ETV Bharat / bharat

'ಇನ್ನೂ ಮಕ್ಕಳಾಗಿಲ್ವೇ...?' ನೆರೆಹೊರೆಯವರ ಮಾತಿನಿಂದ ನೊಂದ ಮಹಿಳೆ ಮಾಡಿದ್ದೇನು ಗೊತ್ತಾ? - lady from Kondapalli in Krishna district who played pregnant drama

ಮಹಿಳೆಯೊಬ್ಬಳು ತಾನು ಗರ್ಭ ಧರಿಸಿರುವುದಾಗಿ ಅತ್ತೆಯ ಮನೆಗೆ ತಿಳಿಸಿ 9 ತಿಂಗಳ ಹಿಂದೆ ತವರಿಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಆಕೆ ತನ್ನ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ವೈದ್ಯಕೀಯ ತಪಾಸಣೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಹೋಗುತ್ತಿದ್ದಳು. ಆದರೆ ಮುಂದೇನಾಯ್ತು ಗೊತ್ತೇ?

ಗರ್ಭ ಧರಿಸಿರುವುದಾಗಿ ಸುಳ್ಳು ಹೇಳಿದ ಮಹಿಳೆ
ಗರ್ಭ ಧರಿಸಿರುವುದಾಗಿ ಸುಳ್ಳು ಹೇಳಿದ ಮಹಿಳೆ
author img

By

Published : Jan 6, 2022, 3:33 PM IST

Updated : Jan 6, 2022, 3:41 PM IST

ಕೃಷ್ಣಾ (ಆಂಧ್ರಪ್ರದೇಶ): ಮದುವೆ ಆದ ಮೇಲೆ ತಾಯಿಯಾಗಬೇಕು ಅನ್ನೋದು ಪ್ರತಿ ಹೆಣ್ಣಿನ ಅಸೆ. ಆದರೆ ವೈಜ್ಞಾನಿಕ ಕಾರಣದಿಂದ ಮಕ್ಕಳಾಗದಿದ್ದರೆ ಅದಕ್ಕೆ ಹೊಣೆ ಯಾರು?. ಆದರೂ, ಈ ನೆರೆಹೊರೆಯವರು ಇನ್ನೂ ಮಕ್ಕಳಾಗಿಲ್ವೇ? ಎಂದು ಪದೇ ಪದೇ ಕೇಳಿದಾಗ ದಂಪತಿಗೆ ಉಂಟಾಗುವ ನೋವು, ಮುಜುಗರ ಅಷ್ಟಿಷ್ಟಲ್ಲ. ಅಷ್ಟಕ್ಕೂ ಈ ಪೀಠಿಕೆ ಬರೆಯಲು ಒಂದು ನಿದರ್ಶನವಿದೆ.

ಆಂಧ್ರಪ್ರದೇಶದ ಕೊಂಡಪಲ್ಲಿಯ ಯುವತಿ ಒಂಬತ್ತು ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಆದರೆ ಕಾರಣಾಂತರಗಳಿಂದ ದಂಪತಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯವರು ಯಾವಾಗಲೂ ಈ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರು. ಇವರೆಲ್ಲರ ಮಾತಿನಿಂದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆದರೆ ಒಂದು ದಿನ ಸೂಕ್ತ ಯೋಜನೆ ರೂಪಿಸಿ ನೆರೆಹೊರೆಯವರು ಆಡಿಕೊಳ್ಳುವುದಕ್ಕೆ ಕಡಿವಾಣ ಹಾಕೋಕೆ ಮುಂದಾದಳು.

ಈ ಮಹಿಳೆ ತಾನು ಗರ್ಭ ಧರಿಸಿರುವುದಾಗಿ ಅತ್ತೆಯ ಮನೆಗೆ ತಿಳಿಸಿ 9 ತಿಂಗಳ ಹಿಂದೆ ತವರಿಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಆಕೆ ತನ್ನ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ವೈದ್ಯಕೀಯ ತಪಾಸಣೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಹೋಗುತ್ತಿದ್ದಳು. ಈ ತಿಂಗಳ 5ನೇ ತಾರೀಖಿನಂದು ವೈದ್ಯರು ತನಗೆ ಹೆರಿಗೆಗೆ ದಿನಾಂಕ ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಕುಟುಂಬದವರು ಹಾಗೂ ಸುತ್ತಮುತ್ತಲಿನವರಿಗೆ ತಿಳಿಸಿ, ಇಬ್ಬರು ಬಂದು ಹೆರಿಗೆ ಮಾಡಿಸಿದ್ದು, ಮಗುವನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಳು.

ಇದನ್ನೂ ಓದಿ: 'ಕಮಲಿ'‌ ಸೀರಿಯಲ್‌ ಗೋಲ್ ಮಾಲ್ ಆರೋಪ: ತನಿಖೆ ಉಸ್ತುವಾರಿ ಕಮಲ್ ಪಂತ್​ ಹೆಗಲಿಗೆ

ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಇಬ್ರಾಹಿಂ ಪಟ್ಟಣದ ಸಿಐ ಶ್ರೀಧರ್ ಕುಮಾರ್ ಸಿಬ್ಬಂದಿಯೊಂದಿಗೆ ಬುಧವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಅನುಮಾನ ಉಂಟಾದ ಕಾರಣಕ್ಕೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ವೈದ್ಯರು ತಪಾಸಣೆ ನಡೆಸಿ ವಿವಾಹಿತ ಮಹಿಳೆ ಗರ್ಭಿಣಿಯೇ ಆಗಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆ ಮಾಡಿದ ಬೃಹನ್ನಾಟಕ ಅಲ್ಲಿದ್ದವರನ್ನು ಚಕಿತಗೊಳಿಸಿತು.

