ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಹಿಂದೂ ಮತದಾರರ ಕ್ರೋಢೀಕರಣ ಆಗುತ್ತಿದೆ: ಬಿ. ವೈ. ರಾಘವೇಂದ್ರ - B Y Raghavendra - B Y RAGHAVENDRA

ಬಿಜೆಪಿ ಅಭ್ಯರ್ಥಿಗೆ ಮತಗಳ ಕೊರತೆ ಆಗಬಾರದು ಎಂದು ಹಿಂದೂ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ (ETV Bharat)

By ETV Bharat Karnataka Team

Published : May 5, 2024, 4:33 PM IST

Updated : May 5, 2024, 10:58 PM IST

ಬಿ. ವೈ. ರಾಘವೇಂದ್ರ (ETV Bharat)

ಶಿವಮೊಗ್ಗ: ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ಹೋರಾಟ ನಡೆಯುತ್ತಿದೆ. ಪಕ್ಷೇತರವಾಗಿ ನಮ್ಮ ಕೆಲ ಸ್ನೇಹಿತರು ನಿಂತಿರುವುದರಿಂದ ನಮ್ಮ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ವಿಶ್ವಾಸ ಬಂದಿದೆ. ಹಿಂದೂ ಮತದಾರರ ಕ್ರೋಢೀಕರಣ ಇದರ ಮುಖಾಂತರ ಆಗುತ್ತಿದೆ. ಬಿಜೆಪಿ ಅಭ್ಯರ್ಥಿಗೆ ಮತಗಳ ಕೊರತೆ ಆಗಬಾರದು ಎಂದು ಹಿಂದೂ ಬಾಂಧವರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಮನಸ್ಸು ತುಂಬಾ ದೊಡ್ಡದು. ದೇಶದ ಹಿತದೃಷ್ಟಿಯಿಂದ, ಜನರ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಹಾಗೂ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದ ಅವರು, ರಾಘವೇಂದ್ರ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಒಂದೂಂದು ಹೆಜ್ಜೆ ಇಟ್ಟರೂ ರಾಘಣ್ಣ ಕಟ್ಟಿಸಿದ ಕಟ್ಟೆಗಳು ಕಾಣುತ್ತವೆ. ಅದರ ಪಟ್ಟಿಯನ್ನು ಬೇಕಾದರೆ ಅವರಿಗೆ ಕೊಡುತ್ತೇನೆ. ನೀರಾವರಿ, ರಸ್ತೆ - ಚರಂಡಿ, ವಿದ್ಯುತ್​ ದೀಪ, ಸಮುದಾಯ ಭವನ, ಬಿಎಸ್​ಎನ್​ಎಲ್​ ಟವರ್​ಗಳಿರಬಹುದು. ಅವರಿಗೆ ಎಲ್ಲೆಲ್ಲಿ ಕಟ್ಟೆ ನೋಡಬೇಕು ಅಂತ ಅನಿಸುತ್ತೆ ಹೇಳಲಿ, ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಪಟ್ಟಿ ಕೊಡುವ ಕೆಲಸ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.

ಮೊದಲನೇ ಲೋಕಸಭಾ ಚುನಾವಣೆಯಲ್ಲಿ 50 ಸಾವಿರ, ಎರಡನೇ ಚುನಾವಣೆಯಲ್ಲಿ 70 ಸಾವಿರ, ಮೂರನೇ ಚುನಾವಣೆಯಲ್ಲಿ 2 ಲಕ್ಷದ 35 ಸಾವಿರ ಮತಗಳ ಅಂತರದಿಂದ ಜನ ಆಶೀರ್ವಾದ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಮತದಾರರ ವಿಶ್ವಾಸ ಹೆಚ್ಚಾಗುತ್ತಿದೆ. ಈ ಕಳೆದ ಬಾರಿ ಕೊಟ್ಟ ಲೀಡ್​ ಮೀರಿ ಹೆಚ್ಚು ಮತಗಳ ಅಂತರದಿಂದ ಈ ಬಾರಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಕೈ ಜೋಡಿಸಿರುವುದು ನೂರಕ್ಕೆ ನೂರು ನಮಗೆ ಶಕ್ತಿ ಬಂದಂತಾಗಿದೆ ಎಂದರು.

ಹಾಸನ ಪೆನ್​ ಡ್ರೈವ್​ ಪ್ರಕರಣದ ಬಗ್ಗೆ ಮಾತನಾಡಿ, ಪ್ರಜ್ವಲ್ ರೇವಣ್ಣನನ್ನು ಜೆಡಿಎಸ್​​ ಪಕ್ಷದ ಚೌಕಟ್ಟಿನಲ್ಲಿ ಅಮಾನತು ಮಾಡಿ ತೀರ್ಮಾನ ಕೈಗೊಂಡಿದೆ. ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ಮೋದಿಯವರ ಸಾಧನೆ ಬಗ್ಗೆ ಹೇಳಲಿಕ್ಕೆ ಆಗೋಲ್ಲ, ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ; ಬಿ‌ ಕೆ ಹರಿಪ್ರಸಾದ್ - BK Hariprasad

Last Updated : May 5, 2024, 10:58 PM IST

ABOUT THE AUTHOR

...view details