ETV Bharat / bharat

ಧನ ತ್ರಯೋದಶಿಯ ಪರ್ವ: ಬೆಳಕಿನ ಹಬ್ಬದ ಸಂಭ್ರಮದಲ್ಲಿ ಕುಬೇರನ ಹಬ್ಬ..!

ಈ ವರ್ಷ ನವೆಂಬರ್ 13 ರಂದು ಧನ ತ್ರಯೋದಶಿಯನ್ನು ಆಚರಿಸಲಾಗುತ್ತಿದೆ. ಧನತ್ರಯೋದಶಿಯನ್ನು ಧನತೇರಸ್ ಎಂತಲೂ ಸಹ ಕರೆಯುತ್ತಾರೆ. ಇದು ಎಲ್ಲರಿಗೂ ಶುಭವನ್ನು ತಂದುಕೊಡುತ್ತದೆ.

author img

By

Published : Nov 11, 2020, 6:32 PM IST

Updated : Nov 12, 2020, 6:48 AM IST

All That Glitters On This Diwali
ಬೆಳಕಿನ ಹಬ್ಬದ ಸಂಭ್ರಮದಲ್ಲಿ ಕುಬೇರನ ಹಬ್ಬ

ಹೈದರಾಬಾದ್: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ, ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಎಂದ ತಕ್ಷಣ ಎಲ್ಲರಲ್ಲೂ ಒಂದು ರೀತಿಯ ಪುಳಕ ಅದೇನೋ ಸಂಭ್ರಮ. ನರಕ ಚತುರ್ದಶಿಯಿಂದ ಆರಂಭವಾಗುವ ಈ ಹಬ್ಬವನ್ನು ಗೋ ಪೂಜೆ, ಲಕ್ಷ್ಮಿಪೂಜೆ ಸೇರಿದಂತೆ ವಿಶೇಷ ಆಚರಣೆಗಳ ಮೂಲಕ ಸಂಭ್ರಮಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿದೇವಿ ಸಿರಿ-ಸಂಪತ್ತನ್ನು ತಂದುಕೊಡುವಳು ಎನ್ನುವ ನಂಬಿಕೆಯಿದೆ. ಅದರಲ್ಲಿಯೂ ಧನತ್ರಯೋದಶಿಯಂತು ಎಲ್ಲರಿಗೂ ಶುಭವನ್ನು ತಂದುಕೊಡುತ್ತದೆ.

ದೀಪಾವಳಿ ಸಂದರ್ಭದಲ್ಲಿ ಕುಬೇರನ ಹಬ್ಬ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಇದು ಐದು ದಿನಗಳ ದೀಪಾವಳಿಯ ಹಬ್ಬದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಇದೇ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಈ ವರ್ಷ ಧನತ್ರಯೋದಶಿಯು ಶುಭ ಸಮಯ ಸಂಜೆ 5.32 ರಿಂದ ಸಂಜೆ 5.59 ರವರೆಗೆ ಇರಲಿದ್ದು, ಕೇವಲ 27 ನಿಮಿಷಗಳ ಈ ಶುಭ ಸಮಯದಲ್ಲಿ ಪೂಜಿಸುವುದನ್ನು ಫಲಪ್ರದವೆಂದು ಪರಿಗಣಿಸಲಾಗುತ್ತದೆ.

ಬೆಳಕಿನ ಹಬ್ಬದ ಸಂಭ್ರಮದಲ್ಲಿ ಕುಬೇರನ ಹಬ್ಬ

ಧನತ್ರಯೋದಶಿಯನ್ನು ಧನತೇರಸ್ ಎಂತಲೂ ಸಹ ಕರೆಯುತ್ತಾರೆ. ಈ ದಿನ ವ್ಯಾಪಾರಿಗಳು ತಿಜೋರಿಯನ್ನು ಪೂಜಿಸುತ್ತಾರೆ. ಲೆಕ್ಕದ ಖಾತೆ-ಕಿರ್ದಿಗಳನ್ನು ಈ ದಿನವೇ ತರುತ್ತಾರೆ.

