ETV Bharat / bharat

60 ದಿನಗಳ ರೈತ ಹೋರಾಟದಲ್ಲಿ ಇದೇ ಮೊದಲ ಬಾರಿಗೆ ಹಿಂಸಾಚಾರ: ಇಷ್ಟು ದಿನದ ಬೆಳವಣಿಗೆಗಳ ಕ್ವಿಕ್​ ಲುಕ್​​​​

author img

By

Published : Jan 26, 2021, 9:06 PM IST

ಇದೇ ಮೊದಲ ಬಾರಿಗೆ ಕೃಷಿ ಕಾಯ್ದೆಗಳ ವಿಚಾರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ರಕ್ತ ಹರಿದಿದೆ. ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಭಿನ್ನಾಭಿಪ್ರಾಯಕ್ಕೆ ದೆಹಲಿ ಸ್ತಬ್ಧವಾಗಿದೆ.

republic day protest
ದೆಹಲಿಯಲ್ಲಿ ರೈತ ಪ್ರತಿಭಟನೆ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಮರ ಮುಂದುವರೆದಿದೆ. ಈ ಪ್ರತಿಭಟನೆ 60 ದಿನಗಳ ಕಾಲ ಶಾಂತಿಯುತವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಹಿಂಸಾಚಾರ ನಡೆದಿದೆ. ಈ 60 ದಿನಗಳಲ್ಲಿನ ಹೋರಾಟ ಹೇಗಿತ್ತು..? ಇಲ್ಲಿದೆ ಡಿಟೇಲ್ಸ್​​.

ನವೆಂಬರ್ 26: ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತ ಸಂಘಟನೆಗಳಿಂದ ನವೆಂಬರ್ 5ರಂದು ರಸ್ತೆ ತಡೆ ವಿಫಲವಾದ ಬೆನ್ನಲ್ಲೇ ದೆಹಲಿ ಚಲೋ ಆಯೋಜನೆ. ದೆಹಲಿ ಪೊಲೀಸರಿಂದ ರೈತರಿಗೆ ತಡೆ. ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು.

ಡಿಸೆಂಬರ್ 1: ಸುಮಾರು 35 ರೈತ ಸಂಘಟನೆಗಳು ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆಯಲ್ಲಿ ಮೊದಲ ಸಂಧಾನ ಸಭೆ ವಿಫಲ. ಕೃಷಿ ಕಾಯ್ದೆಗಳ ರದ್ಧತಿಗೆ ರೈತರ ಆಗ್ರಹ. ಸಂಧಾನ ವಿಫಲ.

ಡಿಸೆಂಬರ್ 3: ಮೊದಲ ಸುತ್ತಿನ ಸಂಧಾನ ಸಭೆ ವಿಫಲವಾದ ನಂತರ ಕೆಲವು ತಿದ್ದುಪಡಿಗಳ ಪ್ರಸ್ತಾವ ಮುಂದಿಟ್ಟ ಕೇಂದ್ರ ಸರ್ಕಾರ. ಒಪ್ಪದ ರೈತ ಸಂಘಟನೆಗಳಿಂದ ನೂತನ ಕಾಯ್ದೆಗಳ ರದ್ದು ಮಾಡಲು ಪಟ್ಟು.

ಡಿಸೆಂಬರ್ 5: ಐದನೇ ಸಂಧಾನ ಸಭೆಯಲ್ಲಿ ಮೌನ ವ್ರತ ಕೈಗೊಂಡ ರೈತ ಮುಖಂಡರು. ಕೇಂದ್ರದಿಂದ ಕಾಯ್ದೆ ರದ್ಧತಿ ಕುರಿತು ಒಂದು ಉತ್ತರಕ್ಕಾಗಿ ಪಟ್ಟು. ಒತ್ತಾಯಕ್ಕೆ ಮಣಿಯದ ಕೇಂದ್ರ ಸರ್ಕಾರ.

