ETV Bharat / bharat

ಹೆರಿಗೆ ನೋವಿನಲ್ಲೇ 4 ಕಿಮೀ ಸಾಗಿದ ಗರ್ಭಿಣಿ: ಒಡಿಶಾದಲ್ಲಿ ಅಮಾನವೀಯ ಘಟನೆ

author img

By

Published : Aug 30, 2020, 3:13 PM IST

ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಒಡಿಶಾದ ನಬರಂಗಪುರ ಜಿಲ್ಲೆಯ ಗರ್ಭಿಣಿಯೊಬ್ಬಳನ್ನು ಕುಟುಂಬಸ್ಥರು ಸುಮಾರು 4 ಕಿ.ಮೀ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.

ಸ್ಟ್ರೆಚರ್​ ಮೂಲಕ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿರುವ ಕುಟುಂಬಸ್ಥರು
ಸ್ಟ್ರೆಚರ್​ ಮೂಲಕ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿರುವ ಕುಟುಂಬಸ್ಥರು

ನಬರಂಗಪುರ (ಒಡಿಶಾ): ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಗರ್ಭಿಣಿಯೊಬ್ಬಳನ್ನು ಕುಟುಂಬಸ್ಥರು ಸ್ಟ್ರೆಚರ್​ ಮೂಲಕ ಸುಮಾರು 4 ಕಿಮೀ ಹೊತ್ತು ಸಾಗಿ ಬಳಿಕ ಆಸ್ಪತ್ರೆಗೆ ದಾಖಲಿಸಿರುವ ಅಮಾನವೀಯ ಘಟನೆ ನಬರಂಗ್‌ಪುರ ಜಿಲ್ಲೆಯ ಮೈದಾಲ್‌ಪುರ ಗ್ರಾಮದಲ್ಲಿ ನಡೆದಿದೆ.

ಸ್ಟ್ರೆಚರ್​ ಮೂಲಕ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿರುವ ಕುಟುಂಬಸ್ಥರು

ಭಾನುವಾರದಂದು ದಮೀ ಸಂತ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದು, ಕಳಪೆ ರಸ್ತೆ ಹಿನ್ನೆಲೆಯಲ್ಲಿ ಬರಲು ಅಸಾಧ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಹಾನಿಗೊಳಗಾಗಿದೆ. ಇನ್ನು ಇದೇ ರಸ್ತೆಯಲ್ಲಿ ಗರ್ಭಿಣಿಯನ್ನು ಕುಟುಂಬದ ಸದಸ್ಯರು ಕಾಲ್ನಡಿಗೆ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

4 ಕಿ.ಮೀ ಸಾಗಿದ ನಂತರ ಮಹಿಳೆಯನ್ನು ಮೈದಾಲ್ಪುರದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಾಪದಹಂಡಿ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಒಡಿಶಾ ಸರ್ಕಾರದಿಂದ ಈಗಾಗಲೇ ಗರ್ಭಿಣಿಯರಿಗಾಗಿ ಹಲವಾರು ಯೋಜನೆಗಳಿವೆ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸುರಕ್ಷಿತ ಚಿಕಿತ್ಸೆಯನ್ನು ಒದಗಿಸಲು ಸರ್ಕಾರವು ಮಾತೃತ್ವ ಯೋಜನೆಯನ್ನು ಸ್ಥಾಪಿಸಿದೆ. ಆದರೆ ಅವುಗಳ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪ.

ನಬರಂಗಪುರ (ಒಡಿಶಾ): ರಸ್ತೆ ಸಂಪರ್ಕ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಗರ್ಭಿಣಿಯೊಬ್ಬಳನ್ನು ಕುಟುಂಬಸ್ಥರು ಸ್ಟ್ರೆಚರ್​ ಮೂಲಕ ಸುಮಾರು 4 ಕಿಮೀ ಹೊತ್ತು ಸಾಗಿ ಬಳಿಕ ಆಸ್ಪತ್ರೆಗೆ ದಾಖಲಿಸಿರುವ ಅಮಾನವೀಯ ಘಟನೆ ನಬರಂಗ್‌ಪುರ ಜಿಲ್ಲೆಯ ಮೈದಾಲ್‌ಪುರ ಗ್ರಾಮದಲ್ಲಿ ನಡೆದಿದೆ.

ಸ್ಟ್ರೆಚರ್​ ಮೂಲಕ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿರುವ ಕುಟುಂಬಸ್ಥರು

ಭಾನುವಾರದಂದು ದಮೀ ಸಂತ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದು, ಕಳಪೆ ರಸ್ತೆ ಹಿನ್ನೆಲೆಯಲ್ಲಿ ಬರಲು ಅಸಾಧ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಹಾನಿಗೊಳಗಾಗಿದೆ. ಇನ್ನು ಇದೇ ರಸ್ತೆಯಲ್ಲಿ ಗರ್ಭಿಣಿಯನ್ನು ಕುಟುಂಬದ ಸದಸ್ಯರು ಕಾಲ್ನಡಿಗೆ ಮೂಲಕವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

4 ಕಿ.ಮೀ ಸಾಗಿದ ನಂತರ ಮಹಿಳೆಯನ್ನು ಮೈದಾಲ್ಪುರದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಪಾಪದಹಂಡಿ ಸಮುದಾಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಒಡಿಶಾ ಸರ್ಕಾರದಿಂದ ಈಗಾಗಲೇ ಗರ್ಭಿಣಿಯರಿಗಾಗಿ ಹಲವಾರು ಯೋಜನೆಗಳಿವೆ. ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸುರಕ್ಷಿತ ಚಿಕಿತ್ಸೆಯನ್ನು ಒದಗಿಸಲು ಸರ್ಕಾರವು ಮಾತೃತ್ವ ಯೋಜನೆಯನ್ನು ಸ್ಥಾಪಿಸಿದೆ. ಆದರೆ ಅವುಗಳ ಸೌಲಭ್ಯ ಮಾತ್ರ ಸಿಗುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.