ಕೃಷ್ಣಾ (ಆಂಧ್ರಪ್ರದೇಶ): ಮದುವೆ ಆದ ಮೇಲೆ ತಾಯಿಯಾಗಬೇಕು ಅನ್ನೋದು ಪ್ರತಿ ಹೆಣ್ಣಿನ ಅಸೆ. ಆದರೆ ವೈಜ್ಞಾನಿಕ ಕಾರಣದಿಂದ ಮಕ್ಕಳಾಗದಿದ್ದರೆ ಅದಕ್ಕೆ ಹೊಣೆ ಯಾರು?. ಆದರೂ, ಈ ನೆರೆಹೊರೆಯವರು ಇನ್ನೂ ಮಕ್ಕಳಾಗಿಲ್ವೇ? ಎಂದು ಪದೇ ಪದೇ ಕೇಳಿದಾಗ ದಂಪತಿಗೆ ಉಂಟಾಗುವ ನೋವು, ಮುಜುಗರ ಅಷ್ಟಿಷ್ಟಲ್ಲ. ಅಷ್ಟಕ್ಕೂ ಈ ಪೀಠಿಕೆ ಬರೆಯಲು ಒಂದು ನಿದರ್ಶನವಿದೆ.

ಆಂಧ್ರಪ್ರದೇಶದ ಕೊಂಡಪಲ್ಲಿಯ ಯುವತಿ ಒಂಬತ್ತು ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಆದರೆ ಕಾರಣಾಂತರಗಳಿಂದ ದಂಪತಿಗೆ ಮಕ್ಕಳಾಗಲಿಲ್ಲ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯವರು ಯಾವಾಗಲೂ ಈ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರು. ಇವರೆಲ್ಲರ ಮಾತಿನಿಂದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆದರೆ ಒಂದು ದಿನ ಸೂಕ್ತ ಯೋಜನೆ ರೂಪಿಸಿ ನೆರೆಹೊರೆಯವರು ಆಡಿಕೊಳ್ಳುವುದಕ್ಕೆ ಕಡಿವಾಣ ಹಾಕೋಕೆ ಮುಂದಾದಳು.

ಈ ಮಹಿಳೆ ತಾನು ಗರ್ಭ ಧರಿಸಿರುವುದಾಗಿ ಅತ್ತೆಯ ಮನೆಗೆ ತಿಳಿಸಿ 9 ತಿಂಗಳ ಹಿಂದೆ ತವರಿಗೆ ಬಂದಿದ್ದಾಳೆ. ಈ ಅವಧಿಯಲ್ಲಿ ಆಕೆ ತನ್ನ ಹೊಟ್ಟೆಗೆ ಬಟ್ಟೆ ಸುತ್ತಿಕೊಂಡು ವೈದ್ಯಕೀಯ ತಪಾಸಣೆಗಾಗಿ ಪ್ರತಿ ತಿಂಗಳು ಆಸ್ಪತ್ರೆಗೆ ಹೋಗುತ್ತಿದ್ದಳು. ಈ ತಿಂಗಳ 5ನೇ ತಾರೀಖಿನಂದು ವೈದ್ಯರು ತನಗೆ ಹೆರಿಗೆಗೆ ದಿನಾಂಕ ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಕುಟುಂಬದವರು ಹಾಗೂ ಸುತ್ತಮುತ್ತಲಿನವರಿಗೆ ತಿಳಿಸಿ, ಇಬ್ಬರು ಬಂದು ಹೆರಿಗೆ ಮಾಡಿಸಿದ್ದು, ಮಗುವನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಳು.

ಇದನ್ನೂ ಓದಿ: 'ಕಮಲಿ'‌ ಸೀರಿಯಲ್‌ ಗೋಲ್ ಮಾಲ್ ಆರೋಪ: ತನಿಖೆ ಉಸ್ತುವಾರಿ ಕಮಲ್ ಪಂತ್​ ಹೆಗಲಿಗೆ

ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಇಬ್ರಾಹಿಂ ಪಟ್ಟಣದ ಸಿಐ ಶ್ರೀಧರ್ ಕುಮಾರ್ ಸಿಬ್ಬಂದಿಯೊಂದಿಗೆ ಬುಧವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಅನುಮಾನ ಉಂಟಾದ ಕಾರಣಕ್ಕೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ವೈದ್ಯರು ತಪಾಸಣೆ ನಡೆಸಿ ವಿವಾಹಿತ ಮಹಿಳೆ ಗರ್ಭಿಣಿಯೇ ಆಗಿಲ್ಲ ಎಂದು ತಿಳಿಸಿದ್ದಾರೆ. ಮಹಿಳೆ ಮಾಡಿದ ಬೃಹನ್ನಾಟಕ ಅಲ್ಲಿದ್ದವರನ್ನು ಚಕಿತಗೊಳಿಸಿತು.

Last Updated : Jan 6, 2022, 3:41 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.