ಕೊಪ್ಪಳ: ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ಗವಿಸಿದ್ದೇಶ್ವರ ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಮರಿಶಾಂತವೀರ ಸ್ವಾಮೀಜಿ ಗುಡಿಸಲಲ್ಲಿರುವ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತುವ ಆಶಯ ಹೊಂದಿದ್ದರು. ಅದೇ ಆಶಯದಿಂದ ನಾವು ಮುನ್ನಡೆಯುತ್ತಿದ್ದೇವೆ ಎಂದು ಅಭಿನವ ಗವಿಸಿದ್ದೇಶ್ವರ ಶ್ರೀ ಹೇಳಿದರು. ಗವಿಮಠದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬೃಹತ್ ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಕಾರಣ, ಜೀವನದಲ್ಲಿ ಸಫಲತೆ ಹೊಂದಬೇಕು. ಸಫಲತೆ ಪಡೆಯಲು ಹುಟ್ಟುವಾಗ ಯಾರ ಹಣೆಯ ಮೇಲೆ ಲೇಬಲ್ ಇರೋದಿಲ್ಲ. ಗೊತ್ತಿಲ್ಲದೇ ಜಗತ್ತಿಗೆ ಬಂದು ಹಲವು ವೈರುಧ್ಯಗಳ ಮಧ್ಯೆ ಸಫಲತೆ ಸಾಧಿಸಬೇಕು. ಡಸ್ಟ್ ಬಿನ್ ಸಹ ನನ್ನ ಉಪಯೋಗಿಸಿ ಎನ್ನುತ್ತೆ. ಮನುಷ್ಯನಾಗಿ ನಾವೂ ನನ್ನ ಉಪಯೋಗಿಸಿ ಎನ್ನಬೇಕು. ಮನುಷ್ಯ ಸಫಲತೆ ಯಾವಾಗ ಎಂದರೆ ಇನ್ನೊಬ್ಬರ ದುಃಖದ ಕಣ್ಣೀರು ಒರೆಸಿದಾಗ ಎಂದರು.