ETV Bharat / bharat

68ರ ಇಳಿವಯಸ್ಸಿನಲ್ಲೂ ತೆಂಗಿನ ಮರ ಹತ್ತುವ ಅಜ್ಜಿ!: 46 ವರ್ಷಗಳಿಂದಲೂ ಕೃಷಿಯೇ ಈಕೆಯ ಖುಷಿ

author img

By

Published : Mar 21, 2022, 4:25 PM IST

ಕೇರಳದ ಇಡುಕ್ಕಿಯ ಆದಿಮಾಲಿಯ ಇರುಂಬುಪಾಲಂ ನಿವಾಸಿಯಾದ ಮರಿಯಮಕುಟ್ಟಿ ಎಂಬ ಅಜ್ಜಿಯಲ್ಲಿರುವ ಕೃಷಿಯಲ್ಲಿನ ಇಚ್ಛಾಶಕ್ತಿ, ಉತ್ಸಾಹ ಎಂಥವರಿಗೂ ಮಾದರಿ. ತಮ್ಮ 22ನೇ ವಯಸ್ಸಿನಲ್ಲೇ ಕೃಷಿ ಕಾಯಕ ಆರಂಭಿಸಿರುವ ಇವರು ಸತತವಾಗಿ 46 ವರ್ಷಗಳಿಂದ ದಣಿವಿಲ್ಲದೆ ಭೂಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Mariamakutti
Mariamakutti

ಇಡುಕ್ಕಿ (ಕೇರಳ): ಆಕೆಯ ವಯಸ್ಸು 68. ಕಠಿಣ ಪರಿಶ್ರಮಿ, ಅಪರಿಮಿತ ಜೀವನೋತ್ಸಾಹಿ. ತಾನು ಪ್ರೀತಿಸುವ ಕೃಷಿ ಕೆಲಸ ಮಾಡುವ ಉತ್ಸಾಹ ನೋಡಿದರೆ ಎಂಥವರೂ ಅರೆಕ್ಷಣ ಬೆರಗಾಗಲೇಬೇಕು.

ಇಳಿವಯಸ್ಸಿನಲ್ಲಿ ಇವರು ತರುಣರಂತೆ ತೆಂಗಿನ ಮರ ಹತ್ತಬಲ್ಲರು. ಮರದ ತುದಿ ಸ್ವಚ್ಛಗೊಳಿಸಿ, ಮಾಗಿದ ತೆಂಗಿನಕಾಯಿಗಳನ್ನು ಕೀಳುವರು. ಅಷ್ಟೇ ಅಲ್ಲ, ಕೃಷಿಯಲ್ಲಿ ಈ ಅಜ್ಜಿಯದ್ದು ಎತ್ತಿದ ಕೈ. ಜೀವನದ ಸಂಧ್ಯಾಕಾಲದಲ್ಲೂ ಯಾವುದೇ ಅಡೆತಡೆಯಿಲ್ಲದೇ ಕೃಷಿಯಲ್ಲಿ ಖುಷಿಯಿಂದ ತೊಡಗಿ ಯುವಕರೇ ನಾಚುವಂತೆ ಮಾಡುತ್ತಾರೆ.

ಕೇರಳದ ಇಡುಕ್ಕಿಯ ಆದಿಮಾಲಿಯ ಇರುಂಬುಪಾಲಂ ನಿವಾಸಿಯಾದ ಮರಿಯಮಕುಟ್ಟಿ ವರ್ಗೀಸ್ ಎಂಬ ಅಜ್ಜಿಗೆ ಕೃಷಿಯಲ್ಲಿರುವ ಅದಮ್ಯ ಇಚ್ಛಾಶಕ್ತಿ, ಅವರ ಉತ್ಸಾಹ ಎಂತಹವರಿಗೂ ಮಾದರಿ ಎನ್ನುವಂತಿದೆ. ತಮ್ಮ 22ನೇ ವಯಸ್ಸಿನಲ್ಲೇ ಕೃಷಿ ಕಾಯಕ ಆರಂಭಿಸಿರುವ ಮರಿಯಮಕುಟ್ಟಿ ಸತತವಾಗಿ 46 ವರ್ಷಗಳಿಂದ ದಣಿವಿಲ್ಲದೆ ತಾನು ಪ್ರೀತಿಸುವ ಕೆಲಸದಲ್ಲಿ ತೊಡಿಸಿಕೊಂಡಿದ್ದಾರೆ. ಮೂರೂವರೆ ಎಕರೆ ತಮ್ಮ ಕೃಷಿ ಭೂಮಿಯಲ್ಲಿ ಎಲ್ಲ ಸಂಕಷ್ಟದ ಪರಿಸ್ಥಿತಿಗಳನ್ನೂ ಮೆಟ್ಟಿ ನಿಂತು ವಿಸ್ಮಯ ಮೂಡಿಸಿದ್ದಾರೆ.


