ETV Bharat / bharat

ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ: ಪಾಕೆಟ್​ ಮನಿ ಹಿಡಿದು ದೆಹಲಿ ರಾಯಭಾರಿ ಕಚೇರಿಗೆ ಭೇಟಿ

author img

By

Published : Feb 14, 2023, 3:07 PM IST

ಭೂಕಂಪನದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾದ ಘಟನೆಯನ್ನು ಟಿವಿಯಲ್ಲಿ ಕಂಡ ಬಾಲಕ, ಅಲ್ಲಿನ ಜನರ ಸ್ಥಿತಿಕಂಡು ಮರುಗಿದ್ದಾನೆ. ತನ್ನಿಂದ ಆಗುವ ಸಹಾಯ ಮಾಡಲು ಮುಂದಾಗಿದ್ದಾನೆ

ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ
ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ

ನವದೆಹಲಿ: ಭಾರೀ ಭೂ ಕಂಪನಕ್ಕೆ ತುತ್ತಾಗಿರುವ ಸಿರಿಯಾ ಮತ್ತು ಟರ್ಕಿಗೆ ಇದೀಗ ನೆರವಿನ ಹಸ್ತ ಬೇಕಾಗಿದೆ. ಇದೇ ಕಾರಣದಿಂದ ಅಲ್ಲಿನ ಸಂತ್ರಸ್ತರ ರಕ್ಷಣೆಗಾಗಿ ಅನೇಕ ದೇಶಗಳು ಮತ್ತು ಸಂಘಟನೆಗಳು ಮುಂದಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಗಮನಸಿದರೆ ಸಾಕು ಎಂತಹವರ ಹೃದಯವಾದರೂ ಕರಗದೇ ಇರಲಾರದು. ಅವಶೇಷಗಳ ಅಡಿ ಸಿಲುಕಿರುವ, ಭೂ ಕಂಪನದಿಂದ ಪರಾದವರಿಗೆ ವೈದ್ಯಕೀಯ, ರಕ್ಷಣೆ, ಆಹಾರ ಸೇರಿದಂತೆ ಇನ್ನಿತರ ಸಹಾಯ ಹಸ್ತ ಚಾಚಲು ವೈಯಕ್ತಿಕವಾಗಿ ಕೂಡ ಜನರು ಮುಂದೆ ಬರುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾದ ಈಗಿನ ಪರಿಸ್ಥಿತಿಯನ್ನು ಟಿವಿಯಲ್ಲಿ ಕಂಡ 8 ವರ್ಷದ ಬಾಲಕನ ಮನ ಕೂಡ ಕರಗಿದ್ದು, ಆತ ತಮ್ಮ ಪಾಕೆಟ್​​ ಮನಿಯನ್ನು ಇದೀಗ ಅವರಿಗೆ ನೀಡಲು ಮುಂದಾಗಿದ್ದಾರೆ.

ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ
ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ

ನವದೆಹಲಿಯ ಜೈದನ್​ ಖುರೇಷಿ ಎಂಬ ಬಾಲಕ ಟರ್ಕಿ, ಸಿರಿಯಾ ಮಕ್ಕಳ ಕಣ್ಣೀರಿಗೆ ಕರಗಿದ್ದಾನೆ. ದೆಹಲಿಯ ಟರ್ಕಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಈತ ತನ್ನ ಪಾಕೆಟ್​ ಮನಿಯಿಂದ ಜಾಕೆಟ್​​ ಅನ್ನು ಖರೀದಿಸಿದ್ದು, ಅದನ್ನು ಸಂತ್ರಸ್ತರಿಗೆ ನೀಡಿ ನೆರವಾಗುವಂತೆ ಮನವಿ ಮಾಡಿದ್ದಾನೆ. ಇದೇ ವೇಳೆ, ಈ ಕುರಿತು ಮಾತನಾಡಿದ ಬಾಲಕ ಕಳೆದ ಕೆಲವು ದಿನದ ಹಿಂದೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ದೃಶ್ಯ ನೋಡಿದೆ. ಆಗ ನನ್ನಿಂದ ಆಗುವ ಸಣ್ಣ ಸಹಾಯವನ್ನು ಅಲ್ಲಿ ಜನರಿಗೆ ಮಾಡಬೇಕು ಎನಿಸಿತು. ಇದನ್ನು ನನ್ನ ತಂದೆ ಬಳಿ ಹೇಳಿದೆ. ತಕ್ಷಣಕ್ಕೆ ತಂದೆ ಮಗನನ್ನು ಕರೆದುಕೊಂಡು ಟರ್ಕಿ ರಾಯಭಾರಿ ಕಚೇರಿಗೆ ಕೆಲವು ಅಗತ್ಯ ಸಾಮಾಗ್ರಿ ಜೊತೆ ಕರೆತಂದರು ಎಂದಿದ್ದಾರೆ.

