ETV Bharat / bharat

ರಾಜ್ಯಸಭೆಗೆ ಆಯ್ಕೆಯಾದ ಶೇ.93 ಸಂಸದರು ಕೋಟ್ಯಧೀಶರು; ಶೇ.40 ಸದಸ್ಯರ ವಿರುದ್ಧ ಕ್ರಿಮಿನಲ್​ ಕೇಸ್​! - ರಾಜ್ಯಸಭೆ ಸದಸ್ಯರ ವಿರುದ್ಧ ಕ್ರಿಮಿನಲ್​ ಕೇಸ್​

ಇತ್ತೀಚಿಗೆ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ವಿವಿಧ ಪಕ್ಷಗಳ 57 ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ 23 ಜನರು (ಶೇ.40ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್​ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ.

Rajya Sabha members facing criminal cases
ರಾಜ್ಯಸಭೆ ಸದಸ್ಯರ ವಿರುದ್ಧ ಕ್ರಿಮಿನಲ್​ ಕೇಸ್
author img

By

Published : Jun 16, 2022, 9:30 PM IST

ರಾಜ್ಯಸಭೆಯು ದೇಶದ ಸಂಸತ್ತಿನ ಮೇಲ್ಮನೆ, ಹಿರಿಯರ ಮನೆ ಎಂಬೆಲ್ಲ ಹಿರಿಮೆ ಹೊಂದಿದೆ. ಆದರೆ, ಇಂತಹ ರಾಜ್ಯಸಭೆಗೆ ಕ್ರಿಮಿನಲ್​ ಹಿನ್ನೆಲೆಯುಳ್ಳ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ. ಇತ್ತೀಚಿಗೆ ಆಯ್ಕೆಯಾದ 57 ನೂತನ ಸದಸ್ಯರಲ್ಲಿ ಶೇ.40ರಷ್ಟು ಎಂದರೆ 23 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸದಸ್ಯರು ಸಲ್ಲಿಸಿದ ಅಫಿಡವಿಟ್‌​ನಲ್ಲೇ ಈ ಮಾಹಿತಿ ಇದೆ. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್​​) ಎಂಬ ಸಂಸ್ಥೆಗಳು ಆ ಅಫಿಡವಿಚ್ ಆಧಾರದ ಮೇಲೆ ತಯಾರಿಸಿದ ಸಮೀಕ್ಷಾ ವರದಿಯನ್ನು ಗುರುವಾರ ಬಿಡುಗಡೆ ಮಾಡಿವೆ.

12 ಜನರ ವಿರುದ್ಧ ಗಂಭೀರ ಕ್ರಿಮಿನಲ್​ ಕೇಸ್​​: ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ವಿವಿಧ ಪಕ್ಷಗಳ 57 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ 23 ಜನರು (ಶೇ.40ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್​ ಪ್ರಕರಣಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಇನ್ನು, 12 ಮಂದಿ ತಮ್ಮ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನದಂತಹ ಗಂಭೀರ ಕ್ರಿಮಿನಲ್​ ಕೇಸ್​​ಗಳಿವೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಯಾವ ಪಕ್ಷದವರು ಎಷ್ಟು ಜನ?: ಪಕ್ಷವಾರು ಸದಸ್ಯರ ಮಾಹಿತಿಯನ್ನೂ ಈ ವರದಿ ವಿಶ್ಲೇಷಿಸಿದೆ. ಬಿಜೆಪಿಯ 22 ಜನರ ಪೈಕಿ 9 ಜನರ ವಿರುದ್ಧ ಕ್ರಿಮಿನಲ್​ ಕೇಸ್​ಗಳಿವೆ. ಅದೇ ರೀತಿಯಾಗಿ ಕಾಂಗ್ರೆಸ್​​ನ 9 ಜನರ ಪೈಕಿ 4, ಟಿಆರ್​ಎಸ್​​ ಮತ್ತು ಆರ್​ಜೆಡಿ ತಲಾ ಇಬ್ಬರು, ವೈಎಸ್​ಆರ್​ ಕಾಂಗ್ರೆಸ್​​, ಡಿಎಂಕೆ, ಎಐಎಡಿಎಂಕೆ, ಸಮಾಜವಾದಿ ಪಕ್ಷದ ಒಬ್ಬ ಸದಸ್ಯ ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಕೂಡ ವಿರುದ್ಧ ಕ್ರಿಮಿನಲ್​ ಕೇಸ್​ ಇರುವುದಾಗಿ ಹೇಳಿದೆ.