ಪ್ರತಿದಿನ ಬೆಳಗ್ಗೆ 6 ಗಂಟೆಗೆ ಜಮೀನಿನಲ್ಲಿ ಹಾಜರಿರುವ ಅಜ್ಜಿ, ರಬ್ಬರ್ ಮರಗಳ ಟ್ಯಾಪಿಂಗ್ ಮೂಲಕ ಕೃಷಿ ಕೆಲಸ ಪ್ರಾರಂಭಿಸುತ್ತಾರೆ. ನಂತರ ದನ, ಮೇಕೆಗಳಿಗೆ ಮೇವು, ನೀರುಣಿಸುವ ಮೂಲಕ ಅವುಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಂದ ಮೆಣಸು, ಜಾಯಿಕಾಯಿ, ಏಲಕ್ಕಿ ಮತ್ತು ತೆಂಗಿನಕಾಯಿಯ ಕೃಷಿಯಲ್ಲಿ ಮಗ್ನರಾಗುತ್ತಾರೆ.

ಯಾರ ಹಂಗು ಎನಗೇಕೆ? ಎತ್ತರದ ತೆಂಗಿನ ಮರಗಳನ್ನು ಹತ್ತುವುದರಲ್ಲಿ ಅಜ್ಜಿಗೆ ವಿಶೇಷ ಕೌಶಲ್ಯವಿದೆ. ತೆಂಗಿನಕಾಯಿ ಕೀಳಲು ಯಾರ ಹಂಗೂ ತನಗೆ ಬೇಡ ಎಂಬಂತೆ ಯಾರಿಗೂ ದಾರಿ ಕಾಯದೇ ತಾವೇ ತೆಂಗಿನ ಮರಗಳನ್ನೇರಬಲ್ಲರು. ಕೆಲ ವರ್ಷಗಳ ಹಿಂದೆ 'ಕುಡುಂಬಶ್ರೀ' (ಕೇರಳದ ಮಹಿಳಾ ಸ್ವಸಹಾಯ ಗುಂಪು)ಗೆ ನಡೆಸಲಾದ ತೆಂಗಿನ ಮರ ಹತ್ತುವ ವಿಶೇಷ ಶಿಬಿರಕ್ಕೆ ಹಾಜರಾಗಿದ್ದ ಇವರು ತೆಂಗಿನ ಮರ ಹತ್ತುವುದನ್ನು ಕಲಿತರು. ಈ ಸಂದರ್ಭದಲ್ಲಿ ಆಕೆಗೆ ಮರ ಹತ್ತುವ ಪರಿಕರವನ್ನು ನೀಡಲಾಯಿತು. ಈ ಪರಿಕರಗಳನ್ನು ಬಳಸಿ ಮರಿಯಮಕುಟ್ಟಿ ಯಾವುದೇ ಮರವಾದರೂ ಏರಿ ತೆಂಗಿನಕಾಯಿ ಕೀಳುತ್ತಾರೆ.

ಮಕ್ಕಳ ಶಿಕ್ಷಣಕ್ಕೂ ಸೈ: ಮರಿಯಮಕುಟ್ಟಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ತೀರಿಕೊಂಡ ನಂತರ ಮಕ್ಕಳ ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡರು. ಇಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಟ್ಟಿದ್ದಾರೆ. ಆದರೂ, ಸುಮ್ಮನೆ ಕೂರಲು ತಯಾರಿರದೆ ಅಹರ್ನಿಶಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

'ಕೃಷಿ ಕೆಲಸ ಮಾಡಿ ನನಗೆ ಸುಸ್ತಾಗುವುದಿಲ್ಲ. ಸೂರ್ಯಾಸ್ತದವರೆಗೂ ಕೃಷಿ ಕಾಯಕ ಮಾಡುತ್ತಲೇ ಇರುತ್ತೇನೆ' ಎನ್ನುವುದು ಮರಿಯಮಕುಟ್ಟಿಯವರ ಅಮಿತ ಜೀವನೋತ್ಸಾಹದ ನುಡಿಮುತ್ತು!