ಡಿಸೆಂಬರ್ 8: ಭಾರತ್​ ಬಂದ್​ಗೆ ಕರೆ ನೀಡಿದ ರೈತ ಸಂಘಟನೆಗಳು. ಪಂಜಾಬ್​ ಮತ್ತು ಹರಿಯಾಣ ಸಂಪೂರ್ಣ ಸ್ತಬ್ಧ. ದೇಶದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ. ಕೇಂದ್ರದ ವಿರೋಧ ಪಕ್ಷಗಳಿಂದ ಬಂದ್​ಗೆ ಸಾಥ್. ಬಂದ್​ ನಡೆದ ಸಂಜೆ ಗೃಹ ಮಂತ್ರಿ ಅಮಿತ್ ಶಾ ಮಾತುಕತೆ ವಿಫಲ.

ಡಿಸೆಂಬರ್ 16: ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರರ ತೆರವುಗೊಳಿಸುವ ಕುರಿತಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​. ಅಹಿಂಸಾತ್ಮಕ ಪ್ರತಿಭಟನೆ ರೈತರ ಹಕ್ಕು ಎಂದು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್​. ಪಕ್ಷಪಾತರಹಿತ ಸಮಿತಿ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್​.

ಡಿಸೆಂಬರ್ 21: ದೆಹಲಿಯ ಗಡಿ ಭಾಗದ ಸ್ಥಳಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡ ರೈತರು. ಡಿಸೆಂಬರ್ 25ರಿಂದ 27ವರೆಗೆ ದೆಹಲಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ತಡೆಯೊಡ್ಡುವ ಬಗ್ಗೆ ಯೋಜನೆ ರೂಪಿಸುವುದಾಗಿ ಘೋಷಣೆ.

ಡಿಸೆಂಬರ್ 30: ರೈತ ಸಂಘಟನೆಗಳು ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ನಡುವೆ ಆರನೇ ಸುತ್ತಿನ ಸಂಧಾನ ಸಭೆ. ಕೆಲವೊಂದು ಬದಲಾವಣೆಗಳಿಗೆ ಒಪ್ಪದ ರೈತ ಸಂಘಟನೆಗಳು.

ಜನವರಿ 4: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 7ನೇ ಸಂಧಾನ ಸಭೆ ವಿಫಲ. ಕಾಯ್ದೆಗಳ ರದ್ದತಿಯ ಪಟ್ಟು ಬಿಡದ ರೈತ ಸಂಘಟನೆಗಳು, ನಿಲುವಿಗೆ ಅಂಟಿಕೊಂಡ ಕೇಂದ್ರ ಸರ್ಕಾರ.

ಜನವರಿ 8: ಕಾಯ್ದೆ ರದ್ಧತಿ ಹೊರತಾಗಿ ಬೇರೆ ಪ್ರಸ್ತಾವಗಳೊಂದಿಗೆ ಬರುವಂತೆ ರೈತ ಸಂಘಟನೆಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ. ಕಾನೂನು ವಾಪಸ್​ ಆದ ನಂತರ ಮನೆಗೆ ವಾಪಸಾಗುವುದಾಗಿ ಘೋಷಿಸಿದ ರೈತರು.

ಜನವರಿ 12: ಹೊಸ ಕೃಷಿ ಕಾಯ್ದೆಗಳ ವಿಚಾರವಾಗಿ ಸಮಿತಿ ಜಾರಿಗೆ ತಂದ ಸುಪ್ರೀಂ ಕೋರ್ಟ್​. ಕೇಂದ್ರದ ಅಧಿಕಾರಿಗಳು, ರೈತ ಸಂಘಟನೆಗಳ ಪ್ರಮುಖರ ಸಮಿತಿಗೆ ಸೂಚನೆ. ಕಾಯ್ದೆಗಳ ಜಾರಿಗೆ ತಡೆಯಾಜ್ಞೆ.