ಯಾವ ರಾಜ್ಯದ ಎಷ್ಟು ಸದಸ್ಯರು?: ಉತ್ತರ ಪ್ರದೇಶದಿಂದ ಆಯ್ಕೆಯಾದ 11 ಜನರಲ್ಲಿ 6, ಮಹಾರಾಷ್ಟ್ರದ ಆರು ಮಂದಿ ಪೈಕಿ 4, ತಮಿಳುನಾಡಿನ 6 ಜನರ ಪೈಕಿ 3, ಬಿಹಾರದ 5 ಮಂದಿ ಪೈಕಿ 4, ತೆಲಂಗಾಣದಿಂದ ಆಯ್ಕೆಯಾದ ಇಬ್ಬರೂ ಸದಸ್ಯರ ವಿರುದ್ಧ ಕ್ರಿಮಿನಲ್​ ಕೇಸ್​ ಇದೆ. ಆಂಧ್ರಪ್ರದೇಶದ ನಾಲ್ವರಲ್ಲಿ ಒಬ್ಬರು, ಛತ್ತೀಸ್​ಗಢದ ಇಬ್ಬರಲ್ಲಿ ಒಬ್ಬರು, ರಾಜಸ್ಥಾನದ ನಾಲ್ವರಲ್ಲಿ ಒಬ್ಬರು, ಹರಿಯಾಣದ ಇಬ್ಬರ ಪೈಕಿ ಒಬ್ಬರ ವಿರುದ್ಧ ಇಂತಹ ಪ್ರಕರಣ ಇದೆ.

ಶೇ.93ರಷ್ಟು ಸದಸ್ಯರು ಕೋಟ್ಯಧೀಶರು: ನೂತನ ರಾಜ್ಯಸಭೆ ಸದಸ್ಯರಲ್ಲಿ ಶೇ.93ರಷ್ಟು ಎಂದರೆ 53 ಜನರು ಕೋಟ್ಯಧೀಶರಾಗಿದ್ದಾರೆ. ಅದರಲ್ಲೂ, ಟಿಆರ್​ಎಸ್​​ನ ಬಂಡಿ ಪಾರ್ಥ ಸಾರಥಿ 5,300 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾದ ಕಪಿಲ್​ ಸಿಬಲ್​ 608 ಕೋಟಿ ರೂ. ಹಾಗೂ ಆಪ್​​ನ ವಿಕ್ರಮ್‌ಜಿತ್ ಸಿಂಗ್ 498 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಸರಾಸರಿ ಆಸ್ತಿ ಮೌಲ್ಯ 154.27 ಕೋಟಿ ರೂ.ಗಳಾಗಿದೆ.

ಇದನ್ನೂ ಓದಿ: ವಡಾಪಾವ್ ಎಂದು 100 ಗ್ರಾಂ ಚಿನ್ನಾಭರಣ ಕೊಟ್ಟ ಮಾಲಕಿ; ಒಣ ಬ್ರೆಡ್‌ ಎಂದು ಕಸದ ರಾಶಿಗೆಸೆದು ಹೋದ ಭಿಕ್ಷುಕಿ!

ರಾಜ್ಯಸಭೆಯು ದೇಶದ ಸಂಸತ್ತಿನ ಮೇಲ್ಮನೆ, ಹಿರಿಯರ ಮನೆ ಎಂಬೆಲ್ಲ ಹಿರಿಮೆ ಹೊಂದಿದೆ. ಆದರೆ, ಇಂತಹ ರಾಜ್ಯಸಭೆಗೆ ಕ್ರಿಮಿನಲ್​ ಹಿನ್ನೆಲೆಯುಳ್ಳ ವ್ಯಕ್ತಿಗಳು ಪ್ರವೇಶಿಸುತ್ತಿದ್ದಾರೆ. ಇತ್ತೀಚಿಗೆ ಆಯ್ಕೆಯಾದ 57 ನೂತನ ಸದಸ್ಯರಲ್ಲಿ ಶೇ.40ರಷ್ಟು ಎಂದರೆ 23 ಮಂದಿ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸದಸ್ಯರು ಸಲ್ಲಿಸಿದ ಅಫಿಡವಿಟ್‌​ನಲ್ಲೇ ಈ ಮಾಹಿತಿ ಇದೆ. ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್​​) ಎಂಬ ಸಂಸ್ಥೆಗಳು ಆ ಅಫಿಡವಿಚ್ ಆಧಾರದ ಮೇಲೆ ತಯಾರಿಸಿದ ಸಮೀಕ್ಷಾ ವರದಿಯನ್ನು ಗುರುವಾರ ಬಿಡುಗಡೆ ಮಾಡಿವೆ.