ಧನತ್ರಯೋದಶಿಯಂದು ಆಯುರ್ವೇದ ದೇವರಾದ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಈ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಅರ್ಪಿಸಲಾಗಿದೆ. ಈ ದಿನದಂದು ಖರೀದಿಸುವ ವಸ್ತುಗಳಿಗೆ ವಿಶೇಷ ಮಹತ್ವವಿದ್ದು, ಹಾಗಾಗಿ ಚಿನ್ನ ಸೇರಿದಂತೆ ಆಭರಣ ಖರೀದಿಯನ್ನು ಹೆಚ್ಚಾಗಿ ಮಾಡಲಾಗುತ್ತದೆ.

ವಸ್ತ್ರ ದಾನ, ಅನ್ನ ದಾನ ಸೇರಿದಂತೆ ವಿವಿಧ ರೀತಿಯ ದಾನಗಳನ್ನು ಈ ಪವಿತ್ರ ದಿನದಂದು ಮಾಡಲಾಗುತ್ತದೆ. ಅವಶ್ಯಕತೆ ಇರುವವರಿಗೆ ವಸ್ತ್ರಗಳ ದಾನ ಮಾಡುವುದರಿಂದ ಶುಭಫಲ ಪ್ರಾಪ್ತಿಯಾಗಲಿದೆ ಎಂಬ ನಂಬಿದೆ ಇದೆ. ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ ಜೀವನದಲ್ಲಿ ಆರ್ಥಿಕ ಸಂಪನ್ನತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಧನತ್ರಯೋದಶಿಯ ದಿನ ಅನ್ನದಾನಕ್ಕೆ ವಿಶೇಷ ಮಹತ್ವವಿದ್ದು, ಮನೆಗೆ ಅತಿಥಿಗಳನ್ನು ಕರೆದು ಅಥವಾ ದೇವಸ್ಥಾನಕ್ಕೆ ಹೋಗಿ ಅನ್ನದಾನ ಮಾಡಲಾಗುತ್ತದೆ. ಈ ದಾನದಿಂದ ದೇವಿ ಲಕ್ಷ್ಮಿ ಆಶೀರ್ವಾದ ನೀಡುತ್ತಾಳೆ ಎಂಬ ನಂಬಿಕೆಯಿದೆ.

ಈ ವರ್ಷ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ ಎಂಬುದೇ ನಮ್ಮ ಆಶಯ.

ಹೈದರಾಬಾದ್: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ, ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಎಂದ ತಕ್ಷಣ ಎಲ್ಲರಲ್ಲೂ ಒಂದು ರೀತಿಯ ಪುಳಕ ಅದೇನೋ ಸಂಭ್ರಮ. ನರಕ ಚತುರ್ದಶಿಯಿಂದ ಆರಂಭವಾಗುವ ಈ ಹಬ್ಬವನ್ನು ಗೋ ಪೂಜೆ, ಲಕ್ಷ್ಮಿಪೂಜೆ ಸೇರಿದಂತೆ ವಿಶೇಷ ಆಚರಣೆಗಳ ಮೂಲಕ ಸಂಭ್ರಮಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿದೇವಿ ಸಿರಿ-ಸಂಪತ್ತನ್ನು ತಂದುಕೊಡುವಳು ಎನ್ನುವ ನಂಬಿಕೆಯಿದೆ. ಅದರಲ್ಲಿಯೂ ಧನತ್ರಯೋದಶಿಯಂತು ಎಲ್ಲರಿಗೂ ಶುಭವನ್ನು ತಂದುಕೊಡುತ್ತದೆ.

