ಕರ್ನಾಟಕ

karnataka

By

Published : Feb 17, 2020, 7:03 PM IST

ETV Bharat / videos

ನೆರೆ ಪರಿಹಾರಕ್ಕೆ ಆಗ್ರಹ: ಡಿಸಿ ಕಚೇರಿ ಮುಂದೆಯೇ ರೊಟ್ಟಿ ತಿಂದು ರೈತರ ಪ್ರತಿಭಟನೆ

ಹಾವೇರಿ: ಸೂಕ್ತ ಪರಿಹಾರ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ನೆರೆ ಸಂತ್ರಸ್ತರು ಮತ್ತು ರೈತರು ಪ್ರತಿಭಟನೆ ನಡೆಸಿದರು. ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಸರ್ಕಾರ ನೆರೆ ಸಂತ್ರಸ್ತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ನೆರೆ ಸಂತ್ರಸ್ತರಿಗೆ ಈ ಕೂಡಲೇ ಪರಿಹಾರ ಹಣ ವಿತರಿಸಬೇಕೆಂದು ಒತ್ತಾಯಿಸಿದರು. ಇದೇ ವೇಳೆ ತಮ್ಮ ತಮ್ಮ ಮನೆಗಳಿಂದ ತಂದಿದ್ದ ಜೋಳದ ರೊಟ್ಟಿಗಳನ್ನು ಜಿಲ್ಲಾಡಳಿತ ಕಚೇರಿ ಮುಂದೆಯೇ ತಿಂದು ಪ್ರತಿಭಟನೆ ಮುಂದುವರೆಸಿದರು.

ABOUT THE AUTHOR

...view details