ಕರ್ನಾಟಕ

karnataka

By

Published : Aug 22, 2019, 7:33 PM IST

ETV Bharat / videos

ಬಿಸಿಲನಾಡಿಗೆ ಮತ್ತೆ ವರುಣನ ಆಗಮನ... ರೈತರ ಮೊಗದಲ್ಲಿ ಮಂದಹಾಸ

ಕೊಪ್ಪಳದಲ್ಲಿ ಮಳೆ ಮತ್ತೆ ಪ್ರಾರಂಭವಾಗಿದೆ. ಕಳೆದ ವಾರ ಸಾಧಾರಣ ಮಳೆಯಿಂದ ನಾಲ್ಕಾರು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಬಿಸಿಲನಾಡಿನತ್ತ ಮುಖ‌ ಮಾಡಿದ್ದಾನೆ. ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆಗೆ ಜಿಲ್ಲೆಯ ಹಲವೆಡೆ ಅಲ್ಲಲ್ಲಿ ಮಳೆ ಬೀಳಲು ಶುರುವಾಯಿತು. ನಗರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರೆದಿದೆ. ಈಗ ಜಿಲ್ಲೆಯ ಯಲಬುರ್ಗಾ, ಕುಕನೂರು ತಾಲೂಕಿನ ಕೆಲವೆಡೆ ಹೆಸರು ಬೆಳೆ ಬಂದಿದ್ದು, ಕಟಾವಿಗೆ ಮಳೆಯಿಂದ‌ ಒಂದಿಷ್ಟು ಅಡ್ಡಿಯಾಗುತ್ತಿದೆ ಎನ್ನುತ್ತಾರೆ ಆ ಭಾಗದ ರೈತರು.

For All Latest Updates

ABOUT THE AUTHOR

...view details