ಜನವರಿ 15: ರೈತರ ನಡುವಿನ 9ನೇ ಸುತ್ತಿನ ಮಾತುಕತೆ ವಿಫಲ. ಅವಶ್ಯಕ ತಿದ್ದುಪಡಿ ತರುವುದಾಗಿ ಘೋಷಿಸಿದ ನಂತರವೂ ಒಪ್ಪಂದ ರೈತ ಸಂಘಟನೆಗಳು.

ಜನವರಿ 21: ಬೇಕಿದ್ದಲ್ಲಿ ಒಂದೂವರೆ ವರ್ಷ ಕಾಯ್ದೆಗಳನ್ನು ಅಮಾನತಿನಲ್ಲಿಡುವುದಾಗಿ ಘೋಷಿಸಿದ ಕೇಂದ್ರ ಸರ್ಕಾರ. ಜಂಟಿ ಸಮಿತಿಯಲ್ಲಿ ರೈತ ಸಂಘಟನೆಗಳು ಪಾಲ್ಗೊಳ್ಳುವಂತೆ ಮನವಿ.

ಜನವರಿ 22: ಕಾಯ್ದೆಗಳ ಸಂಪೂರ್ಣ ರದ್ಧತಿಗೆ ಆಗ್ರಹಿಸಿದ ರೈತ ಸಂಘಟನೆಗಳು. ಮತ್ತೊಂದು ಬಾರಿ ರಸ್ತೆ ತಡೆಯುವುದಾಗಿ ರೈತ ಸಂಘಟನೆಗಳ ಹೇಳಿಕೆ. ಗಣತಂತ್ರ ದಿನದಂದು ದೆಹಲಿಗೆ ಟ್ರ್ಯಾಕ್ಟರ್ ಚಲೋ ಮಾಡುವುದಾಗಿ ಎಚ್ಚರಿಕೆ.

ಜನವರಿ 26: ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಹಿಂಸಾರೂಪ ತಾಳಿದ ರೈತ ಸಂಘಟನೆಗಳ ಪ್ರತಿಭಟನೆ. ಸಾರಿಗೆ ವಾಹನಗಳ ಧ್ವಂಸಗೊಳಿಸಿದ ಪ್ರತಿಭಟನಾಕಾರರು. ರೈತರ ಆಕ್ರೋಶಕ್ಕೆ ಹೈರಾಣಾದ ಪೊಲೀಸರು.

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಮರ ಮುಂದುವರೆದಿದೆ. ಈ ಪ್ರತಿಭಟನೆ 60 ದಿನಗಳ ಕಾಲ ಶಾಂತಿಯುತವಾಗಿ ನಡೆದಿದ್ದು, ಇದೇ ಮೊದಲ ಬಾರಿಗೆ ಹಿಂಸಾಚಾರ ನಡೆದಿದೆ. ಈ 60 ದಿನಗಳಲ್ಲಿನ ಹೋರಾಟ ಹೇಗಿತ್ತು..? ಇಲ್ಲಿದೆ ಡಿಟೇಲ್ಸ್​​.

ನವೆಂಬರ್ 26: ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತ ಸಂಘಟನೆಗಳಿಂದ ನವೆಂಬರ್ 5ರಂದು ರಸ್ತೆ ತಡೆ ವಿಫಲವಾದ ಬೆನ್ನಲ್ಲೇ ದೆಹಲಿ ಚಲೋ ಆಯೋಜನೆ. ದೆಹಲಿ ಪೊಲೀಸರಿಂದ ರೈತರಿಗೆ ತಡೆ. ದೆಹಲಿ ಗಡಿಯಲ್ಲಿ ಬೀಡುಬಿಟ್ಟ ರೈತರು.

ಡಿಸೆಂಬರ್ 1: ಸುಮಾರು 35 ರೈತ ಸಂಘಟನೆಗಳು ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆಯಲ್ಲಿ ಮೊದಲ ಸಂಧಾನ ಸಭೆ ವಿಫಲ. ಕೃಷಿ ಕಾಯ್ದೆಗಳ ರದ್ಧತಿಗೆ ರೈತರ ಆಗ್ರಹ. ಸಂಧಾನ ವಿಫಲ.

