ರೈತ ದಿನ : ಹೊಲದಲ್ಲಿ ಟೊಮ್ಯಾಟೊ ಕೊಯ್ದು ಮಹಿಳಾ ಕಾಂಗ್ರೆಸ್ನಿಂದ ಕರಾಳ ದಿನಾಚರಣೆ
ಧಾರವಾಡ : ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ 'ಅನ್ನದಾತರ ಬಳಿಗೆ ಮಹಿಳಾ ಕಾಂಗ್ರೆಸ್ ನಡಿಗೆ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಮಹಿಳಾ ಘಟಕ ಸದಸ್ಯರು, ನವಲೂರ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಟೊಮ್ಯಾಟೊ ಕೀಳುವ ಮೂಲಕ ರಾಷ್ಟ್ರೀಯ ರೈತ ದಿನಾಚರಣೆಯನ್ನು ಕರಾಳ ದಿನಾಚರಣೆಯನ್ನಾಗಿ ಆಚರಿಸಿದರು.