ಕರ್ನಾಟಕ

karnataka

By

Published : Mar 19, 2022, 5:25 PM IST

Updated : Feb 3, 2023, 8:20 PM IST

ETV Bharat / videos

'ಪುನೀತ್ ಸರ್​​ ನಮ್ಮ ಹೃದಯಲ್ಲಿದ್ದಾರೆ, ಅವರು ನಮ್ಮಿಂದ ದೂರ ಹೋಗಲು ಸಾಧ್ಯವಿಲ್ಲ': ಜೂ. ಎನ್​ಟಿಆರ್​

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆರ್​​ಆರ್​ಆರ್'​​ ಮಾರ್ಚ್​ 25ರಂದು ರಿಲೀಸ್​ ಆಗಲಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುಂಚಿತವಾಗಿ ದೇವನಹಳ್ಳಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಭಾಗಿಯಾಯಿತು. ಈ ವೇಳೆ ವರದಿಗಾರರೊಬ್ಬರು ಪುನೀತ್​ ರಾಜ್​ಕುಮಾರ್ ವಿಚಾರವಾಗಿ ಪ್ರಶ್ನೆ ಕೇಳಿದ್ದು, ಇದಕ್ಕೆ ಜೂನಿಯರ್ ಎನ್​ಟಿಆರ್​ ಉತ್ತರ ನೀಡಿದ್ದಾರೆ. 'ಪುನೀತ್​ ಸರ್​ ನಮ್ಮಿಂದ ದೂರ ಹೋಗಿಲ್ಲ, ಅವರು ನಮ್ಮೊಂದಿಗೆ ಇದ್ದಾರೆ. ಅವರೊಬ್ಬ​ ಸೆಲೆಬ್ರೆಟಿ. ಯಾವಾಗಲೂ ನಮ್ಮ ಹೃದಯಲ್ಲಿರುತ್ತಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲೂ ಅವರು ನಮ್ಮ ಜೊತೆ ಇರಲಿದ್ದು, ಆಶೀರ್ವಾದ ಮಾಡಲಿದ್ದಾರೆ ಎಂದರು.
Last Updated : Feb 3, 2023, 8:20 PM IST

ABOUT THE AUTHOR

...view details