾಂಕದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ನಡೆಸಬೇಕು ಎಂದಿರುವ ದಿಗ್ವಿಜಯ್​​ ಸಿಂಗ್​​​, ನೂರಾರು ವರ್ಷದ ಹೋರಾಟದ ಫಲವಾಗಿ ಈ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಅದರ ಬಗ್ಗೆ ಪ್ರಧಾನಿಯವರು ಮತ್ತೊಮ್ಮೆ ಪರಾಮರ್ಶೆ ನಡೆಸಬೇಕು ಎಂದಿದ್ದಾರೆ. ಜತೆಗೆ ಬಿಜೆಪಿ ಅನೇಕ ಮುಖಂಡರು ಕೋವಿಡ್​ ಸೋಂಕಿಗೊಳಗಾಗುತ್ತಿದ್ದು, ಭೂಮಿ ಪೂಜಾ ಕಾರ್ಯಕ್ರಮ ಮುಂದೂಡಿಕೆ ಮಾಡಬೇಕು ಎಂದಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಅರ್ಚಕ, ಗೃಹ ಸಚಿವ ಅಮಿತ್​ ಶಾ, ಮಧ್ಯಪ್ರದೇಶ ಸಿಎಂ, ಕರ್ನಾಟಕದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೂ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಆಗಸ್ಟ್​ 5ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇದೀಗ ಇದೇ ವಿಷಯವಾಗಿ ಕಾಂಗ್ರೆಸ್​ ಮುಖಂಡ ದಿಗ್ವಿಜಯ್​​ ಸಿಂಗ್​ ಮಾತನಾಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಡಿಪಾಯ ಹಾಕಲಾಗಿದೆ ಎಂದು ಹೇಳಿದ್ದಾರೆ. ರಾಜೀವ್​ ಗಾಂಧಿ ಅವರು ಈ ಹಿಂದೆ ಈ ಕೆಲಸ ಮಾಡಿದ್ದು, ಅವರು ಕೂಡ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು ಎಂದು ತಿಳಿಸಿದ್ದಾರೆ.

ರಾಮ ಮಂದಿರ ಕುರಿತು ದಿಗ್ವಿಜಯ್​ ಸಿಂಗ್​ ಮಾತು

ಆಗಸ್ಟ್​ 5ರಂದು ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭವಾಗಿದ್ದು, ಸತಾತನ ಧರ್ಮದ ನಿಯಮ ನಿರ್ಲಕ್ಷಿಸಲಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ದಿನಾಂಕದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ನಡೆಸಬೇಕು ಎಂದಿರುವ ದಿಗ್ವಿಜಯ್​​ ಸಿಂಗ್​​​, ನೂರಾರು ವರ್ಷದ ಹೋರಾಟದ ಫಲವಾಗಿ ಈ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಅದರ ಬಗ್ಗೆ ಪ್ರಧಾನಿಯವರು ಮತ್ತೊಮ್ಮೆ ಪರಾಮರ್ಶೆ ನಡೆಸಬೇಕು ಎಂದಿದ್ದಾರೆ. ಜತೆಗೆ ಬಿಜೆಪಿ ಅನೇಕ ಮುಖಂಡರು ಕೋವಿಡ್​ ಸೋಂಕಿಗೊಳಗಾಗುತ್ತಿದ್ದು, ಭೂಮಿ ಪೂಜಾ ಕಾರ್ಯಕ್ರಮ ಮುಂದೂಡಿಕೆ ಮಾಡಬೇಕು ಎಂದಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಅರ್ಚಕ, ಗೃಹ ಸಚಿವ ಅಮಿತ್​ ಶಾ, ಮಧ್ಯಪ್ರದೇಶ ಸಿಎಂ, ಕರ್ನಾಟಕದ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪಗೂ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.