ETV Bharat / bharat

ಬಿಹಾರದಲ್ಲಿ ನಿಲ್ಲದ ಸಿಡಿಲಬ್ಬರ: ಒಂದೇ ದಿನ 16 ಮಂದಿ ಬಲಿ - Bihar lightning

ಬಿಹಾರದಲ್ಲಿ ಮತ್ತೆ ಸಿಡಿಲು ಬಡಿದು 16 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಈ ವರ್ಷ 200ಕ್ಕೂ ಹೆಚ್ಚು ಮಂದಿ ಸಿಡಿಲಿನಿಂದ ಪ್ರಾಣ ಕಳೆದುಕೊಂಡಂತಾಗಿದೆ.

Bihar lightning
ಬಿಹಾರದಲ್ಲಿ ಸಿಡಿಲಿಗೆ 16 ಬಲಿ
author img

By

Published : Jul 20, 2020, 1:31 PM IST

ಪಾಟ್ನಾ: ಬಿಹಾರದ ಒಂಭತ್ತು ಜಿಲ್ಲೆಗಳಲ್ಲಿ ಭಾನುವಾರ ಗುಡುಗು - ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಬರೋಬ್ಬರಿ 16 ಮಂದಿ ಮೃತಪಟ್ಟಿದ್ದಾರೆ.

ಗಯಾದಲ್ಲಿ ನಾಲ್ಕು, ಪೂರ್ಣಿಯಾದಲ್ಲಿ ಮೂವರು, ಬೆಗುಸರಾಯ್ ಮತ್ತು ಜಮುಯಿಯಲ್ಲಿ ತಲಾ ಇಬ್ಬರು ಮತ್ತು ಪಾಟ್ನಾ, ಸಹರ್ಸಾ, ಪೂರ್ವ ಚಂಪಾರಣ್​, ಮಾಧೇಪುರ ಮತ್ತು ದರ್ಬಾಂಗ್​ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಹಾರದಲ್ಲಿ ಈ ವರ್ಷ 200ಕ್ಕೂ ಹೆಚ್ಚು ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಒಂದೇ ದಿನ 83 ಜನ ಬಲಿಯಾಗಿದ್ದರು. ಈಗ ಮತ್ತೆ 16 ಮಂದಿ ಒಂದೇ ದಿನ ಮೃತಪಟ್ಟಿದ್ದಾರೆ.

ನೈಸರ್ಗಿಕ ವಿಕೋಪಕ್ಕೆ ಬಲಿಯಾದವರಿಗೆ ಸಿಎಂ ನಿತೀಶ್​ ಕುಮಾರ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಪಾಟ್ನಾ: ಬಿಹಾರದ ಒಂಭತ್ತು ಜಿಲ್ಲೆಗಳಲ್ಲಿ ಭಾನುವಾರ ಗುಡುಗು - ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಬರೋಬ್ಬರಿ 16 ಮಂದಿ ಮೃತಪಟ್ಟಿದ್ದಾರೆ.

ಗಯಾದಲ್ಲಿ ನಾಲ್ಕು, ಪೂರ್ಣಿಯಾದಲ್ಲಿ ಮೂವರು, ಬೆಗುಸರಾಯ್ ಮತ್ತು ಜಮುಯಿಯಲ್ಲಿ ತಲಾ ಇಬ್ಬರು ಮತ್ತು ಪಾಟ್ನಾ, ಸಹರ್ಸಾ, ಪೂರ್ವ ಚಂಪಾರಣ್​, ಮಾಧೇಪುರ ಮತ್ತು ದರ್ಬಾಂಗ್​ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಹಾರದಲ್ಲಿ ಈ ವರ್ಷ 200ಕ್ಕೂ ಹೆಚ್ಚು ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಒಂದೇ ದಿನ 83 ಜನ ಬಲಿಯಾಗಿದ್ದರು. ಈಗ ಮತ್ತೆ 16 ಮಂದಿ ಒಂದೇ ದಿನ ಮೃತಪಟ್ಟಿದ್ದಾರೆ.

ನೈಸರ್ಗಿಕ ವಿಕೋಪಕ್ಕೆ ಬಲಿಯಾದವರಿಗೆ ಸಿಎಂ ನಿತೀಶ್​ ಕುಮಾರ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.