ಬಿಜೆಪಿ ಉಪಚುನಾವಣೆ ಗೆಲುವು ಅಭ್ಯರ್ಥಿ ಆಯ್ಕೆ ಮೇಲೆ ನಿಂತಿದೆ: ಶಾಸಕ ವಿರೂಪಾಕ್ಷಪ್ಪ
ಅನರ್ಹ ಶಾಸಕರ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಬಿಜೆಪಿ ಗೆಲುವು ಮತ್ತು ಸೋಲು ಅಭ್ಯರ್ಥಿಗಳ ಆಯ್ಕೆ ನಂತರ ನಿರ್ಧಾರವಾಗುತ್ತೆ ಎಂದು ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಸಿಎಂ ಯಡಿಯೂರಪ್ಪ ಅವರ ವಿಡಿಯೋ ಪ್ರಕರಣವನ್ನು ನಾವು ಮಾಧ್ಯಮ ಮುಂದೆ ಮಾತನಾಡಿ ಗೊಂದಲ ಸೃಷ್ಟಿಸುವುದಿಲ್ಲ. ನಾಳೆ ಯಡಿಯೂರಪ್ಪ ಅವರು ಹಾವೇರಿ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ನಡುವೆ ಅನರ್ಹ ಶಾಸಕರ ಪ್ರಕರಣದ ತೀರ್ಪು ಸುಪ್ರೀಂಕೋರ್ಟನಿಂದ ಏನೇ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಶಾಸಕ ಬಳ್ಳಾರಿ ಸ್ಪಷ್ಟಪಡಿಸಿದರು.