ETV Bharat / bharat

ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್​​ಗೆ ಜಾರಿ ನಿರ್ದೇಶನಾಲಯದಿಂದ ಶಾಕ್

author img

By

Published : Jun 27, 2020, 12:55 PM IST

ಸ್ಟರ್ಲಿಂಗ್ ಬಯೋಟೆಕ್ ಕಂಪನಿ ನಡೆಸಿದ ಬಹುಕೋಟಿ ಬ್ಯಾಂಕ್ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ​ ಸಂಬಂಧ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್​​ ನಿವಾಸಕ್ಕೆ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದೆ.

Ahmed Patel
ಅಹ್ಮದ್ ಪಟೇಲ್

ನವದೆಹಲಿ: ಸಂದೇಸರ ಸಹೋದರರ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಹಿರಿಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್​​ ನಿವಾಸಕ್ಕೆ ಇಂದು ಇಡಿ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಸಂದೇಸರ ಗ್ರೂಪ್ ಅಥವಾ ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‌ಬಿಎಲ್)ನಲ್ಲಿ ಸುಮಾರು 15 ಸಾವಿರ ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿತ್ತು. ಈ ಸಂಬಂಧ ಪಟೇಲ್​​ರಿಗೆ ಕೆಲ ಪ್ರಶ್ನೆಗಳನ್ನು ಕೇಳಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ಬಂದಿದ್ದಾರೆ.

ಅಹ್ಮದ್ ಪಟೇಲ್, ಗುಜರಾತ್​ನ ರಾಜ್ಯಸಭಾ ಸಂಸದರಾಗಿದ್ದು, ದೆಹಲಿಯ ಮದರ್ ತೆರೇಸಾ ಕ್ರೆಸೆಂಟ್​ನಲ್ಲಿ ವಾಸವಾಗಿದ್ದಾರೆ. ತನಗೆ 60 ವರ್ಷ ದಾಟಿದ್ದು, ಕೊರೊನಾಗೆ ತುತ್ತಾಗುವ ಅಪಾಯವಿದೆ ಎಂದು ಅನಾರೋಗ್ಯದ ಕಾರಣಗಳನ್ನು ಹೇಳಿ ಪಟೇಲ್​​ ಈ ಹಿಂದೆ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು.

ಇದಕ್ಕೂ ಮೊದಲು ಪಟೇಲ್​ರ ಪುತ್ರ ಹಾಗೂ ಅಳಿಯನಿಗೆ ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ವೇಳೆ ಇವರು ನಿತಿನ್ ಸಂದೇಸರರ ಬಗ್ಗೆ ಗೊತ್ತಿರುವುದಾಗಿ ಒಪ್ಪಿಕೊಂಡಿದ್ದರು.

ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿ ನಡೆಸಿದ ಬಹುಕೋಟಿ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಕೇಸ್​ ಸಂಬಂಧ ಸಂದೇಸರ ಸಹೋದರರಾದ ಚೇತನ್ ಮತ್ತು ನಿತಿನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ನವದೆಹಲಿ: ಸಂದೇಸರ ಸಹೋದರರ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಹಿರಿಯ ಕಾಂಗ್ರೆಸ್ ನಾಯಕ, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್​​ ನಿವಾಸಕ್ಕೆ ಇಂದು ಇಡಿ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದೆ.

ಸಂದೇಸರ ಗ್ರೂಪ್ ಅಥವಾ ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ (ಎಸ್‌ಬಿಎಲ್)ನಲ್ಲಿ ಸುಮಾರು 15 ಸಾವಿರ ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿತ್ತು. ಈ ಸಂಬಂಧ ಪಟೇಲ್​​ರಿಗೆ ಕೆಲ ಪ್ರಶ್ನೆಗಳನ್ನು ಕೇಳಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ಬಂದಿದ್ದಾರೆ.

ಅಹ್ಮದ್ ಪಟೇಲ್, ಗುಜರಾತ್​ನ ರಾಜ್ಯಸಭಾ ಸಂಸದರಾಗಿದ್ದು, ದೆಹಲಿಯ ಮದರ್ ತೆರೇಸಾ ಕ್ರೆಸೆಂಟ್​ನಲ್ಲಿ ವಾಸವಾಗಿದ್ದಾರೆ. ತನಗೆ 60 ವರ್ಷ ದಾಟಿದ್ದು, ಕೊರೊನಾಗೆ ತುತ್ತಾಗುವ ಅಪಾಯವಿದೆ ಎಂದು ಅನಾರೋಗ್ಯದ ಕಾರಣಗಳನ್ನು ಹೇಳಿ ಪಟೇಲ್​​ ಈ ಹಿಂದೆ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರು.

ಇದಕ್ಕೂ ಮೊದಲು ಪಟೇಲ್​ರ ಪುತ್ರ ಹಾಗೂ ಅಳಿಯನಿಗೆ ಪ್ರಕರಣ ಸಂಬಂಧ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ವೇಳೆ ಇವರು ನಿತಿನ್ ಸಂದೇಸರರ ಬಗ್ಗೆ ಗೊತ್ತಿರುವುದಾಗಿ ಒಪ್ಪಿಕೊಂಡಿದ್ದರು.

ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿ ನಡೆಸಿದ ಬಹುಕೋಟಿ ಬ್ಯಾಂಕ್ ವಂಚನೆ ಮತ್ತು ಮನಿ ಲಾಂಡರಿಂಗ್ ಕೇಸ್​ ಸಂಬಂಧ ಸಂದೇಸರ ಸಹೋದರರಾದ ಚೇತನ್ ಮತ್ತು ನಿತಿನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.