ಡಿಸೆಂಬರ್ 3: ಮೊದಲ ಸುತ್ತಿನ ಸಂಧಾನ ಸಭೆ ವಿಫಲವಾದ ನಂತರ ಕೆಲವು ತಿದ್ದುಪಡಿಗಳ ಪ್ರಸ್ತಾವ ಮುಂದಿಟ್ಟ ಕೇಂದ್ರ ಸರ್ಕಾರ. ಒಪ್ಪದ ರೈತ ಸಂಘಟನೆಗಳಿಂದ ನೂತನ ಕಾಯ್ದೆಗಳ ರದ್ದು ಮಾಡಲು ಪಟ್ಟು.

ಡಿಸೆಂಬರ್ 5: ಐದನೇ ಸಂಧಾನ ಸಭೆಯಲ್ಲಿ ಮೌನ ವ್ರತ ಕೈಗೊಂಡ ರೈತ ಮುಖಂಡರು. ಕೇಂದ್ರದಿಂದ ಕಾಯ್ದೆ ರದ್ಧತಿ ಕುರಿತು ಒಂದು ಉತ್ತರಕ್ಕಾಗಿ ಪಟ್ಟು. ಒತ್ತಾಯಕ್ಕೆ ಮಣಿಯದ ಕೇಂದ್ರ ಸರ್ಕಾರ.

ಡಿಸೆಂಬರ್ 8: ಭಾರತ್​ ಬಂದ್​ಗೆ ಕರೆ ನೀಡಿದ ರೈತ ಸಂಘಟನೆಗಳು. ಪಂಜಾಬ್​ ಮತ್ತು ಹರಿಯಾಣ ಸಂಪೂರ್ಣ ಸ್ತಬ್ಧ. ದೇಶದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ. ಕೇಂದ್ರದ ವಿರೋಧ ಪಕ್ಷಗಳಿಂದ ಬಂದ್​ಗೆ ಸಾಥ್. ಬಂದ್​ ನಡೆದ ಸಂಜೆ ಗೃಹ ಮಂತ್ರಿ ಅಮಿತ್ ಶಾ ಮಾತುಕತೆ ವಿಫಲ.

ಡಿಸೆಂಬರ್ 16: ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರರ ತೆರವುಗೊಳಿಸುವ ಕುರಿತಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​. ಅಹಿಂಸಾತ್ಮಕ ಪ್ರತಿಭಟನೆ ರೈತರ ಹಕ್ಕು ಎಂದು ಪ್ರತಿಪಾದಿಸಿದ ಸುಪ್ರೀಂ ಕೋರ್ಟ್​. ಪಕ್ಷಪಾತರಹಿತ ಸಮಿತಿ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್​.

ಡಿಸೆಂಬರ್ 21: ದೆಹಲಿಯ ಗಡಿ ಭಾಗದ ಸ್ಥಳಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡ ರೈತರು. ಡಿಸೆಂಬರ್ 25ರಿಂದ 27ವರೆಗೆ ದೆಹಲಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ತಡೆಯೊಡ್ಡುವ ಬಗ್ಗೆ ಯೋಜನೆ ರೂಪಿಸುವುದಾಗಿ ಘೋಷಣೆ.

ಡಿಸೆಂಬರ್ 30: ರೈತ ಸಂಘಟನೆಗಳು ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ನಡುವೆ ಆರನೇ ಸುತ್ತಿನ ಸಂಧಾನ ಸಭೆ. ಕೆಲವೊಂದು ಬದಲಾವಣೆಗಳಿಗೆ ಒಪ್ಪದ ರೈತ ಸಂಘಟನೆಗಳು.

ಜನವರಿ 4: ಕೇಂದ್ರ ಸರ್ಕಾರ ಮತ್ತು ರೈತರ ನಡುವೆ 7ನೇ ಸಂಧಾನ ಸಭೆ ವಿಫಲ. ಕಾಯ್ದೆಗಳ ರದ್ದತಿಯ ಪಟ್ಟು ಬಿಡದ ರೈತ ಸಂಘಟನೆಗಳು, ನಿಲುವಿಗೆ ಅಂಟಿಕೊಂಡ ಕೇಂದ್ರ ಸರ್ಕಾರ.

