ಕರ್ನಾಟಕ

karnataka

ETV Bharat / bharat

ಶಂಭು ಗಡಿಯಲ್ಲಿ ಮುಷ್ಕರ ನಿರತ ರೈತರೊಂದಿಗೆ ಇಂದು ಮಧ್ಯಾಹ್ನ ಕೇಂದ್ರ ಸರ್ಕಾರ ಮಾತುಕತೆ - FARMERS PROTEST

ಕೇಂದ್ರ ಸರ್ಕಾರ ಇಂದು ರೈತರೊಂದಿಗೆ ಮಾತುಕತೆ ನಡೆಸಲಿದೆ.

ಶಂಭು ಗಡಿಯಲ್ಲಿ ಮುಷ್ಕರ ನಿರತ ರೈತರೊಂದಿಗೆ ಇಂದು ಮಧ್ಯಾಹ್ನ ಕೇಂದ್ರ ಸರ್ಕಾರ ಮಾತುಕತೆ
ಶಂಭು ಗಡಿಯಲ್ಲಿ ಮುಷ್ಕರ ನಿರತ ರೈತರೊಂದಿಗೆ ಇಂದು ಮಧ್ಯಾಹ್ನ ಕೇಂದ್ರ ಸರ್ಕಾರ ಮಾತುಕತೆ (ians)

By ETV Bharat Karnataka Team

Published : Feb 14, 2025, 12:36 PM IST

ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಖಾತರಿಗಾಗಿ ಕಾನೂನು ಜಾರಿ ಮಾಡುವುದು ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಾಹ್ನ ಚಂಡೀಗಢದಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸಭೆ ನಡೆಸಲಿದೆ.

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿ ಬಿಂದುವಾದ ಶಂಭುವಿನಲ್ಲಿ ರೈತರು ಕಳೆದ ಒಂದು ವರ್ಷದಿಂದ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಒಂದು ವರ್ಷದ ಅಂಗವಾಗಿ ಗುರುವಾರ ಶಂಭುವಿನಲ್ಲಿ ರೈತರು ಮಹಾ ಪಂಚಾಯತ್ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್, ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಕಳೆದ ವರ್ಷದ ನವೆಂಬರ್ 26 ರಿಂದ ಖಾನೌರಿ ಗಡಿಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಸಂಚಾಲಕ ದಲ್ಲೆವಾಲ್ ಅವರನ್ನು ಪ್ರತಿಭಟನಾ ಸ್ಥಳ ಖನೌರಿಯಿಂದ ಚಂಡೀಗಢಕ್ಕೆ ಆಂಬ್ಯುಲೆನ್ಸ್ ಮೂಲಕ ಮಾತುಕತೆಗಾಗಿ ಕರೆದೊಯ್ಯಲಾಗುವುದು. ಕೇಂದ್ರವು ರೈತರನ್ನು ಮಾತುಕತೆಗೆ ಆಹ್ವಾನಿಸಿದ ನಂತರ ಅವರು ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದಾರೆ.

ಇಂದಿನ ಮಾತುಕತೆಗಳು ಸಂಜೆ 5 ಗಂಟೆಗೆ ನಡೆಯಲಿದ್ದವು. ಆದರೆ ರೈತರ ಒತ್ತಾಯದ ಮೇರೆಗೆ ಈಗ ಸಂಜೆ 4 ಗಂಟೆಗೆ ಮಾತುಕತೆ ಆರಂಭವಾಗಲಿವೆ. ದಲ್ಲೇವಾಲ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಸಿಧುಪುರ) ಮತ್ತು ಪಂಧೇರ್ ನೇತೃತ್ವದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ (ಕೆಎಂಎಸ್​ಸಿ) ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಬ್ಯಾನರ್ ಅಡಿ ಕಳೆದ ವರ್ಷ ಫೆಬ್ರವರಿ 13 ರಿಂದ ಶಂಭು ಮತ್ತು ಖನೌರಿ ಗಡಿಗಳಲ್ಲಿ ಕ್ಯಾಂಪ್ ಹೂಡಿವೆ.

ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳ ನಿಯೋಗವು ಜನವರಿ 19 ರಂದು ರೈತ ಮುಖಂಡರನ್ನು ಭೇಟಿಯಾಗಿ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳನ್ನು ಫೆಬ್ರವರಿ 14 ರಂದು ಅವರ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಭೆಗೆ ಆಹ್ವಾನಿಸಿದೆ.

ತಮ್ಮ ಬೇಡಿಕೆಗಳ ಬಗ್ಗೆ ಶೀಘ್ರದಲ್ಲೇ ಮಾತುಕತೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಜನವರಿ 21 ರಂದು ದೆಹಲಿಗೆ 101 ರೈತರು ನಡೆಸಲು ನಿರ್ಧರಿಸಿದ್ದ ಕಾಲ್ನಡಿಗೆ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ರೈತ ಮುಖಂಡ ಪಂಧೇರ್ ಕಳೆದ ತಿಂಗಳು ಘೋಷಿಸಿದ್ದರು.

ಇದನ್ನೂ ಓದಿ : ಕೇರಳದ ದೇವಸ್ಥಾನದಲ್ಲಿ ಆನೆ ದಾಳಿಯಿಂದ ಮೂವರ ಸಾವು; ಮೂವತ್ತಕ್ಕೂ ಅಧಿಕ ಭಕ್ತರಿಗೆ ಗಾಯ - ELEPHANT ATTACK AT KERALA TEMPLE

ABOUT THE AUTHOR

...view details