ಕಾವೇರಿ ಪ್ರವಾಹಕ್ಕೆ ಕೊಳ್ಳೇಗಾಲದ ಮತ್ತೆರಡು ಗ್ರಾಮಗಳು ಜಲಾವೃತ.. ಊರು ತೊರೆದ ಗ್ರಾಮಸ್ಥರು
ಕಾವೇರಿ ಆರ್ಭಟಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹರಳೆ ಮತ್ತು ಅಣಗಳ್ಳಿ ಗ್ರಾಮಗಳು ಜಲಾವೃತವಾಗಿವೆ. ಕಬಿನಿ, ಕೆಆರ್ಎಸ್ ನೀರಿನ ಹೊರ ಹರಿವಿನಿಂದ ಭಾನುವಾರ ದಾಸನಪುರ ಗ್ರಾಮ ಮುಳುಗಡೆಯಾಗಿತ್ತು. ಇದೀಗ ಅಣಗಳ್ಳಿ ಕೂಡ ಜಲಾವೃತವಾಗಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.