ಜನವರಿ 8: ಕಾಯ್ದೆ ರದ್ಧತಿ ಹೊರತಾಗಿ ಬೇರೆ ಪ್ರಸ್ತಾವಗಳೊಂದಿಗೆ ಬರುವಂತೆ ರೈತ ಸಂಘಟನೆಗಳಿಗೆ ಸೂಚಿಸಿದ ಕೇಂದ್ರ ಸರ್ಕಾರ. ಕಾನೂನು ವಾಪಸ್​ ಆದ ನಂತರ ಮನೆಗೆ ವಾಪಸಾಗುವುದಾಗಿ ಘೋಷಿಸಿದ ರೈತರು.

ಜನವರಿ 12: ಹೊಸ ಕೃಷಿ ಕಾಯ್ದೆಗಳ ವಿಚಾರವಾಗಿ ಸಮಿತಿ ಜಾರಿಗೆ ತಂದ ಸುಪ್ರೀಂ ಕೋರ್ಟ್​. ಕೇಂದ್ರದ ಅಧಿಕಾರಿಗಳು, ರೈತ ಸಂಘಟನೆಗಳ ಪ್ರಮುಖರ ಸಮಿತಿಗೆ ಸೂಚನೆ. ಕಾಯ್ದೆಗಳ ಜಾರಿಗೆ ತಡೆಯಾಜ್ಞೆ.

ಜನವರಿ 15: ರೈತರ ನಡುವಿನ 9ನೇ ಸುತ್ತಿನ ಮಾತುಕತೆ ವಿಫಲ. ಅವಶ್ಯಕ ತಿದ್ದುಪಡಿ ತರುವುದಾಗಿ ಘೋಷಿಸಿದ ನಂತರವೂ ಒಪ್ಪಂದ ರೈತ ಸಂಘಟನೆಗಳು.

ಜನವರಿ 21: ಬೇಕಿದ್ದಲ್ಲಿ ಒಂದೂವರೆ ವರ್ಷ ಕಾಯ್ದೆಗಳನ್ನು ಅಮಾನತಿನಲ್ಲಿಡುವುದಾಗಿ ಘೋಷಿಸಿದ ಕೇಂದ್ರ ಸರ್ಕಾರ. ಜಂಟಿ ಸಮಿತಿಯಲ್ಲಿ ರೈತ ಸಂಘಟನೆಗಳು ಪಾಲ್ಗೊಳ್ಳುವಂತೆ ಮನವಿ.

ಜನವರಿ 22: ಕಾಯ್ದೆಗಳ ಸಂಪೂರ್ಣ ರದ್ಧತಿಗೆ ಆಗ್ರಹಿಸಿದ ರೈತ ಸಂಘಟನೆಗಳು. ಮತ್ತೊಂದು ಬಾರಿ ರಸ್ತೆ ತಡೆಯುವುದಾಗಿ ರೈತ ಸಂಘಟನೆಗಳ ಹೇಳಿಕೆ. ಗಣತಂತ್ರ ದಿನದಂದು ದೆಹಲಿಗೆ ಟ್ರ್ಯಾಕ್ಟರ್ ಚಲೋ ಮಾಡುವುದಾಗಿ ಎಚ್ಚರಿಕೆ.

ಜನವರಿ 26: ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಹಿಂಸಾರೂಪ ತಾಳಿದ ರೈತ ಸಂಘಟನೆಗಳ ಪ್ರತಿಭಟನೆ. ಸಾರಿಗೆ ವಾಹನಗಳ ಧ್ವಂಸಗೊಳಿಸಿದ ಪ್ರತಿಭಟನಾಕಾರರು. ರೈತರ ಆಕ್ರೋಶಕ್ಕೆ ಹೈರಾಣಾದ ಪೊಲೀಸರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.