ETV Bharat / bharat

ನಾಳೆ ಪ್ರಣಬ್​​ ಮುಖರ್ಜಿ ಅಂತ್ಯಕ್ರಿಯೆ: ದೇಶಾದ್ಯಂತ 7 ದಿನ ಶೋಕಾಚರಣೆ

author img

By

Published : Aug 31, 2020, 8:28 PM IST

ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್‌ ಮುಖರ್ಜಿ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ದೇಶಾದ್ಯಂತ 7 ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ.

Pranab Mukherjee
Pranab Mukherjee

ನವದೆಹಲಿ: ಅನಾರೋಗ್ಯದ ಕಾರಣ ಬರೋಬ್ಬರಿ 21 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಇಂದು ಕೊನೆಯುಸಿರೆಳೆದಿದ್ದಾರೆ. ದೇಶದ 13ನೇ ರಾಷ್ಟ್ರಪತಿ, ಕಾಂಗ್ರೆಸ್​​ನ ಟ್ರಬಲ್​ ಶೂಟರ್​​, ಚಾಣಾಕ್ಷ ರಾಜಕಾರಣಿ ಎಂಬ ಹೆಸರು ಗಳಿಸಿದ್ದ ಅವರ ನಿಧನಕ್ಕೆ ದೇಶವೇ ತೀವ್ರ ಸಂತಾಪ ಸೂಚಿಸಿದೆ.

  • Seven-day state mourning will be observed throughout India from 31 August to 6 September, both days inclusive: Govt of India #PranabMukherjee

    — ANI (@ANI) August 31, 2020 " class="align-text-top noRightClick twitterSection" data=" ">

ಭಾರತ ರತ್ನ ಪುರಸ್ಕೃತ ಪ್ರಣಬ್​​ ಮುಖರ್ಜಿ ನಿಧನಕ್ಕೆ ಗೌರವಾರ್ಥವಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಹೀಗಾಗಿ ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುತ್ತಿದೆ. ಇಂದಿನಿಂದ ಸೆಪ್ಟಂಬರ್​ 6ರವರೆಗೆ ಶೋಕಾಚರಣೆ ಜಾರಿಯಲ್ಲಿರಲಿದೆ.

ಸಂಸತ್​​ ಭವನದಲ್ಲಿನ ರಾಷ್ಟ್ರ ಧ್ವಜವನ್ನ ಅರ್ಧಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಣಬ್ ಮುಖರ್ಜಿ ಅವರ ಅಂತಿಮ ವಿಧಿ-ವಿಧಾನಗಳು ಮಂಗಳವಾರ ದೆಹಲಿಯಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.

ನವದೆಹಲಿ: ಅನಾರೋಗ್ಯದ ಕಾರಣ ಬರೋಬ್ಬರಿ 21 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಇಂದು ಕೊನೆಯುಸಿರೆಳೆದಿದ್ದಾರೆ. ದೇಶದ 13ನೇ ರಾಷ್ಟ್ರಪತಿ, ಕಾಂಗ್ರೆಸ್​​ನ ಟ್ರಬಲ್​ ಶೂಟರ್​​, ಚಾಣಾಕ್ಷ ರಾಜಕಾರಣಿ ಎಂಬ ಹೆಸರು ಗಳಿಸಿದ್ದ ಅವರ ನಿಧನಕ್ಕೆ ದೇಶವೇ ತೀವ್ರ ಸಂತಾಪ ಸೂಚಿಸಿದೆ.

  • Seven-day state mourning will be observed throughout India from 31 August to 6 September, both days inclusive: Govt of India #PranabMukherjee

    — ANI (@ANI) August 31, 2020 " class="align-text-top noRightClick twitterSection" data=" ">

ಭಾರತ ರತ್ನ ಪುರಸ್ಕೃತ ಪ್ರಣಬ್​​ ಮುಖರ್ಜಿ ನಿಧನಕ್ಕೆ ಗೌರವಾರ್ಥವಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಹೀಗಾಗಿ ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುತ್ತಿದೆ. ಇಂದಿನಿಂದ ಸೆಪ್ಟಂಬರ್​ 6ರವರೆಗೆ ಶೋಕಾಚರಣೆ ಜಾರಿಯಲ್ಲಿರಲಿದೆ.

ಸಂಸತ್​​ ಭವನದಲ್ಲಿನ ರಾಷ್ಟ್ರ ಧ್ವಜವನ್ನ ಅರ್ಧಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಣಬ್ ಮುಖರ್ಜಿ ಅವರ ಅಂತಿಮ ವಿಧಿ-ವಿಧಾನಗಳು ಮಂಗಳವಾರ ದೆಹಲಿಯಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.