ETV Bharat / bharat

ಬಡವರ ಹಸಿವು ನೀಗಿಸಿ ಬರುತ್ತಿದ್ದ ವ್ಯಕ್ತಿಗೆ ಥಳಿತ: ಪೊಲೀಸ್​ ಸಿಬ್ಬಂದಿ ಅಮಾನತು

author img

By

Published : Apr 29, 2020, 1:39 PM IST

ಲಾಕ್​ಡೌನ್ ಹಿನ್ನೆಲೆ ನಿನ್ನೆ ಯುವಕನೊಬ್ಬ ಜನರಿಗೆ ಆಹಾರವನ್ನು ವಿತರಿಸಿದ ನಂತರ ಹಿಂದಿರುಗುತ್ತಿದ್ದ ವೇಳೆ ಗೋಲ್ಕೊಂಡ ಪೊಲೀಸರು ಟೋಲಿಚೌಕಿ ಚೆಕ್ ಪೋಸ್ಟ್​ಬಳಿ ಈತನನ್ನು ತಡೆದು ಹಲ್ಲೆ ಮಾಡಿದ್ದರು.

Cop suspended for beating up civilian in Telangana
ಬಡಜನರ ಹಸಿವು ನೀಗಿಸಿ ಬರುತ್ತಿದ್ದ ವ್ಯಕ್ತಿಗೆ ಥಳಿತ

ಹೈದರಾಬಾದ್: ಇಲ್ಲಿನ ಗೋಲ್ಕೊಂಡಾದ ಪೊಲೀಸ್​ ಠಾಣಾ ವ್ತಾಪ್ತಿಯಲ್ಲಿ ಯುವಕನೊಬ್ಬನಿಗೆ ರಕ್ತಬರುವವರೆಗೂ ಥಳಿಸಿದ ಹಿನ್ನೆಲೆ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಮಾಡಿ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ನಿನ್ನೆ ಯುವಕನೋರ್ವ ಜನರಿಗೆ ಆಹಾರವನ್ನು ವಿತರಿಸಿದ ನಂತರ ಹಿಂದಿರುಗುತ್ತಿದ್ದ ವೇಳೆ ಗೋಲ್ಕೊಂಡ ಪೊಲೀಸರು ಟೋಲಿಚೌಕಿ ಚೆಕ್ ಪೋಸ್ಟ್​ ಬಳಿ ಈತನನ್ನು ತಡೆದಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಹನುಮಂತು ಎಂಬುವರು ಈ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ.

  • HG Hanumantu of PS Golconda is placed under suspension for unprofessional conduct. SHO Golconda is given a charge memo for not properly briefing his subordinates in discharge of duties.

    — Anjani Kumar, IPS, Stay Home Stay Safe. (@CPHydCity) April 28, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಪೊಲೀಸ್ ಮುಖ್ಯಸ್ಥರು, ಹನುಮಂತು ಅವರ ನಡವಳಿಗೆ ವೃತ್ತಿಪರವಾಗಿಲ್ಲದಿರುವುದರಿಂದ ಅಮಾನತು ಮಾಡಲಾಗಿದೆ. ಅಲ್ಲದೆ, ಈ ಸಿಬ್ಬಂದಿಗೆ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ತಿಳಿಸದ ಕಾರಣ ಗೋಲ್ಕೊಂಡಾದ ಸ್ಟೇಷನ್ ಹೌಸ್ ಆಫೀಸರ್​ಗೆ ಮೆಮೋ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೈದರಾಬಾದ್: ಇಲ್ಲಿನ ಗೋಲ್ಕೊಂಡಾದ ಪೊಲೀಸ್​ ಠಾಣಾ ವ್ತಾಪ್ತಿಯಲ್ಲಿ ಯುವಕನೊಬ್ಬನಿಗೆ ರಕ್ತಬರುವವರೆಗೂ ಥಳಿಸಿದ ಹಿನ್ನೆಲೆ ಪೊಲೀಸ್​ ಸಿಬ್ಬಂದಿಯನ್ನು ಅಮಾನತುಮಾಡಿ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ನಿನ್ನೆ ಯುವಕನೋರ್ವ ಜನರಿಗೆ ಆಹಾರವನ್ನು ವಿತರಿಸಿದ ನಂತರ ಹಿಂದಿರುಗುತ್ತಿದ್ದ ವೇಳೆ ಗೋಲ್ಕೊಂಡ ಪೊಲೀಸರು ಟೋಲಿಚೌಕಿ ಚೆಕ್ ಪೋಸ್ಟ್​ ಬಳಿ ಈತನನ್ನು ತಡೆದಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಹನುಮಂತು ಎಂಬುವರು ಈ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ.

  • HG Hanumantu of PS Golconda is placed under suspension for unprofessional conduct. SHO Golconda is given a charge memo for not properly briefing his subordinates in discharge of duties.

    — Anjani Kumar, IPS, Stay Home Stay Safe. (@CPHydCity) April 28, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಪೊಲೀಸ್ ಮುಖ್ಯಸ್ಥರು, ಹನುಮಂತು ಅವರ ನಡವಳಿಗೆ ವೃತ್ತಿಪರವಾಗಿಲ್ಲದಿರುವುದರಿಂದ ಅಮಾನತು ಮಾಡಲಾಗಿದೆ. ಅಲ್ಲದೆ, ಈ ಸಿಬ್ಬಂದಿಗೆ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ತಿಳಿಸದ ಕಾರಣ ಗೋಲ್ಕೊಂಡಾದ ಸ್ಟೇಷನ್ ಹೌಸ್ ಆಫೀಸರ್​ಗೆ ಮೆಮೋ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.