ETV Bharat / bharat

'ಇರಾನ್​ನಲ್ಲಿರುವ ಎಲ್ಲ 250 ಭಾರತೀಯ ಯಾತ್ರಿಗಳು ಕೋವಿಡ್​ ಪಾಸಿಟಿವ್​'

author img

By

Published : Apr 1, 2020, 4:07 PM IST

ಇರಾನ್​ಗೆ ತೆರಳಿದ್ದ ಎಲ್ಲ 250 ಭಾರತೀಯರಿಗೆ ಕೋವಿಡ್​ ಸೋಂಕು ತಗುಲಿದೆ. ಆದರೆ, ವಿಮಾನಯಾನ ಸಂಪರ್ಕ ಕಡಿತಗೊಂಡಿರುವುದರಿಂದ ಅವರನ್ನು ಸದ್ಯಕ್ಕೆ ಮರಳಿ ಕರೆತರಲು ಸಾಧ್ಯವಾಗುತ್ತಿಲ್ಲ. ಅನುಕೂಲಕರ ಸಂದರ್ಭ ನೋಡಿಕೊಂಡು ಅವರನ್ನು ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

250-indians-stranded-in-iran
supreme court

ಹೊಸದಿಲ್ಲಿ: ಇರಾನ್​ನ ಕೋಮ್​ನಲ್ಲಿ ಸಿಲುಕಿರುವ ಎಲ್ಲ 250 ಭಾರತೀಯ ಯಾತ್ರಿಕರಿಗೆ ಕೋವಿಡ್​-19 ಸೋಂಕು ತಗುಲಿದೆ ಹಾಗೂ ಅವರನ್ನು ಮರಳಿ ಕರೆತರಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಬುಧವಾರ ತಿಳಿಸಿದೆ.

ಇರಾನ್​ನಲ್ಲಿ ಸಿಲುಕಿರುವ ಭಾರತೀಯರ ಆರೋಗ್ಯದ ಬಗ್ಗೆ ನಿಗಾವಹಿಸಲು ಹಾಗೂ ಅವರೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶನ ನೀಡಲು ಚಿಂತಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

ನ್ಯಾ. ಡಿ.ವೈ. ಚಂದ್ರಚೂಡ್​ ಮತ್ತು ಎಂ.ಆರ್. ಶಹಾ ಅವರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಗಂಭಿರವಾಗಿ ವರ್ತಿಸುತ್ತಿದೆ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿತು.

ಕೇಂದ್ರ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್​ ತುಷಾರ ಮೆಹ್ತಾ, ಈಗಾಗಲೇ ಇರಾನ್​ನಲ್ಲಿ ಸಿಲುಕಿದ್ದ ಬಹುತೇಕ ಭಾರತೀಯರನ್ನು ಕರೆ ತರಲಾಗಿದೆ ಎಂದು ತಿಳಿಸಿದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂಜಯ ಹೆಗ್ಡೆ, ಇರಾನ್​ನಲ್ಲಿನ ಎಲ್ಲ ಭಾರತೀಯರನ್ನು ಕರೆತರಲಾಗಿಲ್ಲ. ಈಗಲೂ ಅಲ್ಲಿ ಸಿಲುಕಿರುವ, ಕೋವಿಡ್-19 ಪಾಸಿಟಿವ್​ ಆಗಿರುವ 250 ಭಾರತೀಯರು ಇರಾನ್ ಅಧಿಕಾರಿಗಳ ಕರುಣೆಯಲ್ಲಿ ಬದುಕುವಂತಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ತುಷಾರ ಮೆಹ್ತಾ, ​ಪ್ರಸ್ತುತ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ರಾಯಭಾರ ಆ ಎಲ್ಲ 250 ಜನರ ಸಂಪರ್ಕದಲ್ಲಿದೆ. ಅನುಕೂಲಕರ ಸಂದರ್ಭ ಒದಗಿ ಬಂದಾಗ ಅವರನ್ನು ಮರಳಿ ಕರೆತರಲಾಗುವುದು ಎಂದರು.

ಹೊಸದಿಲ್ಲಿ: ಇರಾನ್​ನ ಕೋಮ್​ನಲ್ಲಿ ಸಿಲುಕಿರುವ ಎಲ್ಲ 250 ಭಾರತೀಯ ಯಾತ್ರಿಕರಿಗೆ ಕೋವಿಡ್​-19 ಸೋಂಕು ತಗುಲಿದೆ ಹಾಗೂ ಅವರನ್ನು ಮರಳಿ ಕರೆತರಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಬುಧವಾರ ತಿಳಿಸಿದೆ.

ಇರಾನ್​ನಲ್ಲಿ ಸಿಲುಕಿರುವ ಭಾರತೀಯರ ಆರೋಗ್ಯದ ಬಗ್ಗೆ ನಿಗಾವಹಿಸಲು ಹಾಗೂ ಅವರೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶನ ನೀಡಲು ಚಿಂತಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.

ನ್ಯಾ. ಡಿ.ವೈ. ಚಂದ್ರಚೂಡ್​ ಮತ್ತು ಎಂ.ಆರ್. ಶಹಾ ಅವರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಗಂಭಿರವಾಗಿ ವರ್ತಿಸುತ್ತಿದೆ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿತು.

ಕೇಂದ್ರ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್​ ತುಷಾರ ಮೆಹ್ತಾ, ಈಗಾಗಲೇ ಇರಾನ್​ನಲ್ಲಿ ಸಿಲುಕಿದ್ದ ಬಹುತೇಕ ಭಾರತೀಯರನ್ನು ಕರೆ ತರಲಾಗಿದೆ ಎಂದು ತಿಳಿಸಿದರು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂಜಯ ಹೆಗ್ಡೆ, ಇರಾನ್​ನಲ್ಲಿನ ಎಲ್ಲ ಭಾರತೀಯರನ್ನು ಕರೆತರಲಾಗಿಲ್ಲ. ಈಗಲೂ ಅಲ್ಲಿ ಸಿಲುಕಿರುವ, ಕೋವಿಡ್-19 ಪಾಸಿಟಿವ್​ ಆಗಿರುವ 250 ಭಾರತೀಯರು ಇರಾನ್ ಅಧಿಕಾರಿಗಳ ಕರುಣೆಯಲ್ಲಿ ಬದುಕುವಂತಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ತುಷಾರ ಮೆಹ್ತಾ, ​ಪ್ರಸ್ತುತ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ರಾಯಭಾರ ಆ ಎಲ್ಲ 250 ಜನರ ಸಂಪರ್ಕದಲ್ಲಿದೆ. ಅನುಕೂಲಕರ ಸಂದರ್ಭ ಒದಗಿ ಬಂದಾಗ ಅವರನ್ನು ಮರಳಿ ಕರೆತರಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.