ಪ್ರತಿ ನಿತ್ಯ ತಂದೆ ನನಗೆ 100 ರೂಪಾಯಿ ಪಾಕೆಟ್​ ಮನಿಯನ್ನು ನೀಡುತ್ತಾರೆ. ಅವುಗಳನ್ನು ನಾನು ಒಂದು ಕಡೆ ಸಂಗ್ರಹಿಸುತ್ತೇನೆ. ಆ ಸಂಗ್ರಹಿಸಿದ ಹಣದಲ್ಲಿ ಟರ್ಕಿಶ್​ ಸಹಾಯಕ್ಕೆ ಮುಂದಾಗೋಣ ಎಂದು ತಂದೆಗೆ ಹೇಳಿದೆ. ತಂದೆ ಇದಕ್ಕೆ ಅವರ ಹಣವನ್ನು ಸೇರಿಸಿ 112 ಜಾಕೆಟ್​ ಅನ್ನು ಖರೀದಿಸಿದ್ದಾರೆ. ಅದನ್ನು ನಾವು ಟರ್ಕಿ ರಾಯಭಾರಿ ಕಚೇರಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಜೈದನ್​.

ಮಗನ ಕೆಲಸ ನೋಡಿ ಖುಷಿ ಆಯಿತು?: ಇನ್ನು ಈ ಕುರಿತು ಮಾತನಾಡಿರುವ ಜೈದನ್​ ತಂದೆ ಕಸೀಫ್​ ಖುರೇಷಿ, 112 ಜಾಕೆಟ್​ಗೆ 22 ಸಾವಿರ ಆಯಿತು. ಇದರಲ್ಲಿ ಜೈದನ್​ 7.500 ಹಣವನ್ನು ತನ್ನ ಪಾಕೆಟ್​ ಮನಿಯಿಂದ ನೀಡಿದ್ದಾನೆ. ಅವಶ್ಯವಿರುವವರಿಗೆ ಸಹಾಯ ಮಾಡಿದರೆ ಅಲ್ಲಾ ನಮಗೆ ಸಹಾಯ ಮಾಡುತ್ತಾನೆ. ಇದೇ ಕಾರಣಕ್ಕೆ ನಾನು ಮತ್ತು ನನ್ನ ಮಗ ಟರ್ಕಿ ರಾಯಭಾಗಿ ಕಚೇರಿಗೆ ಆಗಮಿಸಿ, ನಮ್ಮಿಂದ ಆಗುವ ಸಹಾಯ ಮಾಡಲು ಮುಂದಾದೆವು ಎಂದಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ದಿಂದ ಇದುವರೆಗೆ 35 ಸಾವಿರ ಜನರು ಸಾವನ್ನಪ್ಪಿದ್ದಾರೆ. ಅನೇಕ ಜನರು ನಿರಾಶ್ರಿತರ ತಾಣ ಸೇರಿದ್ದು, ಚಳಿಯಿಂದಾಗಿ ಕೂಡ ತತ್ತರಿಸುತ್ತಿದ್ದಾರೆ. ಈ ವಿಪತ್ತಿನ ನಿರ್ವಹಣಾ ಪರಿಸ್ಥಿತಿ ನಿಭಾಯಿಸು ಟರ್ಕಿ ಮತ್ತು ಸಿರಿಯಾ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದೆ. ಅನೇಕ ದೇಶಗಳು ಕೂಡ ಈ ಎರಡು ದೇಶಕ್ಕೆ ಸಹಾಯ ಹಸ್ತ ಚಾಚಿದೆ. ಭಾರತ ಕೂಡ ಆಪರೇಷನ್​ ಹಸ್ತದ ಮೂಲಕ ಭೂಕಂಪನದಿಂದ ತತ್ತರಿಸಿರುವ ದೇಶಗಳಿಗೆ ಸಹಾಯ ಹಸ್ತ ಚಾಚಿದೆ. ಈಗಾಗಲೇ 7 ವಿಮಾನಗಳ ಮೂಲಕ ಹೆಲ್ತ್​​ ಕಿಟ್​, ಜಾಕೆಟ್​, ಬ್ಲಾಕೆಟ್​ ಸೇರಿದಂತೆ ಅಗತ್ಯ ವಸ್ತುಗಳನ್ನು ಭಾರತ ರವಾನೆ ಮಾಡಿದೆ.

