ETV Bharat / bharat

ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳ್ತಿದ್ದಾಗ ಅತ್ಯಾಚಾರ; ರಾಜಸ್ತಾನದಲ್ಲಿ ಕಾಮುಕರ ಅಟ್ಟಹಾಸ

author img

By

Published : Sep 11, 2019, 6:54 PM IST

ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ಅಪಹರಿಸಿರುವ ಕಾಮುಕರು ಅತ್ಯಾಚಾರಗೈದಿರುವ ಪೈಶಾಚಿಕ ಪ್ರಕರಣ ರಾಜಸ್ಥಾನದ ಬಿಲ್ವಾರ್​ ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಜೋಧಪುರ: ಸ್ನೇಹಿತರೊಂದಿಗೆ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಮೂವರು ಕಾಮುಕರು 15 ವರ್ಷದ ಬಾಲಕಿಯನ್ನು ಕಿಡ್ನಾಪ್‌ ಮಾಡಿ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ ಬಿಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ.

ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಮೂವರು ಕಾಮುಕರು ಆಕೆಯ ಗೆಳೆಯರನ್ನು ಥಳಿಸಿದ್ದು, ತದನಂತರ ಬಾಲಕಿ ಅಪಹರಿಸಿ, ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಿಳೆ ಸರಿಸುಮಾರು ಅರ್ಧ ಕಿ.ಮೀಟರ್​ ಬೆತ್ತಲೆಯಾಗಿ ಓಡಿ ಹೋಗಿದ್ದಾಳೆ. ಈ ವೇಳೆ ಆಕೆಯನ್ನು ಗುರುತು ಹಿಡಿದಿರುವ ಸ್ನೇಹಿತನೋರ್ವ ಬಟ್ಟೆ ನೀಡಿ, ತದನಂತರ ಮನೆಗೆ ಕರೆದೊಯ್ದಿದ್ದಾನೆ.

ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಆರೋಪಿಗಳಾದ ರಾಜು, ಕೈಲಾಶ್​ ಹಾಗೂ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ಈ ಘಟನೆ ನಡೆದಿದ್ದು ರಾಜಸ್ಥಾನದ ರಾಜಧಾನಿ ಜೈಪುರ್​​ನಿಂದ 250 ಕಿ.ಮೀಟರ್​ ದೂರದಲ್ಲಿದೆ ಬಿಲ್ವಾರ್​ ಜಿಲ್ಲೆ. ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ಮದ್ಯಪಾನ ಮಾಡಿ ಕುಳಿತಿದ್ದ ಮೂವರು ಈ ಕೃತ್ಯ ಎಸಗಿರುವುದಾಗಿ ಪೊಲೀಸ್​ ಅಧಿಕಾರಿ ಭರತ್​ ಸಿಂಗ್​ ತಿಳಿಸಿದ್ದಾರೆ. ಸಂತ್ರಸ್ತೆ ಮೈಮೇಲೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಜೋಧಪುರ: ಸ್ನೇಹಿತರೊಂದಿಗೆ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಮೂವರು ಕಾಮುಕರು 15 ವರ್ಷದ ಬಾಲಕಿಯನ್ನು ಕಿಡ್ನಾಪ್‌ ಮಾಡಿ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ ಬಿಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ.

ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಮೂವರು ಕಾಮುಕರು ಆಕೆಯ ಗೆಳೆಯರನ್ನು ಥಳಿಸಿದ್ದು, ತದನಂತರ ಬಾಲಕಿ ಅಪಹರಿಸಿ, ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಿಳೆ ಸರಿಸುಮಾರು ಅರ್ಧ ಕಿ.ಮೀಟರ್​ ಬೆತ್ತಲೆಯಾಗಿ ಓಡಿ ಹೋಗಿದ್ದಾಳೆ. ಈ ವೇಳೆ ಆಕೆಯನ್ನು ಗುರುತು ಹಿಡಿದಿರುವ ಸ್ನೇಹಿತನೋರ್ವ ಬಟ್ಟೆ ನೀಡಿ, ತದನಂತರ ಮನೆಗೆ ಕರೆದೊಯ್ದಿದ್ದಾನೆ.

ಪೋಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಆರೋಪಿಗಳಾದ ರಾಜು, ಕೈಲಾಶ್​ ಹಾಗೂ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಸೋಮವಾರ ಈ ಘಟನೆ ನಡೆದಿದ್ದು ರಾಜಸ್ಥಾನದ ರಾಜಧಾನಿ ಜೈಪುರ್​​ನಿಂದ 250 ಕಿ.ಮೀಟರ್​ ದೂರದಲ್ಲಿದೆ ಬಿಲ್ವಾರ್​ ಜಿಲ್ಲೆ. ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ಮದ್ಯಪಾನ ಮಾಡಿ ಕುಳಿತಿದ್ದ ಮೂವರು ಈ ಕೃತ್ಯ ಎಸಗಿರುವುದಾಗಿ ಪೊಲೀಸ್​ ಅಧಿಕಾರಿ ಭರತ್​ ಸಿಂಗ್​ ತಿಳಿಸಿದ್ದಾರೆ. ಸಂತ್ರಸ್ತೆ ಮೈಮೇಲೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

Intro:Body:

ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ರೇಪ್​... ರಕ್ಷಿಸಿಕೊಳ್ಳಲು ಬೆತ್ತಲೆಯಾಗಿ ಓಡಿದ ಬಾಲಕಿ! 



ಜೋಧಪುರ: ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮೂವರು ಕಾಮುಕರು 15 ವರ್ಷದ ಬಾಲಕಿ ಅಪಹರಣ ಮಾಡಿ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ ಭಿಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ. 



ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಮೂವರು ಕಾಮುಕರು ಆಕೆಯ ಗೆಳೆಯರನ್ನ ಥಳಿಸಿದ್ದು, ತದನಂತರ ಬಾಲಕಿ ಅಪಹರಣ ಮಾಡಿ, ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಹಿಳೆ ಸರಿಸುಮಾರು ಅರ್ಧ ಕಿ.ಮೀಟರ್​ ಬೆತ್ತಲೆಯಾಗಿ ಓಡಿ ಹೋಗಿದ್ದಾಳೆ. 



ಈ ವೇಳೆ ಆಕೆಯನ್ನ ಗುರುತು ಹಿಡಿದಿರುವ ಸ್ನೇಹಿತನೋರ್ವ ಬಟ್ಟೆ ನೀಡಿ, ತದನಂತರ ಮನೆಗೆ ಕರೆದೊಯ್ದಿದ್ದಾನೆ. ಪೊಷಕರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಆರೋಪಿಗಳಾದ ರಾಜು,ಕೈಲಾಶ್​ ಹಾಗೂ ನಾರಾಯಣನನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 



ಕಳೆದ ಸೋಮವಾರ ಈ ಘಟನೆ ರಾಜಸ್ಥಾನದ ರಾಜಧಾನಿ ಜೈಪುರ್​​ನಿಂದ 250 ಕಿ,ಮೀಟರ್​ ದೂರದಲ್ಲಿರುವ ಭಿಲ್ವಾರ್​ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಮಧ್ಯಪಾನ ಮಾಡಿಕೊಂಡು ಕುಳಿತ್ತಿದ್ದ ಮೂವರು ಈ ಕೃತ್ಯ ವೆಸಗಿದ್ದಾಗಿ ಪೊಲೀಸ್​ ಅಧಿಕಾರಿ ಭರತ್​ ಸಿಂಗ್​ ತಿಳಿಸಿದ್ದು, ಬಾಲಕಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆಕೆಯ ದೇಹದ ಕೆಲ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.