ಕರ್ನಾಟಕ

karnataka

ಬಿಜೆಪಿ ಸೇರ್ಪಡೆಗೆ ತೀರ್ಮಾನಿಸಿದ ಜಾರ್ಖಂಡ್​​​​ ಮಾಜಿ ಸಿಎಂ ಚಂಪೈ ಸೊರೆನ್​: INDIA ಒಕ್ಕೂಟಕ್ಕೆ ಹಿನ್ನಡೆ - Champai Soren decided to join BJP

By ETV Bharat Karnataka Team

Published : Aug 27, 2024, 7:45 AM IST

ಚಂಪೈ ಸೊರೆನ್​ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ. ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದು ಜಾರ್ಖಂಡ್ ಮುಕ್ತಿ ಮೋರ್ಚಾಗೆ ದೊಡ್ಡ ಹೊಡೆತವಾಗಿದೆ.

champai-soren-to-join-bjp
ಬಿಜೆಪಿ ಸೇರ್ಪಡೆಗೆ ತೀರ್ಮಾನಿಸಿದ ಜಾರ್ಖಂಡ್​​​​ ಮಾಜಿ ಸಿಎಂ ಚಂಪೈ ಸೊರೆನ್​: INDIA ಒಕ್ಕೂಟಕ್ಕೆ ಹಿನ್ನಡೆ (Biswa sharma X handle)

ರಾಂಚಿ, ಜಾರ್ಖಂಡ್​:ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿಟ್ಟಿಗೆದ್ದಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೆನ್ ಆಗಸ್ಟ್ 30ರಂದು ಬಿಜೆಪಿ ಸೇರಲಿದ್ದಾರೆ. ಆಗಸ್ಟ್ 26 ರಂದು ಸಂಜೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಈ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಲ್ಲದೇ, ಚಂಪೈ ಸೊರೆನ್ ಅವರ ಪುತ್ರ ಬಾಬುಲಾಲ್ ಸೊರೆನ್ ಕೂಡ ಉಪಸ್ಥಿತರಿದ್ದರು. ಸಭೆಯ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದು, ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದು ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಇಂಡಿಯಾ ಒಕ್ಕೂಟಕ್ಕೆ ದೊಡ್ಡ ರಾಜಕೀಯ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಈ ಹಿಂದೆ ಲೋಕಸಭೆ ಚುನಾವಣೆ ವೇಳೆ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೆನ್ ಅವರ ಹಿರಿಯ ಸೊಸೆ ಸೀತಾ ಸೊರೆನ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದಲ್ಲದೇ ಕೊಲ್ಹಾನ್ ರಾಜಕೀಯದಲ್ಲಿ ಪ್ರಭಾವ ಬೀರಿದ್ದ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡ ಕೂಡ ಬಿಜೆಪಿ ಸೇರಿದ್ದರು.

ಆದಾಗ್ಯೂ, ಆಗಸ್ಟ್ 26 ರಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಂಚಿಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದರು. ಕಳೆದ 5-6 ತಿಂಗಳಿನಿಂದ ಚಂಪೈ ಸೊರೆನ್ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ಅವರು ಬಿಜೆಪಿ ಸೇರಲು ವೈಯಕ್ತಿಕವಾಗಿ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದರು. ಚಂಪೈ ಸೊರೆನ್ ಬಿಜೆಪಿಗೆ ಬರುವುದರಿಂದ ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದು ಅವರು ಆ ಸಂದರ್ಭದಲ್ಲಿ ಹೇಳಿದ್ದರು. ಈಗ ಅವರ ಬಗ್ಗೆ ರಾಜಕೀಯ ಚರ್ಚೆ ನಡೆಯಬೇಕಾದ ಸಮಯ ಬಂದಿದೆ. ಅವರ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿ ಚಂಪೈ ಸೊರೆನ್​​​ ಬಿಜೆಪಿ ಸೇರ್ಪಡೆಯ ಸಂಪೂರ್ಣ ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗಿರುವುದು ವಿಶೇಷವಾಗಿದೆ.

ಮೂಲಗಳ ಪ್ರಕಾರ, ಕೊಲ್ಹಾನ್ ಅಥವಾ ರಾಂಚಿಯಲ್ಲಿ ಚಂಪೈ ಸೊರೆನ್ ಅವರು ಪಕ್ಷವನ್ನು ಔಪಚಾರಿಕವಾಗಿ ಸೇರ್ಪಡೆಯಾಗಲಿದ್ದಾರೆ. ಈ ಅವಧಿಯಲ್ಲಿ ಬಿಜೆಪಿಯ ಹಲವು ದೊಡ್ಡ ನಾಯಕರು ಕೂಡ ಉಪಸ್ಥಿತರಿರುವ ಸಾಧ್ಯತೆ ಇದೆ. ವಾಸ್ತವವಾಗಿ, ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದಾಗಿನಿಂದ ಅವರು ಅಸಮಾಧಾನಗೊಂಡಿದ್ದರು. ಆಗಸ್ಟ್ 20ರಂದು ತಮ್ಮ ಮನದಾಳದ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮದೇ ಪಕ್ಷದಲ್ಲೇ ಅವಮಾನ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಜುಲೈ 3ರಂದೇ ಚಂಪೈ ಸೊರೆನ್​​​ ಹೇಳಿದ್ದರು. ಹೇಮಂತ್ ಸೊರೆನ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಕೂಡಾ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ನಂತರ ರಕ್ಷಾಬಂಧನದ ದಿನದಂದು ಚಂಪೈ ಸೊರೆನ್​ ದೆಹಲಿಗೆ ತೆರಳಿದ್ದರು.

ಇದನ್ನು ಓದಿ:7 ವರ್ಷಗಳ ನಂತರ ದಲಾಯಿ ಲಾಮಾ ಭೇಟಿಯಾದ 17ನೇ ಕರ್ಮಪಾ ಒಗ್ಯೆನ್ ಟ್ರಿನ್ಲೆ ದೋರ್ಜಿ - Dalai Lama

ABOUT THE AUTHOR

...view details