ETV Bharat / bharat

ಸಾಯುವ 8 ದಿನ ಮೊದಲು ಮೋದಿ ಪರ ಪ್ರಚಾರ ಮಾಡುವ ಉತ್ಸಾಹ ತೋರಿದ್ದ ಪರಿಕ್ಕರ್‌- ಮಹಾ ಸಿಎಂ ಫಡ್ನವಿಸ್

author img

By

Published : Apr 14, 2019, 9:46 PM IST

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ರಫೇಲ್​ ಒಪ್ಪಂದದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಪಾದನೆ ಮಾಡಿದ್ದಾಗ ಪರಿಕ್ಕರ್, ಅದಕ್ಕೆ ಪ್ರತಿಕ್ರಿಯಿಸಿ ಸಾರಾಸಗಟಾಗಿ ತಳಿಹಾಕಿದ್ದರು ಎಂದು ಮಹಾ ಸಿಎಂ ದೇವೀಂದ್ರ ಫಡ್ನವಿಸ್ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಗೋವಾದ ಮಾಜಿ ಮುಖ್ಯಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರು ಸಾಯುವ ಎಂಟು ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಲು ಬಯಸಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಸ್ಮರಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲ್ಹಾಪುರದಲ್ಲಿ ಎನ್​ಸಿಪಿ ನಾಯಕ ಶರದ್ ಪವಾರ್ ಅವರು ಸುದ್ದಿಗೋಷ್ಠಿ ನಡೆಸಿ ರಫೇಲ್​ ಒಪ್ಪಂದ ವಿರೋಧಿಸಿದ್ದರು. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಗೋವಾ ರಾಜಕಾರಣಕ್ಕೆ ಹಿಂದುರುಗಿದ್ದರು ಎಂದು ಆಪಾದಿಸಿದ್ದರು. ಪರಿಕ್ಕರ್ ಇದ್ದನ್ನು ಅಲ್ಲಗಳೆದಿದ್ದರು. ಪರಿಕ್ಕರ್ ಸಾವಿನ ಬಳಿಕ ಇಂತಹ ಹೇಳಿಕೆ ನೀಡುವುದು ಸಲ್ಲದು. ಒಂದು ವೇಳೆ ಅವರು ಬದುಕಿದ್ದರೆ ಇದಕ್ಕೆ ತಕ್ಕುದಾದ ಉತ್ತರ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಮನೋಹರ್​ ಪರಿಕ್ಕರ್ ಸಾವನ್ನಪ್ಪುವ ಎಂಟು ದಿನಗಳ ಮೊದಲು ಮೋದಿ ಪರ ಪ್ರಚಾರ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಕೋರಿದ್ದರು. ಒಂದೆರಡು ಸಮಾವೇಶದಲ್ಲಿ ಪ್ರಚಾರ ಮಾಡುವ ಅವಕಾಶ ಲಭಿಸಲಿದೆ ಎಂಬ ಭಾವನೆ ಹೊಂದಿದ್ದರು ಎಂದು ಫಡ್ನವಿಸ್​ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ರಫೇಲ್​ ಒಪ್ಪಂದದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಪಾದನೆ ಮಾಡಿದ್ದಾಗ ಪರಿಕ್ಕರ್, ಅದಕ್ಕೆ ಪ್ರತಿಕ್ರಿಯಿಸಿ ಸಾರಾಸಗಟಾಗಿ ತಳಿಹಾಕಿದ್ದರು. ರಾಹುಲ್ ಆರೋಪಕ್ಕೆ ಹುಚ್ಚು ಜೋಕೆಂದು ಪ್ರತ್ಯುತ್ತರ ನೀಡುತ್ತಿದ್ದರು. ಇಂದು ಬದುಕಿದ್ದರೆ ಅಂತಹದೆ ಪ್ರತ್ಯುತ್ತರ ನೀಡುತ್ತಿದ್ದರು ಎಂದು ಸ್ಮರಿಸಿಕೊಂಡರು.

ನವದೆಹಲಿ: ಗೋವಾದ ಮಾಜಿ ಮುಖ್ಯಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರು ಸಾಯುವ ಎಂಟು ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸಲು ಬಯಸಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಸ್ಮರಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲ್ಹಾಪುರದಲ್ಲಿ ಎನ್​ಸಿಪಿ ನಾಯಕ ಶರದ್ ಪವಾರ್ ಅವರು ಸುದ್ದಿಗೋಷ್ಠಿ ನಡೆಸಿ ರಫೇಲ್​ ಒಪ್ಪಂದ ವಿರೋಧಿಸಿದ್ದರು. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಗೋವಾ ರಾಜಕಾರಣಕ್ಕೆ ಹಿಂದುರುಗಿದ್ದರು ಎಂದು ಆಪಾದಿಸಿದ್ದರು. ಪರಿಕ್ಕರ್ ಇದ್ದನ್ನು ಅಲ್ಲಗಳೆದಿದ್ದರು. ಪರಿಕ್ಕರ್ ಸಾವಿನ ಬಳಿಕ ಇಂತಹ ಹೇಳಿಕೆ ನೀಡುವುದು ಸಲ್ಲದು. ಒಂದು ವೇಳೆ ಅವರು ಬದುಕಿದ್ದರೆ ಇದಕ್ಕೆ ತಕ್ಕುದಾದ ಉತ್ತರ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಮನೋಹರ್​ ಪರಿಕ್ಕರ್ ಸಾವನ್ನಪ್ಪುವ ಎಂಟು ದಿನಗಳ ಮೊದಲು ಮೋದಿ ಪರ ಪ್ರಚಾರ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಕೋರಿದ್ದರು. ಒಂದೆರಡು ಸಮಾವೇಶದಲ್ಲಿ ಪ್ರಚಾರ ಮಾಡುವ ಅವಕಾಶ ಲಭಿಸಲಿದೆ ಎಂಬ ಭಾವನೆ ಹೊಂದಿದ್ದರು ಎಂದು ಫಡ್ನವಿಸ್​ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ರಫೇಲ್​ ಒಪ್ಪಂದದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಪಾದನೆ ಮಾಡಿದ್ದಾಗ ಪರಿಕ್ಕರ್, ಅದಕ್ಕೆ ಪ್ರತಿಕ್ರಿಯಿಸಿ ಸಾರಾಸಗಟಾಗಿ ತಳಿಹಾಕಿದ್ದರು. ರಾಹುಲ್ ಆರೋಪಕ್ಕೆ ಹುಚ್ಚು ಜೋಕೆಂದು ಪ್ರತ್ಯುತ್ತರ ನೀಡುತ್ತಿದ್ದರು. ಇಂದು ಬದುಕಿದ್ದರೆ ಅಂತಹದೆ ಪ್ರತ್ಯುತ್ತರ ನೀಡುತ್ತಿದ್ದರು ಎಂದು ಸ್ಮರಿಸಿಕೊಂಡರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.