ETV Bharat / bharat

ಲಾಕ್​ಡೌನ್​​ ಉಲ್ಲಂಘಿಸಿದ ಯೆಸ್​ ಬ್ಯಾಂಕ್​ ಹಗರಣದ ಆರೋಪಿಯ 5 ಐಷರಾಮಿ ಕಾರು ಸೀಜ್‌..

author img

By

Published : Apr 10, 2020, 9:01 PM IST

ಕೊರೊನಾ ವೈರಸ್​ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ದೇಶಾದ್ಯಂತ ಲಾಕ್​​ಡೌನ್​​ ನಡುವೆಯೂ ಮಹಾರಾಷ್ಟ್ರದ ಐಪಿಎಸ್​ ಅಧಿಕಾರಿಯೊಬ್ಬರ ಬೇಜವಾಬ್ದಾರಿತನ ಬೆಳಕಿಗೆ ಬಂದಿದೆ.

ED seizes luxury vehicles of Wadhawans used for Mahabaleshwar trip
ED seizes luxury vehicles of Wadhawans used for Mahabaleshwar trip

ನವದೆಹಲಿ : ಲಾಕ್​​ಡೌನ್​​ ಸಮಯದಲ್ಲೂ ಡಿಹೆಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರು ತಮ್ಮ ತೋಟದ ಮನೆಗೆ ಪ್ರಯಾಣಿಸಲು ಬಳಸಿದ ಐದು ಐಷಾರಾಮಿ ವಾಹನಗಳನ್ನು ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆಕಾಯ್ದೆ (ಪಿಎಂಎಲ್ಎ) ಅಡಿ ಹೊರಡಿಸಲಾದ ಅಧಿಕೃತ ಆದೇಶವನ್ನು ಸತಾರಾ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ವಾಹನಗಳು ವಾಧವನ್ ಸಹೋದರರ ಒಡೆತನದಲ್ಲಿ ಇವೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ದಿವಾನ್​ ಹೌಸಿಂಗ್​ ಫೈನಾನ್ಸ್​​ ಲಿಮಿಟೆಡ್​​ (ಡಿಹೆಚ್‌ಎಫ್‌ಎಲ್) ಪ್ರವರ್ತಕರಾದ ಕಪಿಲ್​​ ಮತ್ತು ಧೀರಜ್​ ವಾದಮನ್ ಅವರು ಯೆಸ್​ ಬ್ಯಾಂಕ್​​ ಹಗರಣದಲ್ಲಿ ಭಾಗಿಯಾಗಿದ್ದಾರೆ.​ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಇರುವ ತೋಟದ ಮನೆಗೆ ಹೋಗಲು ವಾಧವನ್ ಕುಟುಂಬಕ್ಕೆ ಅನುಮತಿ ನೀಡಿದ ಆರೋಪದಲ್ಲಿ ಗೃಹ ಸಚಿವಾಲಯದ ವಿಶೇಷ ಪ್ರಧಾನ ಕಾರ್ಯದರ್ಶಿ ಅಮಿತಾಭ್ ಗುಪ್ತಾ ಅವರನ್ನು ಈ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ವಾಧವನ್ ಸಹೋದರರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 21 ಮಂದಿ ಎರಡು ರೇಂಜ್ ರೋವರ್ ಮತ್ತು ಮೂರು ಟೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ಮೂಲಕ ಲಾಕ್​ಡೌನ್​ ಆದೇಶ ಉಲ್ಲಂಘಿಸಿದ್ದಾರೆ. ಹೀಗಾಗಿ 21 ಮಂದಿ ವಿರುದ್ಧವೂ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವದೆಹಲಿ : ಲಾಕ್​​ಡೌನ್​​ ಸಮಯದಲ್ಲೂ ಡಿಹೆಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರು ತಮ್ಮ ತೋಟದ ಮನೆಗೆ ಪ್ರಯಾಣಿಸಲು ಬಳಸಿದ ಐದು ಐಷಾರಾಮಿ ವಾಹನಗಳನ್ನು ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆಕಾಯ್ದೆ (ಪಿಎಂಎಲ್ಎ) ಅಡಿ ಹೊರಡಿಸಲಾದ ಅಧಿಕೃತ ಆದೇಶವನ್ನು ಸತಾರಾ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ವಾಹನಗಳು ವಾಧವನ್ ಸಹೋದರರ ಒಡೆತನದಲ್ಲಿ ಇವೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ದಿವಾನ್​ ಹೌಸಿಂಗ್​ ಫೈನಾನ್ಸ್​​ ಲಿಮಿಟೆಡ್​​ (ಡಿಹೆಚ್‌ಎಫ್‌ಎಲ್) ಪ್ರವರ್ತಕರಾದ ಕಪಿಲ್​​ ಮತ್ತು ಧೀರಜ್​ ವಾದಮನ್ ಅವರು ಯೆಸ್​ ಬ್ಯಾಂಕ್​​ ಹಗರಣದಲ್ಲಿ ಭಾಗಿಯಾಗಿದ್ದಾರೆ.​ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಇರುವ ತೋಟದ ಮನೆಗೆ ಹೋಗಲು ವಾಧವನ್ ಕುಟುಂಬಕ್ಕೆ ಅನುಮತಿ ನೀಡಿದ ಆರೋಪದಲ್ಲಿ ಗೃಹ ಸಚಿವಾಲಯದ ವಿಶೇಷ ಪ್ರಧಾನ ಕಾರ್ಯದರ್ಶಿ ಅಮಿತಾಭ್ ಗುಪ್ತಾ ಅವರನ್ನು ಈ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ವಾಧವನ್ ಸಹೋದರರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 21 ಮಂದಿ ಎರಡು ರೇಂಜ್ ರೋವರ್ ಮತ್ತು ಮೂರು ಟೊಯೊಟಾ ಫಾರ್ಚೂನರ್ ಕಾರುಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ಮೂಲಕ ಲಾಕ್​ಡೌನ್​ ಆದೇಶ ಉಲ್ಲಂಘಿಸಿದ್ದಾರೆ. ಹೀಗಾಗಿ 21 ಮಂದಿ ವಿರುದ್ಧವೂ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.