ನವದೆಹಲಿ:ಕಳೆದ 70 ವರ್ಷದ ಇತಿಹಾಸದಲ್ಲಿ ಭಾರತದಲ್ಲಿ ಉತ್ತರ ಚಳಿಗಾಲದ ಮಾರುತವು ಈ ವರ್ಷ ಬಹಳ ತಡವಾಗಿ ಆಗಮಿಸಿದೆ. ಈ ಮಾರುತದ ವಿಳಂಬದಿಂದ ಈ ಬಾರಿ ಹೆಚ್ಚಿನ ಪ್ರವಾಹ ಎದುರಾಗುವ ಅಪಾಯ ಮತ್ತು ಲಕ್ಷಾಂತರ ಜನರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನದಲ್ಲಿ ಕಂಡು ಬಂದಿದೆ. ಕಾಶ್ಮೀರದ ಕೆಲವು ಪ್ರದೇಶಗಳು ಡಿಸೆಂಬರ್ ಅಥವಾ ಜನವರಿಯಲ್ಲಿ ಯಾವುದೇ ಹಿಮವನ್ನು ಕಂಡಿಲ್ಲ. ಈ ಹವಾಮಾನ ಬದಲಾವಣೆಯೂ ನೀರಿನ ಪೂರೈಕೆಗೆ ಚಳಿಗಾಲದ ಹಿಮದ ಮೇಲೆ ಅವಲಂಬಿತರಾಗಿರುವ ಹಿಂದೂ ಮತ್ತು ಗಂಗಾ ನದಿ ಬಯಲಿನ ಪ್ರದೇಶದ 750 ಮಿಲಿಯನ್ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಅಧ್ಯಯನದ ಸಹ ಲೇಖಕ ಕೀರನ್ ಹಂಟ್ ತಿಳಿಸಿದ್ದಾರೆ. ಈ ಅಧ್ಯಯನವು ವೆದರ್ ಅಂಡ್ ಕ್ಲೈಮೆಟ್ ಡೈನಾಮಿಕ್ಸ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ಚಳಿಗಾಲದ ಹಿಮದ ನಷ್ಟ ಮತ್ತು ತಡವಾದ ಋತುಮಾನದ ಮಾರುತವು ಪ್ರವಾಹದ ಅಪಾಯವನ್ನು ಸೂಚಿಸಿದೆ. ಈ ಸೂಕ್ಷ್ಮ ಪ್ರದೇಶದಲ್ಲಿನ ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸುವ ತುರ್ತು ಅಗತ್ಯವಿದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನದಲ್ಲಿ ಪಾಶ್ಚಿಮಾತ್ಯ ಅಡಚಣೆಗಳು ಎಂದು ಪರಿಚಿತವಾಗಿರುವ ಸೈಕ್ಲೋನ್ ಮಾರುತಗಳು ಏಪ್ರಿಲ್ನಿಂದ ಜುಲೈವರೆಗೆ ಬೇಸಿಗೆಯಲ್ಲಿ ಶೇ 60ರಷ್ಟು ಪ್ರಮಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ ಎಂದು ಸೂಚಿಸಿದೆ.
ಪಾಶ್ಚಿಮಾತ್ಯ ಅಡಚಣೆಗಳು ಡಿಸೆಂಬರ್ನಿಂದ ಮಾರ್ಚ್ವರೆಗೆ ಭಾರೀ ಹಿಮವನ್ನು ತರುತ್ತವೆ. ಬಳಿಕ ಈ ಹಿಮಗಳು ಕರಗಿ ಕೆಳ ಪ್ರದೇಶದಲ್ಲಿನ ಗೋಧಿ ಮತ್ತು ಇತರೆ ಬೆಳೆಗಳಿಗೆ ನೀರಿನ ಪೂರೈಕೆ ಮಾಡುತ್ತವೆ. ಆದರೆ, ಇದೀಗ ಪೂರ್ವ ಮಾನ್ಸೂನ್ ಶಾಖದ ಆಗಮನದ ಸಂದರ್ಭದಲ್ಲಿ ಕಾಣಿಸಿಕೊಂಡಿರುವ ತಡವಾದ ಋತುಮಾನದ ಮಾರುತದಿಂದ ಹಿಮ ಕರಗುವ ಸಮಯ ಬದಲಾಗಿದೆ. ಇದು ಪ್ರವಾಹದ ಅಪಾಯವನ್ನು ಹೆಚ್ಚಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.