ಚುನಾವಣಾ ಅಖಾಡಕ್ಕೆ ಧುಮುಕಿದ ಖಾವಿಧಾರಿ: ಎಲ್ಲಾ ಭಕ್ತರ ಬಯಕೆ ಅಂದ್ರು ಸ್ವಾಮೀಜಿ
ಮಠದ ಭಕ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರಿಂದ ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಮೊದಲೇ ಭಕ್ತರು ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ನಂತರ ಕೆಲ ಭಕ್ತರು ಬೇಡ ಎಂದಿದ್ದರು, ಆದರೆ ಬೇಡವೆಂದವರು ಬೇರೆ ಪಕ್ಷದ ಪ್ರತಿನಿಧಿಗಳಗಾಗಿದ್ದು, ನಮ್ಮ ಸ್ಪರ್ಧೆಯಿಂದ ಅವರಿಗೆ ತೊಡಕಾಗಲಿದೆ ಎಂದು ಈ ರೀತಿ ಹೇಳಿದ್ದರು ಅನ್ನೋದು ಅರ್ಥವಾಯಿತು. ಅದಕ್ಕಾಗಿ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಜೆಡಿಎಸ್ ನಿಂದ ಸ್ಪರ್ಧಿಸುತ್ತಿರುವುದಾಗಿ ಕಬ್ಬಿಣಕಂಥಿಮಠದ ಶಿವಲಿಂಗ ಶ್ರೀಗಳು ತಿಳಿಸಿದ್ದಾರೆ.