ETV Bharat / bharat

ಭಾರತದ ಪ್ರತೀಕಾರದ ಭಯದಲ್ಲಿ ಪಾಕ್‌ನಿಂದ ವೈಮಾನಿಕ ಗಸ್ತು ಹೆಚ್ಚಳ..

ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದ್ದಂತೆ ಪಾಕ್ ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಸಮೀಪದ ಭೂ ಪ್ರದೇಶದಲ್ಲಿ ವೈಮಾನಿಕ ಗಸ್ತು ಅಧಿಕಗೊಳಿಸಿದೆ.

author img

By

Published : May 10, 2020, 5:53 PM IST

pakistan aircraft
ಪಾಕ್​ ವಾಯುಪಡೆ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್​ಕೌಂಟರ್​ನಲ್ಲಿ ಭಾರತೀಯ ಸೇನಾ ಕರ್ನಲ್ ಸಾವನ್ನಪ್ಪಿದ ನಂತರ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದ ಮೇಲೆ ವೈಮಾನಿಕ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಂದ್ವಾರಾ ಎನ್​ಕೌಂಟರ್ ನಂತರ ಪಾಕ್​ ತನ್ನ ಗಡಿಗೆ ಸಮೀಪವಿರುವ ತನ್ನ ಭೂಪ್ರದೇಶದಲ್ಲಿ ಫೈಟರ್​ ಏರ್​ಕ್ರಾಫ್ಟ್​ಗಳಾದ ಎಫ್​​-16, ಜೆಎಫ್-17 ಸೇರಿದಂತೆ ಹಲವಾರು ಯುದ್ಧ ವಿಮಾನಗಳು ಗಸ್ತು ತಿರುಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿಂದೆ ಪಾಕಿಸ್ತಾನವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ''ಇದೊಂದು ಆಧಾರರಹಿತ ಆರೋಪ, ಪಾಕ್​ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಒಳ ನುಸುಳುತ್ತಿದೆ ಎಂಬುದೂ ಸುಳ್ಳು'' ಎಂದು ಟ್ವೀಟ್​ ಮಾಡಿದ್ದರು.

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾದ ಕಾರಣದಿಂದ ಭಾರತ ಯಾವಾಗ ಬೇಕಾದರೂ ಪ್ರತೀಕಾರ ತೀರಿಸಿಕೊಳ್ಳಬಹುದೆಂಬ ಕಾರಣದಿಂದ ಪಾಕ್​ ಈಗಾಗಲೇ ವೈಮಾನಿಕ ಗಸ್ತನ್ನು ಹೆಚ್ಚಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ವರ್ಷದ ಹಿಂದೆ ಭಯೋತ್ಪಾದನಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗಿನ ಎನ್​ಕೌಂಟರ್​ನಲ್ಲಿ ಭಾರತೀಯ ಸೇನಾ ಕರ್ನಲ್ ಸಾವನ್ನಪ್ಪಿದ ನಂತರ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದ ಮೇಲೆ ವೈಮಾನಿಕ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಂದ್ವಾರಾ ಎನ್​ಕೌಂಟರ್ ನಂತರ ಪಾಕ್​ ತನ್ನ ಗಡಿಗೆ ಸಮೀಪವಿರುವ ತನ್ನ ಭೂಪ್ರದೇಶದಲ್ಲಿ ಫೈಟರ್​ ಏರ್​ಕ್ರಾಫ್ಟ್​ಗಳಾದ ಎಫ್​​-16, ಜೆಎಫ್-17 ಸೇರಿದಂತೆ ಹಲವಾರು ಯುದ್ಧ ವಿಮಾನಗಳು ಗಸ್ತು ತಿರುಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳ ಹಿಂದೆ ಪಾಕಿಸ್ತಾನವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ''ಇದೊಂದು ಆಧಾರರಹಿತ ಆರೋಪ, ಪಾಕ್​ ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಒಳ ನುಸುಳುತ್ತಿದೆ ಎಂಬುದೂ ಸುಳ್ಳು'' ಎಂದು ಟ್ವೀಟ್​ ಮಾಡಿದ್ದರು.

ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾದ ಕಾರಣದಿಂದ ಭಾರತ ಯಾವಾಗ ಬೇಕಾದರೂ ಪ್ರತೀಕಾರ ತೀರಿಸಿಕೊಳ್ಳಬಹುದೆಂಬ ಕಾರಣದಿಂದ ಪಾಕ್​ ಈಗಾಗಲೇ ವೈಮಾನಿಕ ಗಸ್ತನ್ನು ಹೆಚ್ಚಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ವರ್ಷದ ಹಿಂದೆ ಭಯೋತ್ಪಾದನಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.