ಇದನ್ನೂ ಓದಿ: ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಜನನ-ಮರಣ ಪ್ರಮಾಣಪತ್ರ : ಮಂಗಳೂರಲ್ಲಿ ಮೊದಲ ಪ್ರಯೋಗ

ಇಡುಕ್ಕಿ (ಕೇರಳ): ಆಕೆಯ ವಯಸ್ಸು 68. ಕಠಿಣ ಪರಿಶ್ರಮಿ, ಅಪರಿಮಿತ ಜೀವನೋತ್ಸಾಹಿ. ತಾನು ಪ್ರೀತಿಸುವ ಕೃಷಿ ಕೆಲಸ ಮಾಡುವ ಉತ್ಸಾಹ ನೋಡಿದರೆ ಎಂಥವರೂ ಅರೆಕ್ಷಣ ಬೆರಗಾಗಲೇಬೇಕು.

ಇಳಿವಯಸ್ಸಿನಲ್ಲಿ ಇವರು ತರುಣರಂತೆ ತೆಂಗಿನ ಮರ ಹತ್ತಬಲ್ಲರು. ಮರದ ತುದಿ ಸ್ವಚ್ಛಗೊಳಿಸಿ, ಮಾಗಿದ ತೆಂಗಿನಕಾಯಿಗಳನ್ನು ಕೀಳುವರು. ಅಷ್ಟೇ ಅಲ್ಲ, ಕೃಷಿಯಲ್ಲಿ ಈ ಅಜ್ಜಿಯದ್ದು ಎತ್ತಿದ ಕೈ. ಜೀವನದ ಸಂಧ್ಯಾಕಾಲದಲ್ಲೂ ಯಾವುದೇ ಅಡೆತಡೆಯಿಲ್ಲದೇ ಕೃಷಿಯಲ್ಲಿ ಖುಷಿಯಿಂದ ತೊಡಗಿ ಯುವಕರೇ ನಾಚುವಂತೆ ಮಾಡುತ್ತಾರೆ.

ಕೇರಳದ ಇಡುಕ್ಕಿಯ ಆದಿಮಾಲಿಯ ಇರುಂಬುಪಾಲಂ ನಿವಾಸಿಯಾದ ಮರಿಯಮಕುಟ್ಟಿ ವರ್ಗೀಸ್ ಎಂಬ ಅಜ್ಜಿಗೆ ಕೃಷಿಯಲ್ಲಿರುವ ಅದಮ್ಯ ಇಚ್ಛಾಶಕ್ತಿ, ಅವರ ಉತ್ಸಾಹ ಎಂತಹವರಿಗೂ ಮಾದರಿ ಎನ್ನುವಂತಿದೆ. ತಮ್ಮ 22ನೇ ವಯಸ್ಸಿನಲ್ಲೇ ಕೃಷಿ ಕಾಯಕ ಆರಂಭಿಸಿರುವ ಮರಿಯಮಕುಟ್ಟಿ ಸತತವಾಗಿ 46 ವರ್ಷಗಳಿಂದ ದಣಿವಿಲ್ಲದೆ ತಾನು ಪ್ರೀತಿಸುವ ಕೆಲಸದಲ್ಲಿ ತೊಡಿಸಿಕೊಂಡಿದ್ದಾರೆ. ಮೂರೂವರೆ ಎಕರೆ ತಮ್ಮ ಕೃಷಿ ಭೂಮಿಯಲ್ಲಿ ಎಲ್ಲ ಸಂಕಷ್ಟದ ಪರಿಸ್ಥಿತಿಗಳನ್ನೂ ಮೆಟ್ಟಿ ನಿಂತು ವಿಸ್ಮಯ ಮೂಡಿಸಿದ್ದಾರೆ.


