ಕರ್ನಾಟಕ

karnataka

By

Published : Feb 25, 2021, 5:14 PM IST

ETV Bharat / videos

ಸರಳ ಸಪ್ತಪದಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 11 ಜೋಡಿಗಳು

ಕೊಪ್ಪಳ: ಧಾರ್ಮಿಕ ದತ್ತಿ ಇಲಾಖೆ ಮೂಲಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಸರಳ ಸಪ್ತಪದಿ ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಜಿಲ್ಲೆಯ ಐತಿಹಾಸಿಕ ಕನಕಗಿರಿ ಪಟ್ಟಣದಲ್ಲಿರುವ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಇಂದು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರಳ ಸಪ್ತಪದಿ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದ 11 ಜೋಡಿಗಳ ವಿವಾಹ ಕಾರ್ಯಕ್ರಮ ನೆರವೇರಿತು. ಕನಕಗಿರಿ ತಾಲೂಕಿನ 6 ಜೋಡಿ, ಕುಷ್ಟಗಿ ತಾಲೂಕಿನ 3 ಹಾಗೂ ಕೊಪ್ಪಳ ತಾಲೂಕಿನ 2 ಜೋಡಿಯು ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದರು. ಮದುವೆಗೆ ಬಂದಿದ್ದ ಅನೇಕರು ನೂತನ ವಧು ವರರನ್ನು ಹರಸಿದರು.

ABOUT THE AUTHOR

...view details