ಶಾಹ್ದೋಲ್ (ಮಧ್ಯಪ್ರದೇಶ): ಉತ್ತರಪ್ರದೇಶ ಮೂಲದ ದರೋಡೆಕೋರ ಅತೀಕ್ ಅಹ್ಮದ್ ಅನ್ಸಾರಿ ಆಪ್ತ ಮಹಮ್ಮದ್ ಅಖ್ತರ್ನನ್ನು ಶಾಹ್ದೋಲ್ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾಹ್ದೋಲ್ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಶುಕ್ಲಾ, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಶಾಹ್ದೋಲ್ಗೆ ಬರಲು ಕಾರಣವೇನು ಮತ್ತು ಕಾನ್ಪುರ ಎನ್ಕೌಂಟರ್ ಆರೋಪಿ ವಿಕಾಸ್ ದುಬೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದಿದ್ದಾರೆ.
ಇನ್ನು ಅಖ್ತರ್, ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಉತ್ತರಪ್ರದೇಶದಲ್ಲಿ ಅನೇಕ ದರೋಡೆಕೋರರನ್ನು ಹತ್ಯೆ ಮಾಡಿದ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾನೆ.
ಅಖ್ತರ್ ವಿರುದ್ಧ ಪ್ರಯಾಗರಾಜ್ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 12ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.