12 ಜನರ ವಿರುದ್ಧ ಗಂಭೀರ ಕ್ರಿಮಿನಲ್​ ಕೇಸ್​​: ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ವಿವಿಧ ಪಕ್ಷಗಳ 57 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ 23 ಜನರು (ಶೇ.40ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್​ ಪ್ರಕರಣಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಇನ್ನು, 12 ಮಂದಿ ತಮ್ಮ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನದಂತಹ ಗಂಭೀರ ಕ್ರಿಮಿನಲ್​ ಕೇಸ್​​ಗಳಿವೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಯಾವ ಪಕ್ಷದವರು ಎಷ್ಟು ಜನ?: ಪಕ್ಷವಾರು ಸದಸ್ಯರ ಮಾಹಿತಿಯನ್ನೂ ಈ ವರದಿ ವಿಶ್ಲೇಷಿಸಿದೆ. ಬಿಜೆಪಿಯ 22 ಜನರ ಪೈಕಿ 9 ಜನರ ವಿರುದ್ಧ ಕ್ರಿಮಿನಲ್​ ಕೇಸ್​ಗಳಿವೆ. ಅದೇ ರೀತಿಯಾಗಿ ಕಾಂಗ್ರೆಸ್​​ನ 9 ಜನರ ಪೈಕಿ 4, ಟಿಆರ್​ಎಸ್​​ ಮತ್ತು ಆರ್​ಜೆಡಿ ತಲಾ ಇಬ್ಬರು, ವೈಎಸ್​ಆರ್​ ಕಾಂಗ್ರೆಸ್​​, ಡಿಎಂಕೆ, ಎಐಎಡಿಎಂಕೆ, ಸಮಾಜವಾದಿ ಪಕ್ಷದ ಒಬ್ಬ ಸದಸ್ಯ ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಕೂಡ ವಿರುದ್ಧ ಕ್ರಿಮಿನಲ್​ ಕೇಸ್​ ಇರುವುದಾಗಿ ಹೇಳಿದೆ.

ಯಾವ ರಾಜ್ಯದ ಎಷ್ಟು ಸದಸ್ಯರು?: ಉತ್ತರ ಪ್ರದೇಶದಿಂದ ಆಯ್ಕೆಯಾದ 11 ಜನರಲ್ಲಿ 6, ಮಹಾರಾಷ್ಟ್ರದ ಆರು ಮಂದಿ ಪೈಕಿ 4, ತಮಿಳುನಾಡಿನ 6 ಜನರ ಪೈಕಿ 3, ಬಿಹಾರದ 5 ಮಂದಿ ಪೈಕಿ 4, ತೆಲಂಗಾಣದಿಂದ ಆಯ್ಕೆಯಾದ ಇಬ್ಬರೂ ಸದಸ್ಯರ ವಿರುದ್ಧ ಕ್ರಿಮಿನಲ್​ ಕೇಸ್​ ಇದೆ. ಆಂಧ್ರಪ್ರದೇಶದ ನಾಲ್ವರಲ್ಲಿ ಒಬ್ಬರು, ಛತ್ತೀಸ್​ಗಢದ ಇಬ್ಬರಲ್ಲಿ ಒಬ್ಬರು, ರಾಜಸ್ಥಾನದ ನಾಲ್ವರಲ್ಲಿ ಒಬ್ಬರು, ಹರಿಯಾಣದ ಇಬ್ಬರ ಪೈಕಿ ಒಬ್ಬರ ವಿರುದ್ಧ ಇಂತಹ ಪ್ರಕರಣ ಇದೆ.

ಶೇ.93ರಷ್ಟು ಸದಸ್ಯರು ಕೋಟ್ಯಧೀಶರು: ನೂತನ ರಾಜ್ಯಸಭೆ ಸದಸ್ಯರಲ್ಲಿ ಶೇ.93ರಷ್ಟು ಎಂದರೆ 53 ಜನರು ಕೋಟ್ಯಧೀಶರಾಗಿದ್ದಾರೆ. ಅದರಲ್ಲೂ, ಟಿಆರ್​ಎಸ್​​ನ ಬಂಡಿ ಪಾರ್ಥ ಸಾರಥಿ 5,300 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾದ ಕಪಿಲ್​ ಸಿಬಲ್​ 608 ಕೋಟಿ ರೂ. ಹಾಗೂ ಆಪ್​​ನ ವಿಕ್ರಮ್‌ಜಿತ್ ಸಿಂಗ್ 498 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೊಸದಾಗಿ ಆಯ್ಕೆಯಾದ ಸದಸ್ಯರ ಸರಾಸರಿ ಆಸ್ತಿ ಮೌಲ್ಯ 154.27 ಕೋಟಿ ರೂ.ಗಳಾಗಿದೆ.

ಇದನ್ನೂ ಓದಿ: ವಡಾಪಾವ್ ಎಂದು 100 ಗ್ರಾಂ ಚಿನ್ನಾಭರಣ ಕೊಟ್ಟ ಮಾಲಕಿ; ಒಣ ಬ್ರೆಡ್‌ ಎಂದು ಕಸದ ರಾಶಿಗೆಸೆದು ಹೋದ ಭಿಕ್ಷುಕಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.