ದೀಪಾವಳಿ ಸಂದರ್ಭದಲ್ಲಿ ಕುಬೇರನ ಹಬ್ಬ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಇದು ಐದು ದಿನಗಳ ದೀಪಾವಳಿಯ ಹಬ್ಬದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಇದೇ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಈ ವರ್ಷ ಧನತ್ರಯೋದಶಿಯು ಶುಭ ಸಮಯ ಸಂಜೆ 5.32 ರಿಂದ ಸಂಜೆ 5.59 ರವರೆಗೆ ಇರಲಿದ್ದು, ಕೇವಲ 27 ನಿಮಿಷಗಳ ಈ ಶುಭ ಸಮಯದಲ್ಲಿ ಪೂಜಿಸುವುದನ್ನು ಫಲಪ್ರದವೆಂದು ಪರಿಗಣಿಸಲಾಗುತ್ತದೆ.

ಬೆಳಕಿನ ಹಬ್ಬದ ಸಂಭ್ರಮದಲ್ಲಿ ಕುಬೇರನ ಹಬ್ಬ

ಧನತ್ರಯೋದಶಿಯನ್ನು ಧನತೇರಸ್ ಎಂತಲೂ ಸಹ ಕರೆಯುತ್ತಾರೆ. ಈ ದಿನ ವ್ಯಾಪಾರಿಗಳು ತಿಜೋರಿಯನ್ನು ಪೂಜಿಸುತ್ತಾರೆ. ಲೆಕ್ಕದ ಖಾತೆ-ಕಿರ್ದಿಗಳನ್ನು ಈ ದಿನವೇ ತರುತ್ತಾರೆ.

ಧನತ್ರಯೋದಶಿಯಂದು ಆಯುರ್ವೇದ ದೇವರಾದ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಈ ದಿನವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಅರ್ಪಿಸಲಾಗಿದೆ. ಈ ದಿನದಂದು ಖರೀದಿಸುವ ವಸ್ತುಗಳಿಗೆ ವಿಶೇಷ ಮಹತ್ವವಿದ್ದು, ಹಾಗಾಗಿ ಚಿನ್ನ ಸೇರಿದಂತೆ ಆಭರಣ ಖರೀದಿಯನ್ನು ಹೆಚ್ಚಾಗಿ ಮಾಡಲಾಗುತ್ತದೆ.

ವಸ್ತ್ರ ದಾನ, ಅನ್ನ ದಾನ ಸೇರಿದಂತೆ ವಿವಿಧ ರೀತಿಯ ದಾನಗಳನ್ನು ಈ ಪವಿತ್ರ ದಿನದಂದು ಮಾಡಲಾಗುತ್ತದೆ. ಅವಶ್ಯಕತೆ ಇರುವವರಿಗೆ ವಸ್ತ್ರಗಳ ದಾನ ಮಾಡುವುದರಿಂದ ಶುಭಫಲ ಪ್ರಾಪ್ತಿಯಾಗಲಿದೆ ಎಂಬ ನಂಬಿದೆ ಇದೆ. ಇದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ ಜೀವನದಲ್ಲಿ ಆರ್ಥಿಕ ಸಂಪನ್ನತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಧನತ್ರಯೋದಶಿಯ ದಿನ ಅನ್ನದಾನಕ್ಕೆ ವಿಶೇಷ ಮಹತ್ವವಿದ್ದು, ಮನೆಗೆ ಅತಿಥಿಗಳನ್ನು ಕರೆದು ಅಥವಾ ದೇವಸ್ಥಾನಕ್ಕೆ ಹೋಗಿ ಅನ್ನದಾನ ಮಾಡಲಾಗುತ್ತದೆ. ಈ ದಾನದಿಂದ ದೇವಿ ಲಕ್ಷ್ಮಿ ಆಶೀರ್ವಾದ ನೀಡುತ್ತಾಳೆ ಎಂಬ ನಂಬಿಕೆಯಿದೆ.

ಈ ವರ್ಷ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ ಎಂಬುದೇ ನಮ್ಮ ಆಶಯ.

Last Updated : Nov 12, 2020, 6:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.