ಕರ್ನಾಟಕ

karnataka

ETV Bharat / spiritual

ಬುಧವಾರದ ಪಂಚಾಂಗ, ಭವಿಷ್ಯ: ನೀವಿಂದು ಕೆಲವು ಅಡೆತಡೆಗಳನ್ನು ದಾಟಬಹುದು..! - DAILY HOROSCOPE OF WEDNESDAY

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Daily horoscope of wednesday
ಬುಧವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Jan 29, 2025, 4:57 AM IST

ಇಂದಿನ ಪಂಚಾಂಗ

29-01-2025, ಬುಧವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ:ಪುಷ್ಯ

ನಕ್ಷತ್ರ: ಉತ್ತರಾಷಾಢ

ಸೂರ್ಯೋದಯ :ಮುಂಜಾನೆ 06:45 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 12:21 ರಿಂದ 1:09 ಗಂಟೆಯವರೆಗೆ

ರಾಹುಕಾಲ :ಮಧ್ಯಾಹ್ನ 12:31 ರಿಂದ 13:57 ಗಂಟೆಯತನಕ

ದುರ್ಮುಹೂರ್ತಂ : ಮಧ್ಯಾಹ್ನ 13:57 ರಿಂದ 15:24 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 06:16 ಗಂಟೆಗೆ

ಮೇಷ :ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬದ್ಧತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ನೀವು ಬಿಡುವು ತೆಗೆದುಕೊಂಡು ಸಂತೋಷಪಡುವ ಮತ್ತು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ ಸಿಗಲಿದೆ.

ವೃಷಭ : ನೀವಿಂದು ನಿಮ್ಮ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತೀರಿ. ನೀವು ಇತರರ ಕೆಲಸಕ್ಕೆ ನಿಮ್ಮ ತಪ್ಪು ಎಂದು ಭಾವಿಸುತ್ತೀರಿ. ಸಂಜೆಯ ವೇಳೆಗೆ ವಿಷಯಗಳು ಆಶಾಭಂಗ ಉಂಟುಮಾಡಬಹುದು. ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನೀವು ಶಾಂತರಾಗಿ ಉಳಿಯುವುದು ಸೂಕ್ತ.

ಮಿಥುನ :ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮೂಡ್ ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಬಹುದು. ನೀವು ವಿಚಲಿತರಾಗುವುದಿಲ್ಲ ಮತ್ತು ನಿಮ್ಮ ವರ್ಚಸ್ವಿ ವ್ಯಕ್ತಿತ್ವಕ್ಕೆ ಮರಳುವಿರಿ.

ಕರ್ಕಾಟಕ : ಇಂದು, ನೀವು ನಿಮ್ಮ ಅಗತ್ಯಗಳನ್ನು ಪೂರೈಸಲು ಹಣ ಬಳಸುತ್ತೀರಿ. ನಿಮ್ಮ ಪ್ರಕಾರ ಏನೇ ಬದಲಾಗಬೇಕೆಂದರೂ ನೀವು ಅದಕ್ಕೆ ಹಣ ಎಸೆದು ಬದಲಾಯಿಸುತ್ತೀರಿ. ನಿಮ್ಮ ಪ್ರೀತಿಪಾತ್ರರು ನಿಮ್ಮ ಹಣಕಾಸಿನ ಲಾಭಗಳನ್ನು ಸಂಭ್ರಮಿಸುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಮತ್ತಷ್ಟು ಖರ್ಚು ಮಾಡುತ್ತೀರಿ. ಹಣ ಒಳ ಹರಿಯುವ ಮೊತ್ತಕ್ಕೆ ಯಾವುದೇ ಮಿತಿ ಇದ್ದರೆ, ನಿಮ್ಮ ಹಣ ಬೊಕ್ಕಸ ಬಿಡುವುದಕ್ಕೆ ಮಿತಿಯೇ ಇಲ್ಲ.

ಸಿಂಹ : ನೀವು ಒತ್ತಡದ ಕಾರ್ಯಗಳಿಂದ ದೂರ ಉಳಿಯುವಲ್ಲಿ ಕೊಂಚ ಆತಂಕ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ. ಆದರೆ ಅವು ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳಗೊಳ್ಳಲು ದಾರಿಗಳನ್ನು ಹುಡುಕಿರಿ.

ಕನ್ಯಾ : ಆರೋಗ್ಯದ ವಿಷಯಕ್ಕೆ ಬಂದರೆ ಅನಿಶ್ಚಿತತೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಹೂಡಿಕೆ ಮಾಡಿ. ಕೇವಲ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಎಂದು ತಿಳಿಯಿರಿ.