ಪ್ರತಿದಿನ ಬೆಳಗ್ಗೆ 6 ಗಂಟೆಗೆ ಜಮೀನಿನಲ್ಲಿ ಹಾಜರಿರುವ ಅಜ್ಜಿ, ರಬ್ಬರ್ ಮರಗಳ ಟ್ಯಾಪಿಂಗ್ ಮೂಲಕ ಕೃಷಿ ಕೆಲಸ ಪ್ರಾರಂಭಿಸುತ್ತಾರೆ. ನಂತರ ದನ, ಮೇಕೆಗಳಿಗೆ ಮೇವು, ನೀರುಣಿಸುವ ಮೂಲಕ ಅವುಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲಿಂದ ಮೆಣಸು, ಜಾಯಿಕಾಯಿ, ಏಲಕ್ಕಿ ಮತ್ತು ತೆಂಗಿನಕಾಯಿಯ ಕೃಷಿಯಲ್ಲಿ ಮಗ್ನರಾಗುತ್ತಾರೆ.

ಯಾರ ಹಂಗು ಎನಗೇಕೆ? ಎತ್ತರದ ತೆಂಗಿನ ಮರಗಳನ್ನು ಹತ್ತುವುದರಲ್ಲಿ ಅಜ್ಜಿಗೆ ವಿಶೇಷ ಕೌಶಲ್ಯವಿದೆ. ತೆಂಗಿನಕಾಯಿ ಕೀಳಲು ಯಾರ ಹಂಗೂ ತನಗೆ ಬೇಡ ಎಂಬಂತೆ ಯಾರಿಗೂ ದಾರಿ ಕಾಯದೇ ತಾವೇ ತೆಂಗಿನ ಮರಗಳನ್ನೇರಬಲ್ಲರು. ಕೆಲ ವರ್ಷಗಳ ಹಿಂದೆ 'ಕುಡುಂಬಶ್ರೀ' (ಕೇರಳದ ಮಹಿಳಾ ಸ್ವಸಹಾಯ ಗುಂಪು)ಗೆ ನಡೆಸಲಾದ ತೆಂಗಿನ ಮರ ಹತ್ತುವ ವಿಶೇಷ ಶಿಬಿರಕ್ಕೆ ಹಾಜರಾಗಿದ್ದ ಇವರು ತೆಂಗಿನ ಮರ ಹತ್ತುವುದನ್ನು ಕಲಿತರು. ಈ ಸಂದರ್ಭದಲ್ಲಿ ಆಕೆಗೆ ಮರ ಹತ್ತುವ ಪರಿಕರವನ್ನು ನೀಡಲಾಯಿತು. ಈ ಪರಿಕರಗಳನ್ನು ಬಳಸಿ ಮರಿಯಮಕುಟ್ಟಿ ಯಾವುದೇ ಮರವಾದರೂ ಏರಿ ತೆಂಗಿನಕಾಯಿ ಕೀಳುತ್ತಾರೆ.

ಮಕ್ಕಳ ಶಿಕ್ಷಣಕ್ಕೂ ಸೈ: ಮರಿಯಮಕುಟ್ಟಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ತೀರಿಕೊಂಡ ನಂತರ ಮಕ್ಕಳ ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡರು. ಇಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರಿಗೆ ಒಳ್ಳೆಯ ಜೀವನ ರೂಪಿಸಿಕೊಟ್ಟಿದ್ದಾರೆ. ಆದರೂ, ಸುಮ್ಮನೆ ಕೂರಲು ತಯಾರಿರದೆ ಅಹರ್ನಿಶಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

'ಕೃಷಿ ಕೆಲಸ ಮಾಡಿ ನನಗೆ ಸುಸ್ತಾಗುವುದಿಲ್ಲ. ಸೂರ್ಯಾಸ್ತದವರೆಗೂ ಕೃಷಿ ಕಾಯಕ ಮಾಡುತ್ತಲೇ ಇರುತ್ತೇನೆ' ಎನ್ನುವುದು ಮರಿಯಮಕುಟ್ಟಿಯವರ ಅಮಿತ ಜೀವನೋತ್ಸಾಹದ ನುಡಿಮುತ್ತು!

ಇದನ್ನೂ ಓದಿ: ಅಂಚೆ ಮೂಲಕ ಮನೆ ಬಾಗಿಲಿಗೆ ಬರಲಿದೆ ಜನನ-ಮರಣ ಪ್ರಮಾಣಪತ್ರ : ಮಂಗಳೂರಲ್ಲಿ ಮೊದಲ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.