ETV Bharat / bharat

ತಿರುಪತಿಯಲ್ಲಿ ಬ್ರಹ್ಮೋತ್ಸವ ಸಂಭ್ರಮ: ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದ ಜಗನ್​​​

author img

By

Published : Sep 24, 2020, 7:39 AM IST

Updated : Sep 24, 2020, 8:06 AM IST

ಬ್ರಹ್ಮೋತ್ಸವ ಹಿನ್ನೆಲೆ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ಪಾಲ್ಗೊಂಡರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರ ಸಮರ್ಪಿಸಿ, ಗರುಡ ಸೇವೆಯಲ್ಲಿ ಭಾಗಿಯಾದರು.

Brahmotsavam celebrations: CM Jagan Reddy offers silk cloth to Lord Venkateswara at Tirumala
ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದ ಜಗನ್​​ ರೆಡ್ಡಿ

ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯ ತಿರುಮಲದಲ್ಲಿ ಬ್ರಹ್ಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮದಲ್ಲಿ ನಿನ್ನೆ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಸಹ ಪಾಲ್ಗೊಂಡಿದ್ದರು. ದೆಹಲಿಯಲ್ಲಿದ್ದ ಸಿಎಂ ಜಗನ್​​, ವಿಶೇಷ ವಿಮಾನದಲ್ಲಿ ತಿರುಮಲಕ್ಕೆ ಪ್ರಯಾಣ ಬೆಳೆಸಿದ್ದರು.

ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದ ಜಗನ್​​​

ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಜಗನ್​ ಮೋಹನ್​ ರೆಡ್ಡಿ ಪಾಲ್ಗೊಂಡರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರ ಸಮರ್ಪಿಸಿ, ಗರುಡ ಸೇವೆಯಲ್ಲಿ ಭಾಗಿಯಾದರು.

ಇಲ್ಲಿನ ಸಂಪ್ರದಾಯದಂತೆ ರೇಷ್ಮೆ ವಸ್ತ್ರ ಇಟ್ಟಿದ್ದ ಬೆಳ್ಳಿಯ ಹರಿವಾಣವನ್ನು ತಲೆಯ ಮೇಲಿಟ್ಟುಕೊಂಡ ಸಿಎಂ ಜಗನ್ ಮೋಹನ್​​​​ ರೆಡ್ಡಿ, ಅದನ್ನು ಪುರೋಹಿತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಇಂದು ಮತ್ತೆ ತಿಮ್ಮಪ್ಪನ ದರ್ಶನ ಪಡೆದ ಜಗನ್​, ಸುಂದರ ಕಾಂಡ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಕರ್ನಾಟಕ ಭವನಕ್ಕೆ ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲೂ ಭಾಗವಹಿಸಿ, ಅಮರಾವತಿಗೆ ಪ್ರಯಾಣ ಬೆಳೆಸಲಿದ್ದಾರೆ.

ತಿರುಪತಿ (ಆಂಧ್ರ ಪ್ರದೇಶ): ತಿರುಪತಿಯ ತಿರುಮಲದಲ್ಲಿ ಬ್ರಹ್ಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮದಲ್ಲಿ ನಿನ್ನೆ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಸಹ ಪಾಲ್ಗೊಂಡಿದ್ದರು. ದೆಹಲಿಯಲ್ಲಿದ್ದ ಸಿಎಂ ಜಗನ್​​, ವಿಶೇಷ ವಿಮಾನದಲ್ಲಿ ತಿರುಮಲಕ್ಕೆ ಪ್ರಯಾಣ ಬೆಳೆಸಿದ್ದರು.

ತಿಮ್ಮಪ್ಪನಿಗೆ ರೇಷ್ಮೆ ವಸ್ತ್ರ ಸಮರ್ಪಿಸಿದ ಜಗನ್​​​

ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಜಗನ್​ ಮೋಹನ್​ ರೆಡ್ಡಿ ಪಾಲ್ಗೊಂಡರು. ಶ್ರೀ ವೆಂಕಟೇಶ್ವರ ಸ್ವಾಮಿಗೆ ರೇಷ್ಮೆ ವಸ್ತ್ರ ಸಮರ್ಪಿಸಿ, ಗರುಡ ಸೇವೆಯಲ್ಲಿ ಭಾಗಿಯಾದರು.

ಇಲ್ಲಿನ ಸಂಪ್ರದಾಯದಂತೆ ರೇಷ್ಮೆ ವಸ್ತ್ರ ಇಟ್ಟಿದ್ದ ಬೆಳ್ಳಿಯ ಹರಿವಾಣವನ್ನು ತಲೆಯ ಮೇಲಿಟ್ಟುಕೊಂಡ ಸಿಎಂ ಜಗನ್ ಮೋಹನ್​​​​ ರೆಡ್ಡಿ, ಅದನ್ನು ಪುರೋಹಿತರು ಮತ್ತು ಟಿಟಿಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಇಂದು ಮತ್ತೆ ತಿಮ್ಮಪ್ಪನ ದರ್ಶನ ಪಡೆದ ಜಗನ್​, ಸುಂದರ ಕಾಂಡ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಕರ್ನಾಟಕ ಭವನಕ್ಕೆ ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲೂ ಭಾಗವಹಿಸಿ, ಅಮರಾವತಿಗೆ ಪ್ರಯಾಣ ಬೆಳೆಸಲಿದ್ದಾರೆ.

Last Updated : Sep 24, 2020, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.