ಇದನ್ನೂ ಓದಿ: ಭಾರತದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಟರ್ಕಿ ರಾಯಭಾರಿ; ಆಪರೇಷನ್​ ದೋಸ್ತ್​ ಮೂಲಕ ನೆರವು

ನವದೆಹಲಿ: ಭಾರೀ ಭೂ ಕಂಪನಕ್ಕೆ ತುತ್ತಾಗಿರುವ ಸಿರಿಯಾ ಮತ್ತು ಟರ್ಕಿಗೆ ಇದೀಗ ನೆರವಿನ ಹಸ್ತ ಬೇಕಾಗಿದೆ. ಇದೇ ಕಾರಣದಿಂದ ಅಲ್ಲಿನ ಸಂತ್ರಸ್ತರ ರಕ್ಷಣೆಗಾಗಿ ಅನೇಕ ದೇಶಗಳು ಮತ್ತು ಸಂಘಟನೆಗಳು ಮುಂದಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಗಮನಸಿದರೆ ಸಾಕು ಎಂತಹವರ ಹೃದಯವಾದರೂ ಕರಗದೇ ಇರಲಾರದು. ಅವಶೇಷಗಳ ಅಡಿ ಸಿಲುಕಿರುವ, ಭೂ ಕಂಪನದಿಂದ ಪರಾದವರಿಗೆ ವೈದ್ಯಕೀಯ, ರಕ್ಷಣೆ, ಆಹಾರ ಸೇರಿದಂತೆ ಇನ್ನಿತರ ಸಹಾಯ ಹಸ್ತ ಚಾಚಲು ವೈಯಕ್ತಿಕವಾಗಿ ಕೂಡ ಜನರು ಮುಂದೆ ಬರುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾದ ಈಗಿನ ಪರಿಸ್ಥಿತಿಯನ್ನು ಟಿವಿಯಲ್ಲಿ ಕಂಡ 8 ವರ್ಷದ ಬಾಲಕನ ಮನ ಕೂಡ ಕರಗಿದ್ದು, ಆತ ತಮ್ಮ ಪಾಕೆಟ್​​ ಮನಿಯನ್ನು ಇದೀಗ ಅವರಿಗೆ ನೀಡಲು ಮುಂದಾಗಿದ್ದಾರೆ.

ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ
ಟರ್ಕಿಗೆ ನೆರವಾಗಲು ಮುಂದಾದ 8 ವರ್ಷದ ಬಾಲಕ

ನವದೆಹಲಿಯ ಜೈದನ್​ ಖುರೇಷಿ ಎಂಬ ಬಾಲಕ ಟರ್ಕಿ, ಸಿರಿಯಾ ಮಕ್ಕಳ ಕಣ್ಣೀರಿಗೆ ಕರಗಿದ್ದಾನೆ. ದೆಹಲಿಯ ಟರ್ಕಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಈತ ತನ್ನ ಪಾಕೆಟ್​ ಮನಿಯಿಂದ ಜಾಕೆಟ್​​ ಅನ್ನು ಖರೀದಿಸಿದ್ದು, ಅದನ್ನು ಸಂತ್ರಸ್ತರಿಗೆ ನೀಡಿ ನೆರವಾಗುವಂತೆ ಮನವಿ ಮಾಡಿದ್ದಾನೆ. ಇದೇ ವೇಳೆ, ಈ ಕುರಿತು ಮಾತನಾಡಿದ ಬಾಲಕ ಕಳೆದ ಕೆಲವು ದಿನದ ಹಿಂದೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ದೃಶ್ಯ ನೋಡಿದೆ. ಆಗ ನನ್ನಿಂದ ಆಗುವ ಸಣ್ಣ ಸಹಾಯವನ್ನು ಅಲ್ಲಿ ಜನರಿಗೆ ಮಾಡಬೇಕು ಎನಿಸಿತು. ಇದನ್ನು ನನ್ನ ತಂದೆ ಬಳಿ ಹೇಳಿದೆ. ತಕ್ಷಣಕ್ಕೆ ತಂದೆ ಮಗನನ್ನು ಕರೆದುಕೊಂಡು ಟರ್ಕಿ ರಾಯಭಾರಿ ಕಚೇರಿಗೆ ಕೆಲವು ಅಗತ್ಯ ಸಾಮಾಗ್ರಿ ಜೊತೆ ಕರೆತಂದರು ಎಂದಿದ್ದಾರೆ.

