ETV Bharat / bharat

ಆಮ್ಲಜನಕದ ಕೊರತೆ: ದೆಹಲಿಯ ವೈದ್ಯ ಸೇರಿ 12 ಸೋಂಕಿತರು ಸಾವು

author img

By

Published : May 2, 2021, 9:58 AM IST

Updated : May 2, 2021, 10:30 AM IST

ದೆಹಲಿಯ ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರು ಸೇರಿದಂತೆ 12 ಮಂದಿ ಕೊರೊನಾ ಸೋಂಕಿತರು ಆಮ್ಲಜನಕದ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರು ಸೇರಿದಂತೆ 12 ಮಂದಿ ಕೊರೊನಾ ಸೋಂಕಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಒಮ್ಮೆ ರೋಗಿಯು ಸಮತೋಲನ ಕಳೆದುಕೊಂಡರೆ ಆತನನ್ನು ಉಳಿಸುವುದು ಕಷ್ಟ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಮುಂದಿನ 24-48 ಗಂಟೆಗಳಲ್ಲಿ ಸಾವಿನ ಪ್ರಮಾಣವು ಕಳೆದ ಕೆಲವು ದಿನಗಳಲ್ಲಿ ಇಲ್ಲಿವರೆಗೆ ಹೊಂದಿದ್ದ ಸರಾಸರಿಗಿಂತ ಹೆಚ್ಚಿರುತ್ತದೆ" ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾನ್ಶು ಬಂಕಟಾ ಹೇಳಿದರು.

ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರಲ್ಲಿ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಆರ್.ಕೆ.ಹಿಮ್ಥಾನಿ ಸೇರಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಎಸ್.ಸಿ.ಎಲ್.ಗುಪ್ತಾ ಹೇಳಿದ್ದಾರೆ.

ಇದನ್ನು ಓದಿ: ಆಕ್ಸಿಜನ್​ ಕೊರತೆಯಿಂದ ದೆಹಲಿ ಆಸ್ಪತ್ರೆಯಲ್ಲಿ 8 ರೋಗಿಗಳು ಸಾವು

ಇನ್ನು ಈ ಘಟನೆ ಸಂಬಂಧ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಸುದ್ದಿ ತುಂಬಾ ನೋವು ತಂದಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ನೀಡುವ ಮೂಲಕ ಅವರ ಜೀವಗಳನ್ನು ಉಳಿಸಬಹುದಿತ್ತು. ನಮ್ಮ ಜನರು ಈ ರೀತಿ ಸಾಯುತ್ತಿರುವುದನ್ನು ನೋಡಲಾಗುವುದಿಲ್ಲ. ದೆಹಲಿಗೆ 976 ಟನ್ ಆಮ್ಲಜನಕ ಬೇಕು. ಆದರೆ ಕೇವಲ 312 ಟನ್​ ಮಾತ್ರ ಬಂದಿದೆ. ಇಷ್ಟು ಕಡಿಮೆ ಪ್ರಮಾಣದ ಆಮ್ಲಜನಕದಲ್ಲಿ ದೆಹಲಿ ಹೇಗೆ ಉಸಿರಾಡುತ್ತದೆ? " ಎಂದು ಅವರು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ದೆಹಲಿಯು ತನ್ನ ನಿಗದಿಪಡಿಸಿದ ಪ್ರಮಾಣದ ಆಮ್ಲಜನಕವನ್ನು ಪಡೆಯುತ್ತಿಲ್ಲ. ಸರ್ಕಾರವು ರಿಸರ್ವ್ ಟ್ಯಾಂಕರ್ ಹೊಂದಿಲ್ಲದ ಕಾರಣ ಶನಿವಾರ ಈ ಸಮಸ್ಯೆ ಉಲ್ಬಣಗೊಂಡಿದೆ ಎಂದು ಬಂಕಟಾ ಹೇಳಿದರು.

ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರು ಸೇರಿದಂತೆ 12 ಮಂದಿ ಕೊರೊನಾ ಸೋಂಕಿತರು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಒಮ್ಮೆ ರೋಗಿಯು ಸಮತೋಲನ ಕಳೆದುಕೊಂಡರೆ ಆತನನ್ನು ಉಳಿಸುವುದು ಕಷ್ಟ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಮುಂದಿನ 24-48 ಗಂಟೆಗಳಲ್ಲಿ ಸಾವಿನ ಪ್ರಮಾಣವು ಕಳೆದ ಕೆಲವು ದಿನಗಳಲ್ಲಿ ಇಲ್ಲಿವರೆಗೆ ಹೊಂದಿದ್ದ ಸರಾಸರಿಗಿಂತ ಹೆಚ್ಚಿರುತ್ತದೆ" ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಧಾನ್ಶು ಬಂಕಟಾ ಹೇಳಿದರು.

ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರಲ್ಲಿ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಆರ್.ಕೆ.ಹಿಮ್ಥಾನಿ ಸೇರಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಎಸ್.ಸಿ.ಎಲ್.ಗುಪ್ತಾ ಹೇಳಿದ್ದಾರೆ.

ಇದನ್ನು ಓದಿ: ಆಕ್ಸಿಜನ್​ ಕೊರತೆಯಿಂದ ದೆಹಲಿ ಆಸ್ಪತ್ರೆಯಲ್ಲಿ 8 ರೋಗಿಗಳು ಸಾವು

ಇನ್ನು ಈ ಘಟನೆ ಸಂಬಂಧ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಸುದ್ದಿ ತುಂಬಾ ನೋವು ತಂದಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ನೀಡುವ ಮೂಲಕ ಅವರ ಜೀವಗಳನ್ನು ಉಳಿಸಬಹುದಿತ್ತು. ನಮ್ಮ ಜನರು ಈ ರೀತಿ ಸಾಯುತ್ತಿರುವುದನ್ನು ನೋಡಲಾಗುವುದಿಲ್ಲ. ದೆಹಲಿಗೆ 976 ಟನ್ ಆಮ್ಲಜನಕ ಬೇಕು. ಆದರೆ ಕೇವಲ 312 ಟನ್​ ಮಾತ್ರ ಬಂದಿದೆ. ಇಷ್ಟು ಕಡಿಮೆ ಪ್ರಮಾಣದ ಆಮ್ಲಜನಕದಲ್ಲಿ ದೆಹಲಿ ಹೇಗೆ ಉಸಿರಾಡುತ್ತದೆ? " ಎಂದು ಅವರು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ದೆಹಲಿಯು ತನ್ನ ನಿಗದಿಪಡಿಸಿದ ಪ್ರಮಾಣದ ಆಮ್ಲಜನಕವನ್ನು ಪಡೆಯುತ್ತಿಲ್ಲ. ಸರ್ಕಾರವು ರಿಸರ್ವ್ ಟ್ಯಾಂಕರ್ ಹೊಂದಿಲ್ಲದ ಕಾರಣ ಶನಿವಾರ ಈ ಸಮಸ್ಯೆ ಉಲ್ಬಣಗೊಂಡಿದೆ ಎಂದು ಬಂಕಟಾ ಹೇಳಿದರು.

Last Updated : May 2, 2021, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.