ಪನಂಗಾಡ್ (ಕೇರಳ): ಅನಿವಾಸಿ ಉದ್ಯಮಿ ಹಾಗೂ ಲೂಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದೊಡ್ಡ ಅನಾಹುತದಿಂದ ಪಾರಾಗಿ ಕೇರಳದ ಪನಂಗಾಡ್ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ನಲ್ಲಿ ಅವಘಡ ಸಂಭವಿಸಿದ ಕಾರಣ ಪನಂಗಾಡ್ನಲ್ಲಿರುವ KUFOS ವಿವಿ ಆವರಣದಲ್ಲಿ ತುರ್ತು ಭೂಸ್ಪರ್ಶಿಸಿದೆ. ಹೆಲಿಕಾಪ್ಟರ್ನಲ್ಲಿ ಯೂಸುಫ್ ಅಲಿ ಜೊತೆ ಅವರ ಪತ್ನಿ ಹಾಗೂ ಲೂಲು ಗ್ರೂಪ್ ಸಿಬ್ಬಂದಿ ಸೇರಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು.
ಎಲ್ಲರೂ ಅಪಾಯದಿಂದ ಪಾರಾಗಿದ್ದು, ಲೇಕ್ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.