ಕರ್ನಾಟಕ

karnataka

ಭುವನೇಶ್ವರದ ಕೊಳೆಗೇರಿ ನಿವಾಸಿಗಳ ಜೊತೆ ಮೋದಿ ಮಾತು: 'ಸುಭದ್ರ' ಸೇರಿ ಹಲವು ಯೋಜನೆಗಳಿಗೆ ಚಾಲನೆ - PM Modi In Odisha

By PTI

Published : Sep 17, 2024, 2:07 PM IST

ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಪ್ರಧಾನ ಮಂತ್ರಿ ಆವಾಸ್​-ನಗರ ಯೋಜನೆಯ ಫಲಾನುಭವಿಗಳು ಪ್ರಧಾನಿ ಮೋದಿ ಅವರ ಹಣೆಗೆ ತಿಲಕ ಹಚ್ಚಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

pm-modi-interacts-with-pmay-beneficiaries-in-bhubaneswar-slum
ಪ್ರಧಾನಿ ಮೋದಿ (ಸಂಗ್ರಹ ಚಿತ್ರ) (ANI)

ಭುವನೇಶ್ವರ್​​: ಪಿಎಂಎವೈ-ನಗರ ಯೋಜನೆಯ ಫಲಾನುಭವಿಗಳ ಗೃಹ ಪ್ರವೇಶ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾದರು. ಇಂದು ಒಡಿಶಾಗೆ ಭೇಟಿ ನೀಡಿರುವ ಅವರು ಭುವನೇಶ್ವರ್​ನ ಗಡಕನದಲ್ಲಿನ ಸಬರ್​ ಸಜಿ ಕೊಳೆಗೇರಿಗೆ ಭೇಟಿ ನೀಡಿ, ಫಲಾನುಭವಿಗಳೊಂದಿಗೆ 30 ನಿಮಿಷ ಸಮಯ ಕಳೆದರು. ಒಡಿಶಾ ಮುಖ್ಯಮಂತ್ರಿ ಮೋಹನ್​ ಚರಣ್​ ಮಂಜಿ ಜೊತೆಗಿದ್ದರು.

ಪ್ರಧಾನ ಮಂತ್ರಿ ಆವಾಸ್​-ನಗರ ಯೋಜನೆಯ ಫಲಾನುಭವಿಗಳು ಪ್ರಧಾನಿ ಮೋದಿ ಹಣೆಗೆ ತಿಲಕ ಹಚ್ಚಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಆರತಿ ಬೆಳಗಿ, ಸಹಿ ತಿನ್ನಿಸಿದರು. ಇದೇ ವೇಳೆ ಮೋದಿ ಅವರ 74ನೇ ಜನ್ಮದಿನದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಖೀರ್​ ಹಂಚಿ ಖುಷಿಪಟ್ಟರು.

ಸುಭದ್ರಾ ಯೋಜನೆಗೆ ಚಾಲನೆ: ಇದಾದ ಬಳಿಕ ನರೇಂದ್ರ ಮೋದಿ ಒಡಿಶಾ ಸರ್ಕಾರದ ಸುಭದ್ರಾ ಯೋಜನೆಗೆ ಚಾಲನೆ ನೀಡಿದರು. 21ರಿಂದ 60 ವರ್ಷದೊಳಗಿನ ಅರ್ಹ ಮಹಿಳಾ ಫಲಾನುಭವಿಗಳಿಗೆ ವರ್ಷಕ್ಕೆ 10,000 ರೂ. ನೀಡುವ ಯೋಜನೆ ಇದಾಗಿದೆ. ಪ್ರತಿ ವರ್ಷ ರಾಖಿ ಹುಣ್ಣಿಮೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನ (ಮಾರ್ಚ್​ 8) ಫಲಾನುಭವಿಗಳ ಖಾತೆಗೆ 5 ಸಾವಿರ ರೂ.ಯಂತೆ ಎರಡು ಕಂತಿನಲ್ಲಿ 10 ಸಾವಿರ ರೂ.ವನ್ನು ಸರ್ಕಾರ ನೀಡಲಿದೆ.

ಕಳೆದ ಸೆಪ್ಟೆಂಬರ್​ 14ರಂದು ಯೋಜನೆಯನ್ನು ಒಡಿಶಾ ಸಚಿವ ಸಂಪುಟ ಅಂಗೀಕರಿಸಿತ್ತು. 2024-25ರಿಂದ 2028-29ರವರೆಗೆ ಐದು ವರ್ಷಗಳ ಕಾಲ ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲಿದ್ದಾರೆ. 1 ಕೋಟಿ ಮಹಿಳೆಯರನ್ನು ಯೋಜನೆ ತಲುಪುವ ಅಂದಾಜಿದೆ.

ಹಲವು ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ: ಭುವನೇಶ್ವರದಲ್ಲಿ 3,800 ಕೋಟಿ ರೂ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗೆ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಾಷ್ಟ್ರೀಯ ರೈಲ್ವೆ ಯೋಜನೆಯ 2,800 ಕೋಟಿ ರೂ ವೆಚ್ಚದ ಯೋಜನೆಗೂ ಶಂಕುಸ್ಥಾಪನೆ ಮಾಡುವರು. ನಂತರ, 1,000 ಕೋಟಿ ರೂ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗೂ ಶಂಕುಸ್ಥಾಪನೆ ಮಾಡಲಿದ್ದಾರೆ.

ಇದನ್ನೂ ಓದಿ: 74ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಷ್ಟ್ರಪತಿ, ವಿವಿಧ ರಾಜಕೀಯ ಪಕ್ಷಗಳ ನಾಯಕರಿಂದ ಶುಭಾಶಯ

ABOUT THE AUTHOR

...view details