ETV Bharat / bharat

ರಾಂಚಿಯಲ್ಲಿ ಭಾರೀ ಮಳೆ: ಬೈಕ್​ ಸಮೇತ ಕೊಚ್ಚಿ ಹೋದ ಯುವಕ - ಜಾರ್ಖಂಡ್​ನ ರಾಂಚಿಯಲ್ಲಿ ಮಳೆ

ಜಾರ್ಖಂಡ್​ನ ರಾಂಚಿ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ನೀರಿನ ನಡುವೆ ರಸ್ತೆ ದಾಟಲು ಹೋದ ಯುವಕನೊಬ್ಬ ಕೊಚ್ಚಿ ಹೋಗಿದ್ದಾನೆ.

Bike swept away by the strong current of water
ರಸ್ತೆ ದಾಟುವಾಗ ಕೊಚ್ಚಿ ಹೋದ ಯುವಕರು
author img

By

Published : Sep 9, 2020, 10:43 AM IST

ರಾಂಚಿ (ಜಾರ್ಖಂಡ್​): ರಾಜ್ಯದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ರಾಂಚಿ ನಗರದ ಸದರ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕೋಕರ್ ಖೋರ್ಹಾ ಟೋಲಿಯಲ್ಲಿ ಯುವಕನೊಬ್ಬ ಬೈಕ್​ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಎನ್​ಡಿಆರ್​ಎಫ್​ ತಂಡ ಶೋಧ ಕಾರ್ಯ ನಡೆಸುತ್ತಿದ್ದು, ಯುವಕ ನಾಪತ್ತೆಯಾಗಿ 24 ಗಂಟೆಯಾದರೂ ಯಾವುದೇ ಸುಳಿವು ಸಿಕ್ಕಿಲ್ಲ.

ರಸ್ತೆ ದಾಟುವಾಗ ಕೊಚ್ಚಿ ಹೋದ ಯುವಕರು

ಇದೇ ರೀತಿಯ ಮತ್ತೊಂದು ಘಟನೆ ನಗರದ ಹಿಂದ್​ಪಿರಿ ಪೊಲೀಸ್​ ಠಾಣೆ ವ್ಯಾಪ್ತಿಯ ಕದ್ರು ಸೇತುವೆ ಬಳಿ ನಡೆದಿದೆ. ರಭಸದಿಂದ ಹರಿಯುತ್ತಿದ್ದ ನೀರಿನ ನಡುವೆ ರಸ್ತೆ ದಾಟಲು ಪ್ರಯತ್ನಿಸಿದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್​ ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ರಕ್ಷಿಸಲಾಗಿದೆ.

ರಾಂಚಿ (ಜಾರ್ಖಂಡ್​): ರಾಜ್ಯದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ರಾಂಚಿ ನಗರದ ಸದರ್​ ಪೊಲೀಸ್​ ಠಾಣೆ ವ್ಯಾಪ್ತಿಯ ಕೋಕರ್ ಖೋರ್ಹಾ ಟೋಲಿಯಲ್ಲಿ ಯುವಕನೊಬ್ಬ ಬೈಕ್​ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಎನ್​ಡಿಆರ್​ಎಫ್​ ತಂಡ ಶೋಧ ಕಾರ್ಯ ನಡೆಸುತ್ತಿದ್ದು, ಯುವಕ ನಾಪತ್ತೆಯಾಗಿ 24 ಗಂಟೆಯಾದರೂ ಯಾವುದೇ ಸುಳಿವು ಸಿಕ್ಕಿಲ್ಲ.

ರಸ್ತೆ ದಾಟುವಾಗ ಕೊಚ್ಚಿ ಹೋದ ಯುವಕರು

ಇದೇ ರೀತಿಯ ಮತ್ತೊಂದು ಘಟನೆ ನಗರದ ಹಿಂದ್​ಪಿರಿ ಪೊಲೀಸ್​ ಠಾಣೆ ವ್ಯಾಪ್ತಿಯ ಕದ್ರು ಸೇತುವೆ ಬಳಿ ನಡೆದಿದೆ. ರಭಸದಿಂದ ಹರಿಯುತ್ತಿದ್ದ ನೀರಿನ ನಡುವೆ ರಸ್ತೆ ದಾಟಲು ಪ್ರಯತ್ನಿಸಿದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್​ ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ರಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.