ತುಲಾ : ನಿಮ್ಮ ಆತ್ಮಸಾಕ್ಷಿಯ ಮಾತು ಕೇಳುವ ಸಮಯವೊಂದಿದ್ದರೆ, ಅದು ಇಂದು. ಹೊಸ ವ್ಯಾಪಾರದ ಸಾಹಸಗಳನ್ನು ಮಾಡಲು ಮುಖ್ಯವಾಗಿ ಫ್ರೀಲಾನ್ಸರ್​ಗಳಿಗೆ ಇದು ಸಕಾರಾತ್ಮಕ ದಿನವಾಗಿದೆ. ನೀವು ನಿಮ್ಮ ಆಂತರಿಕ ಧ್ವನಿಯ ಮಾತು ಕೇಳಿದರೆ ಮತ್ತು ಉತ್ಸಾಹದಿಂದ ಬೆಂಬಲಿಸಿದರೆ ತಪ್ಪಾಗುವುದು ಕಷ್ಟಸಾಧ್ಯ. ಬೆಳಗಿನ ಕಠಿಣ ಪರಿಶ್ರಮ ಮತ್ತು ಮಧ್ಯಾಹ್ನದ ಒತ್ತಡ ಸಂಜೆಯ ಸಂತೋಷಕ್ಕೆ ದಾರಿ ನೀಡುತ್ತವೆ. ನೀವೇನು ಮಾಡುತ್ತೀರೋ ಅದನ್ನು ಆನಂದಿಸಿ.

ವೃಶ್ಚಿಕ :ಇದು ವ್ಯಾಪಾರದ ಸಮಯ ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿವೆ. ಅವು ನೀವು ಕೆಲ ಅಡೆತಡೆಗಳನ್ನು ದಾಟಬಹುದು ಎಂದು ಸೂಚಿಸುತ್ತಿವೆ. ನಿಮ್ಮ ಸಮಯ ತೆಗೆದುಕೊಳ್ಳಿ, ತೊಂದರೆಗಳನ್ನು ಪರಿಹರಿಸಿಕೊಳ್ಳಿ ಮತ್ತು ಅಭಿಮಾನಿಗಳು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು :ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು. ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ : ಬಾಂಧವ್ಯದ ಬಗ್ಗೆ ಕೆಲ ವಾಸ್ತವಾಂಶಗಳು ನಿಮ್ಮ ಗಮನ ಸೆಳೆಯುತ್ತವೆ. ನೀವು ಅದು ಜಿಜ್ಞಾಸೆಯದ್ದು ಎಂದು ಕಾಣುತ್ತೀರಿ ಮತ್ತು ಈ ರಹಸ್ಯ ಭೇದಿಸಲು ಸಾಕಷ್ಟು ಸಮಯ ಕಳೆಯುತ್ತೀರಿ. ಅಲ್ಲದೆ ಪರಿಣಾಮಕಾರಿ ಸಂವಹನ ಶಕ್ತಿ ತಪ್ಪು ವ್ಯಾಖ್ಯಾನದಿಂದ ಉಂಟಾಗುವ ಸಂಘರ್ಷಗಳನ್ನು ಕರಗಿಸಲು ನೆರವಾಗುತ್ತವೆ. ಚಿಂತೆ ಮಾಡಲು ಕಾರಣವೇ ಇಲ್ಲ. ಆದರೆ ನಿಮ್ಮ ವಿರೋಧಿಗಳ ಜೊತೆಯಲ್ಲಿ ಚಟುವಟಿಕೆಗಳನ್ನು ನಡೆಸುವುದು ಸ್ಪರ್ಧೆಯಲ್ಲಿ ನಿಮ್ಮನ್ನು ಮುಂದೆ ಇರಲು ನೆರವಾಗುತ್ತದೆ.

ಕುಂಭ : ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಮಾತುಗಾರಿಕೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ವಾದಗಳು ಬಹಳ ಮನ ಒಲಿಸುವಂತಿರುತ್ತವೆ.

ಮೀನ :`ನೆರೆಹೊರೆಯವರನ್ನು ಪ್ರೀತಿಸಿ’ ಎನ್ನುವ ಆಜ್ಞೆಯನ್ನು ಅಕ್ಷರಶಃ ನೀವು ಅನುಷ್ಠಾನಗೊಳಿಸುತ್ತೀರಿ. ಇದು ಧರ್ಮಗ್ರಂಥಗಳು ಇಂದು ನಿಮಗೆ ಚಿಂತನೆಗೆ ಆಹಾರ ಒದಗಿಸುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಳು ನಿಮ್ಮನ್ನು ಸಕ್ರಿಯವಾಗಿರಿಸುತ್ತವೆ. ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ABOUT THE AUTHOR

...view details