ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ: ಸಂದೇಶ್‌ಖಾಲಿ ಹಿಂಸಾಚಾರ ಸಂತ್ರಸ್ತೆಗೆ ಟಿಕೆಟ್ ನೀಡಿದ ಬಿಜೆಪಿ - Basirhat Lok Sabha Constituency - BASIRHAT LOK SABHA CONSTITUENCY

ಸಂದೇಶ್‌ಖಾಲಿ ಹಿಂಸಾಚಾರದಲ್ಲಿ ಬದುಕುಳಿದ ಸಂತ್ರಸ್ತೆ ರೇಖಾ ಪಾತ್ರಾ ಅವರಿಗೆ ಬಸಿರ್‌ಹತ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡಿದೆ.

Etv Bharat
ಪಶ್ಚಿಮ ಬಂಗಾಳ: ಸಂದೇಶಖಾಲಿ ಹಿಂಚಾಚಾರದಲ್ಲಿ ಬದುಕುಳಿದ ಸಂತ್ರಸ್ತೆಗೆ ಬಸಿರ್‌ಹತ್‌ ಕ್ಷೇತ್ರದ ಬಿಜೆಪಿ ಟಿಕೆಟ್ ಭಾಗ್ಯ

By ANI

Published : Mar 25, 2024, 10:58 AM IST

ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಐದನೇ ಪಟ್ಟಿಯಲ್ಲಿ 111 ಅಭ್ಯರ್ಥಿಗಳ ಹೆಸರನ್ನು ಭಾನುವಾರ ಪ್ರಕಟಿಸಿದೆ. ಇದರಲ್ಲಿ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರದಲ್ಲಿ ಬದುಕುಳಿದ ಸಂತ್ರಸ್ತೆ ರೇಖಾ ಪಾತ್ರಾ ಅವರಿಗೆ ಬಸಿರ್‌ಹತ್‌ ಲೋಕಸಭಾ ಕ್ಷೇತ್ರದ ಟಿಕೆಟ್​ ನೀಡಲಾಗಿದೆ.

ಪ.ಬಂಗಾಳದ 19 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ರೇಖಾ ಪಾತ್ರಾ ಅವರು ಸಂದೇಶಖಾಲಿ ಮಹಿಳೆಯರ ಪರವಾಗಿ ಮೊದಲ ಧ್ವನಿ ಎತ್ತಿದ್ದರು. ಈ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಉಚ್ಚಾಟಿತ ಟಿಎಂಸಿ ಶಾಸಕ ಶೇಖ್ ಷಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಈಗಾಗಲೇ ಜೈಲು ಸೇರಿದ್ದಾರೆ.

ರೇಖಾ ಪಾತ್ರಾ ಪ್ರತಿಕ್ರಿಯೆ:ಬಸಿರ್‌ಹತ್‌ನಿಂದ ತಮ್ಮ ಉಮೇದುವಾರಿಕೆ ಸಲ್ಲಿಸುವ ಕುರಿತು ಮಾತನಾಡಿದ ರೇಖಾ ಪಾತ್ರಾ, "ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಸಂದೇಶಖಾಲಿ ಸಂತ್ರಸ್ತರ ಧ್ವನಿ ಕಾರ್ಯನಿರ್ವಹಿಸುತ್ತೇನೆ'' ಎಂದು ಹೇಳಿದರು.

ರೇಖಾ ಪಾತ್ರಾ ಅವರಿಗೆ ಬಿಜೆಪಿ ಟಿಕೆಟ್​ ನೀಡಿರುವುದನ್ನು ಪಕ್ಷದ ನಾಯಕ ಅಮಿತ್ ಮಾಳವೀಯ ಸ್ವಾಗತಿಸಿದ್ದಾರೆ. "ಬಿಜೆಪಿ ರೇಖಾ ಪಾತ್ರಾ ಅವರನ್ನು ಬಂಗಾಳದ ಬಸಿರ್‌ಹತ್‌ನಿಂದ ಕಣಕ್ಕಿಳಿಸಿದೆ. ಸಂದೇಶಖಾಲಿ ಹಿಂಸಾಚಾರದಲ್ಲಿ ಈ ಸಂತ್ರಸ್ತ ಮಹಿಳೆ ಬದುಕುಳಿದ್ದರು. ಮಮತಾ ಬ್ಯಾನರ್ಜಿ ಅವರು ಮತ ಕೇಳುವ ಮೊದಲು ಮೌನದಲ್ಲಿ ನರಳುತ್ತಿರುವ ಮಹಿಳೆಯರ ಕಣ್ಣೀರು ಒರೆಸಲಿ. ಬಿಜೆಪಿಯು ಸಂದೇಶಖಾಲಿ ಮತ್ತು ಬಂಗಾಳದ ಮಹಿಳೆಯರೊಂದಿಗೆ ಪರವಾಗಿ ನಿಂತಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಖಾಡದಲ್ಲಿ ನಿವೃತ್ತ ನ್ಯಾಯಮೂರ್ತಿ:ಇದರಜೊತೆಗೆ ಕೋಲ್ಕತ್ತಾ ಹೈಕೋರ್ಟ್‌ನಿಂದ ಇತ್ತೀಚೆಗೆ ನಿವೃತ್ತರಾದ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ತಮ್ಲುಕ್‌ನಿಂದ ಬಿಜೆಪಿ ಟಿಕೆಟ್ ನೀಡಿದೆ.

ಪಶ್ಚಿಮ ಬಂಗಾಳದ 42 ಸಂಸದೀಯ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿವೆ. ಏಪ್ರಿಲ್ 19 ರಂದು ಮತದಾನ ಪ್ರಾರಂಭವಾಗಿ ಜೂನ್ 1ರಂದು ಮುಕ್ತಾಯಗೊಳ್ಳಲಿದೆ. ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಇದನ್ನೂ ಓದಿ:ಬಿಜೆಪಿ ಸೇರಿದ ಕೈಗಾರಿಕೋದ್ಯಮಿ ನವೀನ್ ಜಿಂದಾಲ್‌ಗೆ ಕುರುಕ್ಷೇತ್ರದಿಂದ ಬಿಜೆಪಿ ಟಿಕೆಟ್ - Naveen Jindal

ABOUT THE AUTHOR

...view details