ಪ್ರತಿ ನಿತ್ಯ ತಂದೆ ನನಗೆ 100 ರೂಪಾಯಿ ಪಾಕೆಟ್​ ಮನಿಯನ್ನು ನೀಡುತ್ತಾರೆ. ಅವುಗಳನ್ನು ನಾನು ಒಂದು ಕಡೆ ಸಂಗ್ರಹಿಸುತ್ತೇನೆ. ಆ ಸಂಗ್ರಹಿಸಿದ ಹಣದಲ್ಲಿ ಟರ್ಕಿಶ್​ ಸಹಾಯಕ್ಕೆ ಮುಂದಾಗೋಣ ಎಂದು ತಂದೆಗೆ ಹೇಳಿದೆ. ತಂದೆ ಇದಕ್ಕೆ ಅವರ ಹಣವನ್ನು ಸೇರಿಸಿ 112 ಜಾಕೆಟ್​ ಅನ್ನು ಖರೀದಿಸಿದ್ದಾರೆ. ಅದನ್ನು ನಾವು ಟರ್ಕಿ ರಾಯಭಾರಿ ಕಚೇರಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಜೈದನ್​.

ಮಗನ ಕೆಲಸ ನೋಡಿ ಖುಷಿ ಆಯಿತು?: ಇನ್ನು ಈ ಕುರಿತು ಮಾತನಾಡಿರುವ ಜೈದನ್​ ತಂದೆ ಕಸೀಫ್​ ಖುರೇಷಿ, 112 ಜಾಕೆಟ್​ಗೆ 22 ಸಾವಿರ ಆಯಿತು. ಇದರಲ್ಲಿ ಜೈದನ್​ 7.500 ಹಣವನ್ನು ತನ್ನ ಪಾಕೆಟ್​ ಮನಿಯಿಂದ ನೀಡಿದ್ದಾನೆ. ಅವಶ್ಯವಿರುವವರಿಗೆ ಸಹಾಯ ಮಾಡಿದರೆ ಅಲ್ಲಾ ನಮಗೆ ಸಹಾಯ ಮಾಡುತ್ತಾನೆ. ಇದೇ ಕಾರಣಕ್ಕೆ ನಾನು ಮತ್ತು ನನ್ನ ಮಗ ಟರ್ಕಿ ರಾಯಭಾಗಿ ಕಚೇರಿಗೆ ಆಗಮಿಸಿ, ನಮ್ಮಿಂದ ಆಗುವ ಸಹಾಯ ಮಾಡಲು ಮುಂದಾದೆವು ಎಂದಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ದಿಂದ ಇದುವರೆಗೆ 35 ಸಾವಿರ ಜನರು ಸಾವನ್ನಪ್ಪಿದ್ದಾರೆ. ಅನೇಕ ಜನರು ನಿರಾಶ್ರಿತರ ತಾಣ ಸೇರಿದ್ದು, ಚಳಿಯಿಂದಾಗಿ ಕೂಡ ತತ್ತರಿಸುತ್ತಿದ್ದಾರೆ. ಈ ವಿಪತ್ತಿನ ನಿರ್ವಹಣಾ ಪರಿಸ್ಥಿತಿ ನಿಭಾಯಿಸು ಟರ್ಕಿ ಮತ್ತು ಸಿರಿಯಾ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದೆ. ಅನೇಕ ದೇಶಗಳು ಕೂಡ ಈ ಎರಡು ದೇಶಕ್ಕೆ ಸಹಾಯ ಹಸ್ತ ಚಾಚಿದೆ. ಭಾರತ ಕೂಡ ಆಪರೇಷನ್​ ಹಸ್ತದ ಮೂಲಕ ಭೂಕಂಪನದಿಂದ ತತ್ತರಿಸಿರುವ ದೇಶಗಳಿಗೆ ಸಹಾಯ ಹಸ್ತ ಚಾಚಿದೆ. ಈಗಾಗಲೇ 7 ವಿಮಾನಗಳ ಮೂಲಕ ಹೆಲ್ತ್​​ ಕಿಟ್​, ಜಾಕೆಟ್​, ಬ್ಲಾಕೆಟ್​ ಸೇರಿದಂತೆ ಅಗತ್ಯ ವಸ್ತುಗಳನ್ನು ಭಾರತ ರವಾನೆ ಮಾಡಿದೆ.

ಇದನ್ನೂ ಓದಿ: ಭಾರತದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಟರ್ಕಿ ರಾಯಭಾರಿ; ಆಪರೇಷನ್​ ದೋಸ್ತ್​ ಮೂಲಕ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.