ETV Bharat / bharat

ಮಳೆಯಾರ್ಭಟಕ್ಕೆ ಕಾರಿನೊಂದಿಗೆ ಕೊಚ್ಚಿ ಹೋದ ತಂದೆ-ಮಗ - Video

author img

By

Published : Sep 7, 2021, 7:53 PM IST

ಮಳೆಯ ಆರ್ಭಟಕ್ಕೆ ಕಾರ್​ವೊಂದು ಕೊಚ್ಚಿಕೊಂಡು ಹೋಗಿದ್ದು, ಅದರೊಳಗೆ ತಂದೆ-ಮಗ ಸಹ ಕೊಚ್ಚಿಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ.

Nanded car
Nanded car

ನಾಂದೇಡ್​(ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಇದರ ಮಧ್ಯೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಾರ್ಭಟಕ್ಕೆ ಕಾರಿನೊಂದಿಗೆ ಕೊಚ್ಚಿ ಹೋದ ತಂದೆ-ಮಗ

ಮತ್ತೊಂದೆಡೆ ನಾಂದೇಡ್​​ದಲ್ಲಿ ಮಳೆಯ ಪ್ರವಾಹಕ್ಕೆ ಕಾರ್​ವೊಂದು ಕೊಚ್ಚಿಕೊಂಡು ಹೋಗಿದೆ. ಮುಖೇದ್​ ಎಂಬ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ತಂದೆ-ಮಗ ಕೂಡ ಕೊಚ್ಚಿಕೊಂಡು ಹೋಗಿದ್ದು, ಈಗಾಗಲೇ ಅವರಿಬ್ಬರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿರಿ: ಹರಿಯಾಣದಲ್ಲಿ ರೈತರ ಮಹಾ ಪಂಚಾಯತ್ ​: ಅಧಿಕಾರಿಗಳ ನಡೆ ವಿರೋಧಿಸಿ, ಅನ್ನದಾತರ ಪಾದಯಾತ್ರೆ

ಕಾರಿನಲ್ಲಿ ಭಗವಾನ್​​ ರಾಥೋಡ್​ ಹಾಗೂ ಸಂದೀಪ್ ರಾಥೋಡ್​​ ಇದ್ದರು ಎನ್ನಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ನಾಂದೇಡ್​(ಮಹಾರಾಷ್ಟ್ರ): ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಇದರ ಮಧ್ಯೆ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿರುವ ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಾರ್ಭಟಕ್ಕೆ ಕಾರಿನೊಂದಿಗೆ ಕೊಚ್ಚಿ ಹೋದ ತಂದೆ-ಮಗ

ಮತ್ತೊಂದೆಡೆ ನಾಂದೇಡ್​​ದಲ್ಲಿ ಮಳೆಯ ಪ್ರವಾಹಕ್ಕೆ ಕಾರ್​ವೊಂದು ಕೊಚ್ಚಿಕೊಂಡು ಹೋಗಿದೆ. ಮುಖೇದ್​ ಎಂಬ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ತಂದೆ-ಮಗ ಕೂಡ ಕೊಚ್ಚಿಕೊಂಡು ಹೋಗಿದ್ದು, ಈಗಾಗಲೇ ಅವರಿಬ್ಬರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿರಿ: ಹರಿಯಾಣದಲ್ಲಿ ರೈತರ ಮಹಾ ಪಂಚಾಯತ್ ​: ಅಧಿಕಾರಿಗಳ ನಡೆ ವಿರೋಧಿಸಿ, ಅನ್ನದಾತರ ಪಾದಯಾತ್ರೆ

ಕಾರಿನಲ್ಲಿ ಭಗವಾನ್​​ ರಾಥೋಡ್​ ಹಾಗೂ ಸಂದೀಪ್ ರಾಥೋಡ್​​ ಇದ್ದರು ಎನ್ನಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.