ಕರ್ನಾಟಕ

karnataka

ETV Bharat / state

ಹೊತ್ತಿ ಉರಿದ ದನದ ಕೊಟ್ಟಿಗೆ: ಕಟ್ಟಿದ ಸ್ಥಿತಿಯಲ್ಲೇ 6 ಹಸು, 2 ಕರು ಸಜೀವ ದಹನ - FIRE IN COWSHED

ದನದ ಕೊಟ್ಟಿಗೆ ಹೊತ್ತಿ ಉರಿದು 6 ಹಸು ಮತ್ತು 2 ಕರು ಸಜೀವ ದಹನವಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹೊತ್ತಿ ಉರಿದ ದನದ ಕೊಟ್ಟಿಗೆ, Fire at cow shed
ಹೊತ್ತಿ ಉರಿದ ದನದ ಕೊಟ್ಟಿಗೆ (ETV Bharat)

By ETV Bharat Karnataka Team

Published : Feb 16, 2025, 11:54 AM IST

ಹಾವೇರಿ:ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ 6 ಹಸು ಮತ್ತು 2 ಕರುಗಳು ಸಜೀವ ದಹನವಾದ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಬಳಿಯ ಕಡೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ನಾಗಪ್ಪ ಅಸುಂಡಿ, ಹನುಮಂತಪ್ಪ ಅಸುಂಡಿ ಎಂಬವರಿಗೆ ಸೇರಿದ ಕೊಟ್ಟಿಗೆಯಲ್ಲಿ ದುರ್ಘಟನೆ ಸಂಭವಿಸಿದೆ. ಊರ ಹೊರಗಿರುವ ಜಾಗದಲ್ಲಿರುವ ಕೊಟ್ಟಿಗೆಗೆ ಬೆಂಕಿ ತಗುಲಿದೆ. ನಂತರ ಪೂರ್ತಿ ವ್ಯಾಪಿಸಿ ಹೊತ್ತಿ ಉರಿದಿದೆ. ಹಸುಗಳು ಮತ್ತು ಕರುಗಳು ಕಟ್ಟಿದ ಸ್ಥಳದಲ್ಲಿಯೇ ಸಜೀವ ದಹನವಾಗಿವೆ.

ಹೊತ್ತಿ ಉರಿದ ದನದ ಕೊಟ್ಟಿಗೆ (ETV Bharat)

ಅವಘಡದಲ್ಲಿ ಜಾನುವಾರುಗಳು ಸೇರಿದಂತೆ ಸುಮಾರು 6 ಲಕ್ಷಕ್ಕೂ ಅಧಿಕ ಮೌಲ್ಯದ ದನಕೊಟ್ಟಿಗೆ ಸುಟ್ಟು ಕರಕಲಾಗಿದೆ. ರಟ್ಟಿಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಅಡುಗೆ ಅನಿಲ ಸೋರಿಕೆ: ಮಗನ ಮದುವೆಗಿಟ್ಟಿದ್ದ ಚಿನ್ನಾಭರಣ, ಬಟ್ಟೆಬರೆ ಸುಟ್ಟು ಕರಕಲು

ಇದನ್ನೂ ಓದಿ:ಪೊಲೀಸರು ವಶಪಡಿಸಿಕೊಂಡಿದ್ದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ; 130ಕ್ಕೂ ಅಧಿಕ ವಾಹನಗಳು ಅಗ್ನಿಗಾಹುತಿ

ABOUT THE AUTHOR

...view details