ಕರ್ನಾಟಕ

karnataka

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾನುವಾರ ಕರೆಂಟ್ ಕಟ್

By ETV Bharat Karnataka Team

Published : Jun 29, 2024, 8:26 PM IST

ಬೆಸ್ಕಾಂ
ಬೆಸ್ಕಾಂ (ETV Bharat)

ಬೆಂಗಳೂರು: ತ್ರೈಮಾಸಿಕ ಕಾಮಗಾರಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಹಿನ್ನೆಲೆ ನಗರದಲ್ಲಿ ವಿವಿಧ ಭಾಗಗಳಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಗರದ ಪೀಣ್ಯ 10ನೇ ಮುಖ್ಯರಸ್ತೆ, 11ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮೀ ದೇವಿನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶ ನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ, 6ನೇ, 7ನೇ, 8ನೇ, 9ನೇ ಅಡ್ಡ ರಸ್ತೆ, 1ನೇ ಹಂತದ ಪೀಣ್ಯ 7ನೇ ಅಡ್ಡ ರಸ್ತೆ, 1ನೇ ಹಂತ ಪೀಣ್ಯ ಕೈಗಾರಿಕಾ ಪ್ರದೇಶ, 7ನೇ ಅಡ್ಡ ರಸ್ತೆ, 1ನೇ ಹಂತದ ಟಿವಿಎಸ್ ಕ್ರಾಸ್, ಇಸ್ರೋ 1ನೇ, 2ನೇ ಅಡ್ಡ ರಸ್ತೆ, 1ನೇ ಹಂತದ ಎಂಇಐ ಮತ್ತು ಯಶವಂತಪುರ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ABOUT THE AUTHOR

...view details