ಕರ್ನಾಟಕ

karnataka

ETV Bharat / spiritual

ಶನಿವಾರದ ಪಂಚಾಂಗ, ರಾಶಿ ಭವಿಷ್ಯ: ಇಂದು ಸಿಗಲಿದೆ ಅನಿರೀಕ್ಷಿತ ಶುಭ ಸುದ್ದಿ - Daily horoscope - DAILY HOROSCOPE

ಹೀಗಿದೆ ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ...

Etv Bharat
Etv Bharat

By ETV Bharat Karnataka Team

Published : Apr 6, 2024, 5:01 AM IST

ಇಂದಿನ ಪಂಚಾಂಗ :

6-4-2024, ಶನಿವಾರ

ಸಂವತ್ಸರ:ಶುಭಕೃತ್

ಆಯನ:ಉತ್ತರಾಯಣ

ಮಾಸ:ಫಾಲ್ಗುಣ

ಪಕ್ಷ:ಕೃಷ್ಣ

ತಿಥಿ:ದ್ವಾದಶಿ

ನಕ್ಷತ್ರ:ಸ್ತಭಿಷ

ಸೂರ್ಯೋದಯ :ಬೆಳಗ್ಗೆ6:10 ಗಂಟೆಗೆ

ಅಮೃತಕಾಲ :ಬೆಳಗ್ಗೆ6:10 ರಿಂದ 7:43 ಗಂಟೆವರೆಗೆ

ರಾಹುಕಾಲ :ಬೆಳಗ್ಗೆ9:15 ರಿಂದ 10:48 ಗಂಟೆವರೆಗೆ

ದುರ್ಮುಹೂರ್ತಂ : ಸಂಜೆ 7:46 ರಿಂದ 8:34 ಗಂಟೆವರೆಗೆ

ಸೂರ್ಯಾಸ್ತ :ಸಂಜೆ06:30 ಗಂಟೆಗೆ

ವರ್ಜ್ಯಂ :ಸಂಜೆ 6:15 ರಿಂದ 7:50 ಗಂಟೆವರೆಗೆ

ಮೇಷ:ಇಂದು ನೀವು ಅಗ್ರಾಹ್ಯ ಮತ್ತು ಅದ್ಭುತ ಕಾರ್ಯಕ್ರಮದಿಂದ ಗೊಂದಲಗೊಳ್ಳುತ್ತೀರಿ. ನೀವು ಅನಿರೀಕ್ಷಿತ ಒಳ್ಳೆಯ ಘಟನೆ ಎದುರಿಸಬಹುದು. ಆದರೆ ಅದು ನಿಮ್ಮನ್ನು ಕೆಲ ವಿಷಯಗಳ ಮೌಲ್ಯಮಾಪನಕ್ಕೆ ಪ್ರಭಾವಿಸುತ್ತದೆ. ಅಲ್ಲದೆ ನೀವು ಡೆಡ್ ಲೈನ್ ಪೂರೈಸಬೇಕಾದ ಸಮಸ್ಯೆಗಳನ್ನು ಎದುರಿಸುತ್ತೀರಿ.

ವೃಷಭ: ನಿಮ್ಮ ಮಿತ್ರರು ಮತ್ತು ಸಹ-ಕೆಲಸಗಾರರ ನಿರಾಸೆ ಮತ್ತು ಕಿರಿಕಿರಿಯಿಂದ ನೀವು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಹಾಗೂ ಅಹಂ ಭಾವನೆ ಅನುಭವಿಸುತ್ತೀರಿ. ನಿಮ್ಮ ಅತಿಯಾದ ರಕ್ಷಣೆಯ ವರ್ತನೆ ಯಾರನ್ನಾದರೂ ಮನರಂಜಿಸುತ್ತದೆ.

ಮಿಥುನ: ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿಗಳಿಗೆ ಶಕ್ತಿ ತುಂಬಲು ಸಂತೋಷದ ಪ್ರವಾಸ ಕಾಯುತ್ತಿದೆ. ನಿಮ್ಮ ಸುತ್ತಲಿನವರ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಇಷ್ಟಪಟ್ಟರೆ, ಮುಂದಡಿ ಇಡುತ್ತೀರಿ.

ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತು ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ: ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಆನಂದದ ಸುದ್ದಿ ಇದೆ: ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನೈಜವಾಗಿದೆ, ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ.

ಕನ್ಯಾ: ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದಲ್ಲಿ ಆಸ್ವಾದದಿಂದ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.

ತುಲಾ: ಅತ್ಯಂತ ಪ್ರಭಾವಿ ಗೆಳೆಯ ನಿಮಗೆ ಅದೃಷ್ಟ ತರುತ್ತಾನೆ. ನೀವು ಯಾವುದೇ ಅಡೆತಡೆಗಳಿಲ್ಲದೆ ಹೊಸ ಜಂಟಿ ಸಹಯೋಗದ ಉದ್ಯಮ ಪ್ರಾರಂಭಿಸುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ದೊರೆಯುತ್ತದೆ.

ವೃಶ್ಚಿಕ: ಇಲ್ಲಿಯವರೆಗೂ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಮ್ಯಾನೇಜರ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ದಿನದ ಅಂತ್ಯಕ್ಕೆ ಎಲ್ಲವನ್ನೂ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಹುಡುಕುತ್ತಾರೆ.

ಧನು: ಉಜ್ವಲ ಮತ್ತು ಸುಂದರ ವಿಷಯಗಳ ಭಾಗವಾಗುವುದು ನಿಮ್ಮನ್ನು ಎತ್ತರದಲ್ಲಿರಿಸುತ್ತದೆ. ನೀವು ಚಳವಳಿಗಾರರಾಗುತ್ತೀರಿ ಮತ್ತು ಸರಿಯಾದ ಸ್ಫೂರ್ತಿಯಿಂದ ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ಮಾಡುತ್ತೀರಿ.

ಮಕರ: ನಿಮ್ಮ ಕೆಲಸವಾಗಲು ಅತ್ತಿಂದ ಇತ್ತ ಓಡಾಡಿದ ನಂತರ ನೀವು ಕುಳಿತು ಭವಿಷ್ಯದ ಕಾರ್ಯಯೋಜನೆ ರೂಪಿಸಲು ದಿನ ಕಳೆಯುತ್ತೀರಿ. ದಿಢೀರ್ ಲಾಭಗಳನ್ನು ನಿರೀಕ್ಷಿಸಬಹುದು. ಆದರೆ ಆ ಲಾಭಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು.

ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು. ಕೆಲಸದಲ್ಲಿ ನಿಮ್ಮ ಉದಾರ ಸ್ಫೂರ್ತಿ ನೀವು ಈಗಾಗಲೇ ಪಡೆದಿರುವ ಸದಾಶಯಕ್ಕೆ ಸೇರ್ಪಡೆಯಾಗುತ್ತದೆ.

ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಗಳನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ಜುಗ್ಗರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಒತ್ತಡ ತರುತ್ತದೆ. ಆದಾಗ್ಯೂ, ಅದು ತುರ್ತಾಗುತ್ತದೆ, ಅದಕ್ಕೆ ಆದ್ಯತೆ ನೀಡಬೇಕು.

ಇದನ್ನೂ ಓದಿ:ಉದ್ಯೋಗಸ್ಥರಿಗೆ ಶುಭ, ವ್ಯವಹಾರಸ್ಥರಿಗೆ ಯಶಸ್ಸು: ಹೀಗಿದೆ ವಾರದ ರಾಶಿ ಭವಿಷ್ಯ - Weekly Horoscope

ABOUT THE AUTHOR

...view details