ETV Bharat / bharat

'ಪ್ರತಿಕೂಲ ಘಟನೆ' ಕೋವಿಡ್-19 ಲಸಿಕೆ ಪ್ರಯೋಗದ ಟೈಮ್​ಲೈನ್​ ಮೇಲೆ ಪರಿಣಾಮ ಬೀರಲ್ಲ: ಆರೋಗ್ಯ ಸಚಿವಾಲಯ

author img

By

Published : Dec 2, 2020, 3:17 AM IST

ಪ್ರತಿಕೂಲ ಘಟನೆಯು ಲಸಿಕೆಯ ಟೈಮ್‌ಲೈನ್ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

Adverse event has not affected timelines of COVID-19 vaccine trial
ಲಸಿಕೆ ಪ್ರಯೋಗದ ಟೈಮ್​ಲೈನ್​ ಮೇಲೆ ಪರಿಣಾಮ ಬೀರಲ್ಲ

ನವದೆಹಲಿ: ಚೆನ್ನೈನಲ್ಲಿ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಅಡ್ಡಪರಿಣಾಮ ಬೀರಿದೆ ಎಂಬ ಘಟನೆಯು ವ್ಯಾಕ್ಸಿನ್ ಪ್ರಯೋಗದ ಟೈಮ್‌ಲೈನ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಪ್ರತಿಕೂಲ ಘಟನೆಯ ಸಂದರ್ಭದಲ್ಲಿ, ಸಮಿತಿ ಗಮನಿಸಿ ತನ್ನ ವರದಿಯನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್​ಗೆ ನೀಡುತ್ತದೆ ಎಂದು ಅವರು ಹೇಳಿದರು. ಕೋವಿಶೀಲ್ಡ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಚೆನ್ನೈ ಸ್ವಯಂಸೇವಕರೊಬ್ಬರು ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದರು. ಈ ಕುರಿತು ರಾಜೇಶ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.

"ಪ್ರತಿಕೂಲ ಘಟನೆಯು ಲಸಿಕೆಯ ಟೈಮ್‌ಲೈನ್ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ ಆದ್ದರಿಂದ ಪ್ರಕರಣದ ನಿರ್ದಿಷ್ಟತೆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿದ್ದಾರೆ.

ಕ್ಲಿನಿಕಲ್ ಪ್ರಯೋಗ ಪ್ರಾರಂಭವಾದಾಗ, ಅದರಲ್ಲಿ ಭಾಗವಹಿಸುವವರು ಪೂರ್ವ ತಿಳುವಳಿಕೆಯುಳ್ಳ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುತ್ತಾರೆ ಎಂದು ಭೂಷಣ್ ಹೇಳಿದ್ದಾರೆ. ಇದು ಜಾಗತಿಕ ಅಭ್ಯಾಸವಾಗಿದೆ, ಇದು ಎಲ್ಲಾ ದೇಶಗಳಲ್ಲೂ ನಡೆಯುತ್ತದೆ. ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಅಡ್ಡಪರಿಣಾಮ ಬೀರಬಹುದು ಎಂದು ಮೊದಲೇ ಮಾಹಿತಿ ನೀಡಿರುತ್ತಾರೆ ಎಂದು ಹೇಳಿದ್ದಾರೆ.

ನವದೆಹಲಿ: ಚೆನ್ನೈನಲ್ಲಿ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದವರಿಗೆ ಅಡ್ಡಪರಿಣಾಮ ಬೀರಿದೆ ಎಂಬ ಘಟನೆಯು ವ್ಯಾಕ್ಸಿನ್ ಪ್ರಯೋಗದ ಟೈಮ್‌ಲೈನ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಪ್ರತಿಕೂಲ ಘಟನೆಯ ಸಂದರ್ಭದಲ್ಲಿ, ಸಮಿತಿ ಗಮನಿಸಿ ತನ್ನ ವರದಿಯನ್ನು ಭಾರತದ ಡ್ರಗ್ ಕಂಟ್ರೋಲರ್ ಜನರಲ್​ಗೆ ನೀಡುತ್ತದೆ ಎಂದು ಅವರು ಹೇಳಿದರು. ಕೋವಿಶೀಲ್ಡ್ ಲಸಿಕೆ ಪ್ರಯೋಗದಲ್ಲಿ ಭಾಗವಹಿಸಿದ ಚೆನ್ನೈ ಸ್ವಯಂಸೇವಕರೊಬ್ಬರು ಅಡ್ಡಪರಿಣಾಮದಿಂದ ಬಳಲುತ್ತಿರುವುದಾಗಿ ಆರೋಪಿಸಿದ್ದರು. ಈ ಕುರಿತು ರಾಜೇಶ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.

"ಪ್ರತಿಕೂಲ ಘಟನೆಯು ಲಸಿಕೆಯ ಟೈಮ್‌ಲೈನ್ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ ಆದ್ದರಿಂದ ಪ್ರಕರಣದ ನಿರ್ದಿಷ್ಟತೆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದಿದ್ದಾರೆ.

ಕ್ಲಿನಿಕಲ್ ಪ್ರಯೋಗ ಪ್ರಾರಂಭವಾದಾಗ, ಅದರಲ್ಲಿ ಭಾಗವಹಿಸುವವರು ಪೂರ್ವ ತಿಳುವಳಿಕೆಯುಳ್ಳ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುತ್ತಾರೆ ಎಂದು ಭೂಷಣ್ ಹೇಳಿದ್ದಾರೆ. ಇದು ಜಾಗತಿಕ ಅಭ್ಯಾಸವಾಗಿದೆ, ಇದು ಎಲ್ಲಾ ದೇಶಗಳಲ್ಲೂ ನಡೆಯುತ್ತದೆ. ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಅಡ್ಡಪರಿಣಾಮ ಬೀರಬಹುದು ಎಂದು ಮೊದಲೇ ಮಾಹಿತಿ ನೀಡಿರುತ್ತಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.